ಆ್ಯಪ್ನಗರ

ಮಕ್ಕಳಿಗೆ ಇಷ್ಟವಾದ ಶಿಕ್ಷಣ ಕೊಡಿಸಿ

ಧಾರವಾಡ: ಪಾಲಕರು ತಮ್ಮ ಇಚ್ಚೆಯಂತೆ ಮಕ್ಕಳು ಶಿಕ್ಷಣ ಪಡೆಯಬೇಕೆಂಬ ಒತ್ತಾಯವನ್ನು ಮಕ್ಕಳ ಮೇಲೆ ಹೇರದೆ. ಮಕ್ಕಳು ಜೀವನದಲ್ಲಿಏನು ಆಗಬೇಕು ಎಂದು ಬಯಸುತ್ತಾರೋ ತಿಳಿದು, ಅವರಿಗೆ ಪ್ರೋತ್ಸಾಹ ಹಾಗೂ ಪೂರಕ ಶಿಕ್ಷಣ ಕೊಡಿಸಬೇಕು ಎಂದು ಕೃಷಿ ವಿಶ್ವವಿದ್ಯಾಲಯದ ಬೇಸಾಯ ವಿಜ್ಞಾನ ವಿಭಾಗದ ಪ್ರಾಧ್ಯಾಪ ಡಾ. ಚಿದಾನಂದ ಮನ್ಸೂರ ಅಭಿಪ್ರಾಯಪಟ್ಟರು.

Vijaya Karnataka 11 Sep 2019, 5:59 pm
ಧಾರವಾಡ: ಪಾಲಕರು ತಮ್ಮ ಇಚ್ಚೆಯಂತೆ ಮಕ್ಕಳು ಶಿಕ್ಷಣ ಪಡೆಯಬೇಕೆಂಬ ಒತ್ತಾಯವನ್ನು ಮಕ್ಕಳ ಮೇಲೆ ಹೇರದೆ. ಮಕ್ಕಳು ಜೀವನದಲ್ಲಿಏನು ಆಗಬೇಕು ಎಂದು ಬಯಸುತ್ತಾರೋ ತಿಳಿದು, ಅವರಿಗೆ ಪ್ರೋತ್ಸಾಹ ಹಾಗೂ ಪೂರಕ ಶಿಕ್ಷಣ ಕೊಡಿಸಬೇಕು ಎಂದು ಕೃಷಿ ವಿಶ್ವವಿದ್ಯಾಲಯದ ಬೇಸಾಯ ವಿಜ್ಞಾನ ವಿಭಾಗದ ಪ್ರಾಧ್ಯಾಪ ಡಾ. ಚಿದಾನಂದ ಮನ್ಸೂರ ಅಭಿಪ್ರಾಯಪಟ್ಟರು.
Vijaya Karnataka Web educate children
ಮಕ್ಕಳಿಗೆ ಇಷ್ಟವಾದ ಶಿಕ್ಷಣ ಕೊಡಿಸಿ


ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಸಂಜಯ ಮತ್ತು ಪ್ರಿಯಾ ಆರ್‌. ಹೊರಡಿ ನೆನಪಿನ ದತ್ತಿ ಅಂಗವಾಗಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭ ಹಾಗೂ ಉಪನ್ಯಾಸ ಕಾರ್ಯಕ್ರಮದಲ್ಲಿಸೋಮವಾರ ಉಪನ್ಯಾಸ ನೀಡಿ ಮಾತನಾಡಿದರು.

ಸಂಘದ ಉಪಾಧ್ಯಕ್ಷ ನಿಂಗಣ್ಣ ಕುಂಟಿ (ಇಟಗಿ) ಅಧ್ಯಕ್ಷತೆ ವಹಿಸಿ ಮಾತನಾಡಿದರು. ದತ್ತಿದಾನಿಗಳಾದ ಪ್ರೊ. ಆರ್‌. ವಿ. ಹೊರಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಇದೇ ವೇಳೆ ಪ್ರತಿಭಾ ಪುರಸ್ಕಾರಕ್ಕೆ ಭಾಜನರಾದ ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯದಲ್ಲಿಓದಿ ಹೆಚ್ಚು ಅಂಕ ಪಡೆದ ರಾಮಸಿದ್ಧಪ್ಪ ಬಿ. ಕಾರಗಿ ಹಾಗೂ ದುರ್ಗವ್ವ ದೇವಿಹೊಸೂರ ಅವರನ್ನು ಅಭಿನಂದಿಸಲಾಯಿತು.

ಶಿವಣ್ಣ ಬೆಲ್ಲದ, ಪ್ರಭಾವತಿ ಆರ್‌. ಹೊರಡಿ ,ವೆಂಕಟೇಶ ಮಾಚಕನೂರ, ಪ್ರಾ. ಎನ್‌. ಆರ್‌. ಬಾಳಿಕಾಯಿ, ಕರಿಸಿದ್ದಪ್ಪ ಗೋರಪ್ಪನವರ, ಚನಬಸಪ್ಪ ಅವರಾದಿ, ಹಿರೇಮಠ ಹಾಗೂ ಸದಾನಂದ ಶಿವಳ್ಳಿ, ಬಸವಪ್ರಭು ಹೊಸಕೇರಿ, ಶಾಂತೇಶ ಗಾಮನಗಟ್ಟಿ ಸೇರಿದಂತೆ ಇತರರು ಇದ್ದರು. ಪ್ರಕಾಶ ಎಸ್‌. ಉಡಿಕೇರಿ ಸ್ವಾಗತಿಸಿದರು. ಶಿವಾನಂದ ಭಾವಿಕಟ್ಟಿ ನಿರ್ವಹಿಸಿದರು. ಶಂಕರ ಕುಂಬಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ