ಆ್ಯಪ್ನಗರ

ಶ್ರದ್ಧಾ ಭಕ್ತಿಯಿಂದ ಈದ್‌ ಮಿಲಾದ್‌ ಆಚರಣೆ

ಧಾರವಾಡ: ಪ್ರವಾದಿ ಮಹಮ್ಮದ ಪೈಗಂಬರ ಜನ್ಮದಿನದ ಅಂಗವಾಗಿ ಈದ ಮಿಲಾದ್‌ ಹಬ್ಬವನ್ನು ನಗರದಲ್ಲಿಮುಸ್ಲಿಂರು ಶ್ರದ್ಧಾ ಭಕ್ತಿಯಿಂದ ಭಾನುವಾರ ಆಚರಿಸಿದರು.

Vijaya Karnataka 11 Nov 2019, 5:00 am
ಧಾರವಾಡ: ಪ್ರವಾದಿ ಮಹಮ್ಮದ ಪೈಗಂಬರ ಜನ್ಮದಿನದ ಅಂಗವಾಗಿ ಈದ ಮಿಲಾದ್‌ ಹಬ್ಬವನ್ನು ನಗರದಲ್ಲಿಮುಸ್ಲಿಂರು ಶ್ರದ್ಧಾ ಭಕ್ತಿಯಿಂದ ಭಾನುವಾರ ಆಚರಿಸಿದರು.
Vijaya Karnataka Web 10SM-1F_21
ಧಾರವಾಡದಲ್ಲಿಈದ್‌ ಮಿಲಾದ್‌ ಅಂಗವಾಗಿ ಅಂಜುಮನ್‌ ಎ ಇಸ್ಲಾಂ ಸಂಸ್ಥೆ ವತಿಯಿಂದ ಮೆರವಣಿಗೆ
ನಡೆಯಿತು.


ಬೆಳಗ್ಗೆ ನಗರದ ಪ್ರಮುಖ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡ ಮುಸ್ಲಿಂರು ಹೊಸ ಬಟ್ಟೆ ಧರಿಸಿ ತಮ್ಮ ಅಂಗಡಿಗಳಲ್ಲಿಪೂಜೆ ಸಲ್ಲಿಸಿದರು. ಈ ವೇಳೆ ಯುವಕರು ನವನವೀನ ಶೈಲಿಯ ಬಟ್ಟೆ ಧರಿಸಿ ಗಮನ ಸೆಳೆದರು.

ಕೆಲವರು ಕೆಸರಿ, ಬಿಳಿ, ಹಸಿರು ಮಿಶ್ರಿತ ಬಣ್ಣದ ಬಟ್ಟೆಗಳ ಮೇಲೆ ಈದ್‌ ಮಿಲಾದ್‌ ಸಂದೇಶ ಸಾರುವ ಉರ್ದು ಅಕ್ಷರ ಬರೆಸಿ ಜನ್ನತ್‌ ನಗರ ಸೇರಿದಂತೆ ಇತರ ಭಾಗಗಳಲ್ಲಿಬೈಕ್‌ ಮೂಲಕ ಸಂಚರಿಸಿ ಸಂಭ್ರಮಿಸಿದರು.

ಸಂಜೆ ಆಗುತ್ತಿದ್ದಂತೆ ಅಂಜುಮನ್‌ ಎ ಇಸ್ಲಾಂ ಸಂಸ್ಥೆಯಿಂದ (ಇದ ಮಿಲಾದುನ್ನಬಿ) ಮಹಮ್ಮದ ಪೈಗಂಬರ ಜನ್ಮ ದಿನದ ಅಂಗವಾಗಿ ನಡೆದ ಮೆರವಣಿಗೆ (ಜುಲುಸ್‌)ಯಲ್ಲಿ ಡಿಜೆ ಇಲ್ಲದೇ ದೇವರ ನಾಮಸ್ಮರಣೆ ಮಾಡುತ್ತಾ ಸಾಗಿದ್ದು ಕಂಡುಬಂದಿತು.

ಮೆರವಣಿಗೆಯು ಅಂಜುಮನ್‌ ಸಂಸ್ಥೆಯಿಂದ ಆರಂಭವಾಗಿ ಭೂಸಪ್ಪ ಚೌಕ,ಕಾಮನಕಟ್ಟಿ, ಮಂಗಳವಾರ ಪೇಟೆ, ಹೆಬ್ಬಳ್ಳಿ ಅಗಸಿ, ಬಾರಾ ಇಮಾಮ್‌ಗಲ್ಲಿ, ರಿಗಲ್‌ ಸರ್ಕಲ್‌, ಸಿಬಿಟಿ ಸಂಚರಿಸಿ ಶಿವಾಜಿ ವೃತ್ತಕ್ಕೆ ಆಗಮಿಸಿ ಅಲ್ಲಿಂದ ಮರಳಿ ಅಂಜುಮನ್‌ ಸಂಸ್ಥೆ ತಲುಪಿ ಮುಕ್ತಾಯಗೊಂಡಿತು.

ಮೆರವಣಿಗೆಯಲ್ಲಿ ಸಮಾಜದ ಪ್ರಮುಖರಾದ ಎ. ಎ. ಅಗಸಿಮನಿ, ಡಾ.ಎನ್‌.ಬಿ.ನಲತವಾಡ, ಪ್ರೊ.ಎ. ಎಂ.ಮುಲ್ಲಾ, ಎಫ್‌.ಜೆ. ಅತ್ತಾರ, ಐ.ಎಂ.ಮುಲ್ಲಾ, ಎ.ಎ.ಹರಿಹರ, ಪ್ರೊ.ಅಬ್ದುಲ್‌ ರಷಿದ ಚಾಕುಲಿ, ಇಕಬಾಲ ಜಮಾದಾರ, ಡಾ.ಎಂ.ಎನ್‌.ಮೀರಾನಾಯಕ, ಕಿಲ್ಲೆದಾರ, ಜೆ.ಎ.ಜಾಗೀರದಾರ, ಇಸ್ಮಾಯಿಲ್‌ ತಮಾಟಗಾರ,

ಐ.ಎಂ.ಜವಳಿ, ನಜೇರ್‌ ಹುಸೇನ, ಮನಿಯಾರ, ರಫೀಕ ಅಹ್ಮದ ಶಿರಹಟ್ಟಿ, ಎಚ್‌.ಡಿ.ಶೇಖ, ಜಿ.ಡಿ. ಕವಲಗೇರಿ ಇತರರು ಇದ್ದರು.

ಹಣ್ಣು, ನೀರು ವಿತರಣೆ
ಈದ ಮಿಲಾದ್‌ ಅಂಗವಾಗಿ ವಿವೇಕಾನಂದ ವೃತ್ತದಲ್ಲಿರಾಷ್ಟ್ರೀಯ ಬಸವ ಸೇನೆ ವತಿಯಿಂದ ಹಾಲು ವಿತರಿಸಲಾಯಿತು. ಕರ್ನಾಟಕ ಸೋಸಿಯಲ್‌ ಕಮೀಟಿ ಸೇರಿದಂತೆ ಇತರ ಸಂಘ ಸಂಸ್ಥೆಗಳು ಮುಸ್ಲಿಂರಿಗೆ

ಶರಬತ್‌ ವಿತರಿಸಿದರು. ಮೆರವಣಿಗೆ ಸಾಗುವ ಮಾರ್ಗದಲ್ಲಿ ಐಸ್ಕಿ್ರಂ, ಹಣ್ಣಿನ ರಸ, ಪ್ರುಟ್‌ ಸಲಾಡ, ತಂಪು ಪಾನೀಯ ವ್ಯವಸ್ಥೆಯನ್ನು ಸಮಾಜ ಬಾಂಧವರು ಮಾಡಿದ್ದು ಕಂಡುಬಂದಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ