ಆ್ಯಪ್ನಗರ

ಭೇದಿ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮ

ಧಾರವಾಡ : ಹು-ಧಾ ಮಹಾನಗರ ಪಾಲಿಕೆಯ ಹೆರಿಗೆ ಆಸ್ಪತ್ರೆ ಆವರಣದಲ್ಲಿ ಅತಿಸಾರ ಭೇದಿಯ ತೀವ್ರತರ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮಕ್ಕೆ ಜಿಪಂ ಸಿಇಒ ಡಾ.ಬಿ.ಸಿ.ಸತೀಶ್‌ ಸೋಮವಾರ ಚಾಲನೆ ನೀಡಿದರು.

Vijaya Karnataka 4 Jun 2019, 5:00 am
ಧಾರವಾಡ : ಹು-ಧಾ ಮಹಾನಗರ ಪಾಲಿಕೆಯ ಹೆರಿಗೆ ಆಸ್ಪತ್ರೆ ಆವರಣದಲ್ಲಿ ಅತಿಸಾರ ಭೇದಿಯ ತೀವ್ರತರ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮಕ್ಕೆ ಜಿಪಂ ಸಿಇಒ ಡಾ.ಬಿ.ಸಿ.ಸತೀಶ್‌ ಸೋಮವಾರ ಚಾಲನೆ ನೀಡಿದರು.
Vijaya Karnataka Web DRW-3MAILAR09
ಧಾರವಾಡದ ಪಾಲಿಕೆಯ ಹೆರಿಗೆ ಆಸ್ಪತ್ರೆ ಆವರಣದಲ್ಲಿ ಅತಿಸಾರ ಭೇದಿಯ ತೀವ್ರತರ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮ ನಡೆಯಿತು.


ಬಳಿಕ ಜಿಲ್ಲ್ಲಾಸ್ಪತ್ರೆ ಚಿಕ್ಕ ಮಕ್ಕಳ ತಜ್ಞ ಡಾ.ಚಂದ್ರಕಾಂತ ನಾಡಗೌಡ ಮಾತನಾಡಿ, ಅತಿಸಾರ ಭೇದಿ ತೀವ್ರತರ ನಿಯಂತ್ರಣಕ್ಕಾಗಿ 5 ವರ್ಷದೊಳಗಿನ ಮಕ್ಕಳಿಗೆ ಓಆರ್‌ಎಸ್‌ ನೀಡಬೇಕು. ಭೇದಿ ಸಂದರ್ಭದಲ್ಲಿ ಆರೋಗ್ಯ ಸಹಾಯಕಿಯರಿಂದ ಝಿಂಕ್‌ ಮಾತ್ರೆಗಳನ್ನು ಪಡೆದು ಮಗುವಿಗೆ 14 ದಿನಗಳವರೆಗೆ ನೀಡಬೇಕು. ಕುದಿಸಿ ಆರಿಸಿದ ನೀರಿಗೆ ಒಂದು ಓಆರ್‌ಎಸ್‌ ಪೊಟ್ಟಣ ಹಾಕಿ ತಯಾರಿಸಿದ ಓಆರ್‌ಎಸ್‌ನ್ನು 24 ಗಂಟೆಗಳ ಅವಧಿಗೆ ಮಾತ್ರ ಉಪಯೋಗಿಸಬೇಕು ಎಂದರು.

ರೆಡಕ್ರಾಸ್‌ ಉಪಾಧ್ಯಕ್ಷ ಡಾ.ವಿ.ಡಿ.ಕರ್ಪೂರಮಠ ಮಾತನಾಡಿ, ಪೌಷ್ಟಿಕ ಆಹಾರವನ್ನು ಮಗುವಿಗೆ ಕೊಡುವಾಗ ಕೈಗಳನ್ನು ಸಾಬೂನಿನಿಂದ ಸ್ವಚ್ಛವಾಗಿ ತೊಳೆಯಬೇಕು.ಝಿಂಕ್‌ ಮಾತ್ರೆ ಉಪಯೋಗ ಮಾಡುವುದರಿಂದ ಮತ್ತೆ ಮತ್ತೆ ರೋಗ ಬರುವಿಕೆ ತಡೆಯಬಹುದು ಎಂದು ತಿಳಿಸಿದರು.

ಪ್ರಭಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಪುಷ್ಪಾ ಎಚ್‌.ಆರ್‌. ಅಧ್ಯಕ್ಷ ತೆ ವಹಿಸಿದ್ದರು. ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ.ಶಿವಕುಮಾರ್‌ ಮಾನಕರ, ಜಿಲ್ಲಾ ಸಮೀಕ್ಷ ಣಾಧಿಕಾರಿ ಡಾ.ಸುಜಾತಾ ಹಸವಿಮಠ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಶಶಿ ಪಾಟೀಲ, ಡಾ.ಶೋಭಾ ಮೂಲಿಮನಿ ಸೇರಿದಂತೆ ಇತರರು ಇದ್ದರು.ಎಂ.ಎನ್‌.ಅಗಡಿ ಸ್ವಾಗತಿಸಿದರು. ರೇಖಾ ಬಾಡಗಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ