ಆ್ಯಪ್ನಗರ

ಮುಗದದಲ್ಲಿ ನಾನಾ ಕಾಮಗಾರಿಗೆ ಚಾಲನೆ

ಧಾರವಾಡ: ಮುಗದ ಗ್ರಾಮದಲ್ಲಿವಿಪ ಸದಸ್ಯ ಬಸವರಾಜ ಹೊರಟ್ಟಿಯವರ 25 ಲಕ್ಷ ರೂ. ಅನುದಾನದಡಿಯ ರಸ್ತೆ ಕಾಮಗಾರಿ, ಧಾರವಾಡ ರೋಟರಿ ಕ್ಲಬ್‌ನಿಂದ ಹನಮಂತಪ್ಪ ಮಾವಳೇಕರ ಪ್ರೌಢಶಾಲೆಗೆ ನೀಡಿದ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಶೌಚಾಲಯಕ್ಕೆ ಶಾಸಕ ಸಿ.ಎಂ. ನಿಂಬಣ್ಣವರ ಇತ್ತೀಚೆಗೆ ಚಾಲನೆ ನೀಡಿದರು.

Vijaya Karnataka 28 May 2020, 5:00 am
ಧಾರವಾಡ: ಮುಗದ ಗ್ರಾಮದಲ್ಲಿವಿಪ ಸದಸ್ಯ ಬಸವರಾಜ ಹೊರಟ್ಟಿಯವರ 25 ಲಕ್ಷ ರೂ. ಅನುದಾನದಡಿಯ ರಸ್ತೆ ಕಾಮಗಾರಿ, ಧಾರವಾಡ ರೋಟರಿ ಕ್ಲಬ್‌ನಿಂದ ಹನಮಂತಪ್ಪ ಮಾವಳೇಕರ ಪ್ರೌಢಶಾಲೆಗೆ ನೀಡಿದ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಶೌಚಾಲಯಕ್ಕೆ ಶಾಸಕ ಸಿ.ಎಂ. ನಿಂಬಣ್ಣವರ ಇತ್ತೀಚೆಗೆ ಚಾಲನೆ ನೀಡಿದರು.
Vijaya Karnataka Web drive to nana works
ಮುಗದದಲ್ಲಿ ನಾನಾ ಕಾಮಗಾರಿಗೆ ಚಾಲನೆ


ಬಸವರಾಜ ಹೊರಟ್ಟಿ ಮಾತನಾಡಿ, ಪ್ರೌಢಶಾಲೆ ಸ್ಥಾಪನೆಗಾಗಿ ಅಂದು ಗ್ರಾಮೀಣ ಮಕ್ಕಳ ಶಿಕ್ಷಣ ಬೆಳವಣಿಗೆಗಾಗಿ ಭೂದಾನ ಮಾಡಿದ ಹನಮಂತಪ್ಪ ಮಾವಳೇಕರ ಅವರ ಶೈಕ್ಷಣಿಕ ಆಶೋತ್ತರಗಳನ್ನು ಈಡೇರಿಸಲು ಪ್ರಯತ್ನಿಸುತ್ತೇನೆ. ಗ್ರಾಮೀಣ ಭಾಗದ ಮಕ್ಕಳ ಅಭಿವೃದ್ಧಿಯೇ ನನ್ನ ಕನಸು ಎಂದರು.

ರೋಟರಿ ಕ್ಲಬ್‌ನ ಅಧ್ಯಕ್ಷ ಡಾ.ಕವನ ದೇಶಪಾಂಡೆ ಮಾತನಾಡಿ, ರೋಟರಿ ಕ್ಲಬಿನಿಂದ ಶುದ್ಧ ನೀರಿನ ಘಟಕ ಹಾಗೂ ಶೌಚಾಲಯ ಕಟ್ಟಿಸಿ ಕೊಡುವುದಾಗಿ ಭರವಸೆ ನೀಡಿದರು. ಗ್ರಾಮಸ್ಥರಾದ ಕಲ್ಲಪ್ಪ ಹಟ್ಟಿ, ಬಸವರಾಜ ಕಲಕೇರಿ, ರುದ್ರಪ್ಪ ಕೊಂಪಣ್ಣವರ, ಕಲ್ಲಪ್ಪ ಹಟ್ಟಿ, ರವಿ ಕಸಮಳಗಿ, ನೀಲವ್ವ ಅಕ್ಕಿ ಇತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ