ಆ್ಯಪ್ನಗರ

ಬೀದಿಗೆ ಬಿದ್ದ ಶಿಕ್ಷಣ ಇಲಾಖೆ ಅಧಿಕಾರಿಗಳ ಆಂತರಿಕ ಕಲಹ; ಧಾರವಾಡದಲ್ಲಿಂದು ಬೃಹತ್ ಹೋರಾಟ

ಹುಬ್ಬಳ್ಳಿ- ಧಾರವಾಡ ಶಿಕ್ಷಣ ಹಾಗೂ ಇತರ ಇಲಾಖೆಗಳ ಪರಿಶಿಷ್ಟ ಜಾತಿ, ಪಂಗಡಗಳ ಸಮನ್ವಯ ಸಮಿತಿ ಹಾಗೂ ನಾನಾ ಸಂಘಟನೆಗಳ ನೇತೃತ್ವದಲ್ಲಿ ಸ್ವಾಭಿಮಾನ ಯಾತ್ರೆ ಹಮ್ಮಿಕೊಳ್ಳಲಾಗಿದೆ. 'ದಕ್ಷ ಅಧಿಕಾರಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತರನ್ನಾಗಿ ನಿಯುಕ್ತಗೊಳಿಸಿ' ಎಂದು ನ.26ರಂದು ಸ್ವಾಭಿಮಾನ ಯಾತ್ರೆ ಕೈಗೊಂಡು ಸರಕಾರಕ್ಕೆ ಮನವಿ ಸಲ್ಲಿಸುತ್ತಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ.

Vijaya Karnataka Web 26 Nov 2020, 9:05 am
ಧಾರವಾಡ: ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳ ಆಂತರಿಕ ಕಲಹ ಬೀದಿಗೆ ಬಿದ್ದಿದ್ದು, ಇದೀಗ ಸ್ವತಃ ಸರಕಾರವನ್ನೂ ಮುಜುಗರಕ್ಕೆ ತಳ್ಳಿದೆ.
Vijaya Karnataka Web Protest image


ಈ ಮಧ್ಯೆ 'ದಕ್ಷ ಅಧಿಕಾರಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತರನ್ನಾಗಿ ನಿಯುಕ್ತಗೊಳಿಸಿ' ಎಂದು ನ.26ರಂದು ಸ್ವಾಭಿಮಾನ ಯಾತ್ರೆ ಕೈಗೊಂಡು ಸರಕಾರಕ್ಕೆ ಮನವಿ ಸಲ್ಲಿಸುತ್ತಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ. ಹುಬ್ಬಳ್ಳಿ- ಧಾರವಾಡ ಶಿಕ್ಷಣ ಹಾಗೂ ಇತರ ಇಲಾಖೆಗಳ ಪರಿಶಿಷ್ಟ ಜಾತಿ, ಪಂಗಡಗಳ ಸಮನ್ವಯ ಸಮಿತಿ ಹಾಗೂ ನಾನಾ ಸಂಘಟನೆಗಳ ನೇತೃತ್ವದಲ್ಲಿ ಸ್ವಾಭಿಮಾನ ಯಾತ್ರೆ ಹಮ್ಮಿಕೊಳ್ಳಲಾಗಿದೆ.

ಸ್ನೇಹಿತನ ಪತ್ನಿಯ ಜೊತೆ ಚೆಲ್ಲಾಟವಾಡಿದ ಕಿರಾತಕ ಆಕೆಯ ಗಂಡನನ್ನೇ ಮುಗಿಸಿ ಬಿಟ್ಟ..!

ನ.26ರಂದು ಬೆಳಗ್ಗೆ 9.30ಕ್ಕೆ ಕಲಾಭವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಸ್ವಾಭಿಮಾನ ಯಾತ್ರೆ ತೆರಳಲಿದೆ. ನಂತರ ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಗುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತ ದೇವಾನಂದ ಮಾಲಗತ್ತಿ ಅವರು 'ವಿಕ'ಕ್ಕೆ ತಿಳಿಸಿದ್ದಾರೆ. ಸಾ.ಶಿ. ಇಲಾಖೆ ಅಪರ ಆಯುಕ್ತ ಮೇಜರ್‌ ಸಿದ್ದಲಿಂಗಯ್ಯ ಹಿರೇಮಠ ಹಾಗೂ ಅದೇ ಕಚೇರಿಯ ನಿರ್ದೇಶಕ ಬಿ.ಕೆ.ಎಸ್‌.ವರ್ಧನ್‌ ಅವರ ಆಂತರಿಕ ತಿಕ್ಕಾಟ ಇಂತಹದೊಂದು ಬೆಳವಣಿಗೆಗೆ ಕಾರಣ ಆಗಿದೆ.

ಶಿಕ್ಷಕರಿಗೆ ಸಹಾಯಧನ ನೀಡದೆ, ನಿಗಮಕ್ಕೆ 500 ಕೋಟಿ ರೂ ನೀಡಿದ್ದಕ್ಕೆ ಖಂಡನೆ

ಇಲ್ಲಿ ಹಿರೇಮಠ ಅವರ ವಿರುದ್ಧ ಬಹಿರಂಗವಾಗಿಯೇ ಅತೃಪ್ತಿ ವ್ಯಕ್ತಪಡಿಸಿರುವ ವರ್ಧನ್‌ ಅವರು ಗುರುವಾರ ಕಲಬುರಗಿಗೆ ತೆರಳಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಆದರೆ, ಅವರ ವರ್ಗಾವಣೆಗೆ ಪರೋಕ್ಷ ವಿರೋಧ ವ್ಯಕ್ತಪಡಿಸಿರುವ ನಾನಾ ಸಂಘಟನೆಗಳು ಸ್ವಾಭಿಮಾನ ಯಾತ್ರೆ ಕೈಗೊಂಡಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ