ಆ್ಯಪ್ನಗರ

ಖಾಲಿ ಚಕ್ಕಡಿ ಗಾಡಾ ಓಡಿಸುವ ಸ್ಪರ್ಧೆಗೆ ಚಾಲನೆ

ಕುಂದಗೋಳ :ಸ್ಪರ್ಧೆಗಳಿಗಾಗಿ ಬಳಸುವ ಎತ್ತುಗಳಿಗೆ ರೈತರು ಪೌಷ್ಟಿಕ ಆಹಾರ ನೀಡಿ ಉತ್ತೇಜಿಸಬೇಕು ಎಂದು ಪಟ್ಟಣದ ಕಲ್ಯಾಣಪುರ ಬಸವಣ್ಣಜ್ಜನವರು ಹೇಳಿದರು.

Vijaya Karnataka 28 Mar 2019, 5:00 am
ಕುಂದಗೋಳ :ಸ್ಪರ್ಧೆಗಳಿಗಾಗಿ ಬಳಸುವ ಎತ್ತುಗಳಿಗೆ ರೈತರು ಪೌಷ್ಟಿಕ ಆಹಾರ ನೀಡಿ ಉತ್ತೇಜಿಸಬೇಕು ಎಂದು ಪಟ್ಟಣದ ಕಲ್ಯಾಣಪುರ ಬಸವಣ್ಣಜ್ಜನವರು ಹೇಳಿದರು.
Vijaya Karnataka Web DRW-27KND2
ಕುಂದಗೋಳ ಪಟ್ಟಣದ ಹೊರವಲಯದಲ್ಲಿ ರಾಜ್ಯಮಟ್ಟದ ಖಾಲಿ ಚಕ್ಕಡಿ ಗಾಡಾ ಓಡಿಸುವ ಸ್ಪರ್ದೆಗೆ ಕಲ್ಯಾಣಪುರ ಬಸವಣ್ಣಜ್ಜನವರು ಚಾಲನೆ ನೀಡಿದರು.


ಪಟ್ಟಣದ ಹೊರವಲಯದಲ್ಲಿನ ಲಚ್ಚಪ್ಪ ಸಂತಬಾನವರ, ಈರಪ್ಪ ಪಲ್ಲೇದ ಹಾಗೂ ರುದ್ರಪ್ಪ ಗಂಗಾಯಿ ಇವರ ಹೊಲದಲ್ಲಿ ಬುಧವಾರ ರಾಜ್ಯಮಟ್ಟದ ಖಾಲಿ ಚಕ್ಕಡಿ ಗಾಡಾ ಓಡಿಸುವ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.

ರೈತರು ತಮ್ಮ ಎತ್ತುಗಳನ್ನು ಪ್ರೀತಿಯಿಂದ ಉತ್ತಮ ಆಹಾರ ಮತ್ತು ನೀರುಕೊಟ್ಟು ಸಾಕಿದಾಗ ಮೂಕನಾದ ಬಸವಣ್ಣನೂ ರೈತನೊಂದಿಗೆ ಹೊಂದಿಕೊಳ್ಳುತ್ತಾನೆ ಎಂದರು. ಪಟ್ಟಣದ ರೈತರಾದ ರಮೇಶ ಮೊರಬದ, ಗೋವಿಂದಪ್ಪ ತಳವಾರ, ಇಸೂಫ್‌ ಚಡ್ಡಿ, ರಾಮಣ್ಣ ಬೆಳ್ಳಟ್ಟಿ ಸೇರಿದಂತೆ ಅನೇಕರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ