ಆ್ಯಪ್ನಗರ

ಉದ್ಯಮದಿಂದ ಆರ್ಥಿಕ ಅಭಿವೃದ್ಧಿ

ಧಾರವಾಡ : ಪ್ರಸ್ತುತ ದಿನದಲ್ಲಿ ಮಹಿಳಾ ಉದ್ಯಮಶೀಲತೆ ಹೆಚ್ಚಾಗಿದ್ದರಿಂದ ದೇಶದಲ್ಲಿ ಆರ್ಥಿಕ ಸ್ಥಿತಿ ಬದಲಾಗುತ್ತಿದೆ ಎಂದು ರತಿ ಕ್ರೀಯೆಶನ್‌ನ ಸಂಸ್ಥಾಪಕ ರತಿ ಶ್ರೀನಿವಾಸನ್‌ ಹೇಳಿದರು.

Vijaya Karnataka 13 Mar 2019, 5:00 am
ಧಾರವಾಡ : ಪ್ರಸ್ತುತ ದಿನದಲ್ಲಿ ಮಹಿಳಾ ಉದ್ಯಮಶೀಲತೆ ಹೆಚ್ಚಾಗಿದ್ದರಿಂದ ದೇಶದಲ್ಲಿ ಆರ್ಥಿಕ ಸ್ಥಿತಿ ಬದಲಾಗುತ್ತಿದೆ ಎಂದು ರತಿ ಕ್ರೀಯೆಶನ್‌ನ ಸಂಸ್ಥಾಪಕ ರತಿ ಶ್ರೀನಿವಾಸನ್‌ ಹೇಳಿದರು.
Vijaya Karnataka Web DRW-12MAILAR07
ಧಾರವಾಡದ ಕೆಎಲ್‌ಇ ಸಂಸ್ಥೆಯ ಮೃತ್ಯುಂಜಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾಯಕ್ರಮದಲ್ಲಿ ಮಹಿಳೆಯರನ್ನು ಸನ್ಮಾನಿಸಲಾಯಿತು.


ನಗರದ ಕೆಎಲ್‌ಇ ಸಂಸ್ಥೆಯ ಮೃತ್ಯುಂಜಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾಯಕ್ರಮ ಉದ್ಘಾಟಿಸಿ ಮಾತನಾಡಿದರು.

ಉದ್ಯೋಗ ಪುರುಷ ಲಕ್ಷ ಣ ಅಷ್ಟೇ ಅಲ್ಲದೇ ಮಾನವ ಲಕ್ಷ ಣವೂ ಆಗಿದೆ. ಮಹಿಳೆಯರು ಗೃಹ ಕೃತ್ಯಗಳಿಂದ ಹೊರಬಂದು ಉದ್ಯಮದಲ್ಲಿ ಪಾಲ್ಗೊಳ್ಳುವದರಿಂದ ಆರ್ಥಿಕ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.

ಜಯಶೀಲಾ ಮಾತನಾಡಿ, ಕೆಲಸ ಸಣ್ಣದಾಗಲಿ-ದೊಡ್ಡದಾಗದಲಿ ಕಲಿಯುವ ಮನಸ್ಸು ಛಲ, ಶ್ರದ್ಧೆ, ನಂಬಿಕೆ, ದೃಢ ಮನಸ್ಸು ಇರಬೇಕು. ಈ ಗುಣಗಳನ್ನು ಮಹಿಳೆ ಅಳವಡಿಸಿಕೊಂಡು ಸಾಧನೆ ಮಾಡಬೇಕು. ಅದರೊಂದಿಗೆ ಸಮಾಜದಲ್ಲಿ ಸಹಾಯ ಮಾಡುವ ಗುಣವನ್ನು ಮಹಿಳೆ ಬೆಳೆಸಿಕೊಳ್ಳಬೇಕು ಎಂದರು.

ಅಧ್ಯಕ್ಷ ತೆ ವಹಿಸಿದ್ದ ಪ್ರೊ.ವಿ.ವಿ.ಪಾಟೀಲ ಹಾಗೂ ಡಾ.ವಿ.ಬಿ.ಹೆಬ್ಬಳ್ಳಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಪ್ರೊ.ಶಿಲ್ಪಾ ಕೊಂಗಿ, ಪ್ರೊ.ಆಶಾ ನಿಡವಣಿ, ಡಾ.ತಾರಾ ಬಿ.ಎನ್‌, ಪ್ರೊ.ಆರ್‌.ಸಿ.ಉಮರಾಣಿ, ಪ್ರೊ.ಶ್ರೀದೇವಿ ಸಂಗೊಳ್ಳಿ, ಪ್ರೊ.ಸೌಮ್ಯಾ ಕುಬೇರ, ಪ್ರೊ.ವನಜಾ ನಾಯಕ, ಪ್ರೊ.ಸಂಜನಾ ಹೋಳಿಮಠ, ಪ್ರೊ.ಶಿವಲೀಲ ಬೆಟಗೇರಿ, ಪ್ರೊ.ಬಿ.ಡಿ.ಮಠಪತಿ ಇತರರು ಉಪಸ್ಥಿತರಿದ್ದರು. ಪ್ರೊ.ವಿದ್ಯಾ ಭಟ್‌ ಪ್ರಾಥಿಸಿದರು. ಡಾ.ಅನುರಾಧಾ ಸ್ವಾಗತಿಸಿದರು. ಪ್ರೊ.ಶಶಾಂಕ ಹಾದಿಮನಿ ನಿರೂಪಿಸಿದರು. ಪ್ರೊ.ಶಿವಲೀಲಾ ಬೆಟಗೇರಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ