ಆ್ಯಪ್ನಗರ

ಉ.ಕದ 'ಮುಟ್ಠಾಳ' ಶಾಸಕರು ಬೆಂಗಳೂರಿನಲ್ಲಿ ಆಸ್ತಿ ಮಾಡಿದ್ದಾರೆ: ಕು. ವೀರಭದ್ರಪ್ಪ ಗುಡುಗು

ಉತ್ತರ ಕರ್ನಾಟಕ ಭಾಗದಿಂದ ಆರಿಸಿಹೋದ ಅನೇಕ ಮುಟ್ಠಾಳ ಶಾಸಕರು ಬೆಂಗಳೂರಿನಲ್ಲಿ ಸಿಕ್ಕಾಪಟ್ಟಿ ಆಸ್ತಿ ಮಾಡಿದ್ದಾರೆ ಎಂದು ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ ಗುಡುಗಿದ್ದಾರೆ.

Vijaya Karnataka Web 3 Oct 2018, 6:15 pm
ಧಾರವಾಡ : ಉತ್ತರ ಕರ್ನಾಟಕ ಭಾಗದಿಂದ ಆರಿಸಿಹೋದ ಅನೇಕ ಮುಟ್ಠಾಳ ಶಾಸಕರು ಬೆಂಗಳೂರಿನಲ್ಲಿ ಸಿಕ್ಕಾಪಟ್ಟಿ ಆಸ್ತಿ ಮಾಡಿದ್ದಾರೆ ಎಂದು ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ ಗುಡುಗಿದ್ದಾರೆ.
Vijaya Karnataka Web veera


ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಕರ್ನಾಟಕ ನವನಿರ್ಮಾಣ ಸೇನೆ ಹಮ್ಮಿಕೊಂಡಿದ್ದ ಪ್ರತ್ಯೇಕ ರಾಜ್ಯ ಸಾಧಕ ಬಾಧಕ ಕುರಿತು ವಿಚಾರಸಂಕಿರಣದಲ್ಲಿ ಮಾತನಾಡಿದರು.

ಈ ಭಾಗ ಹಿಂದುಳಿಯಲು ನಮ್ಮ ಭಾಗದ ಶಾಸಕರು ಕಾರಣ. ಅನೇಕ ರಸ್ತೆ, ಮನೆ ಸೇರಿದಂತೆ ವಿವಿಧ ಯೋಜನೆಗಳ ಹೆಸರಿನಲ್ಲಿ ದುಡ್ಡು ಹೊಡೆದು ಬೆಂಗಳೂರಿನ ಫೈವ್ ಸ್ಟಾರ್ ಹೋಟೆಲ್ ಗಳಲ್ಲಿ ಐಷರಾಮಿ ಜೀವನ ಕಳೆಯುತ್ತಾರೆ. ಕುಮಾರಸ್ವಾಮಿ, ಬಂಗಾರಪ್ಪ ಮಕ್ಕಳು ಸೇರಿದಂತೆ ಅನೇಕ ರಾಜಕಾರಣಿಗಳ ಮಕ್ಕಳು ವಂಶ ಪಾರಂಪರ್ಯ ರಾಜಕಾರಣಕ್ಕೆ ಬರುತ್ತಿರುವುದು ಸರಿಯಲ್ಲ. ವಿಧಾನಸಭಾ ಅವರ ಅಪ್ಪಂದಿರ ಆಸ್ತಿಯೇ ಎಂದು ಪ್ರಶ್ನಿಸಿದರು.

ಸದಾಶಿವನಗರ, ಡಾಲರ್ಸ್ ಕಾಲೋನಿ ಸೇರಿದಂತೆ ಅನೇಕ ಕಡೆ ಮನ ಬಂದಂತೆ ಆಸ್ತಿ ಮಾಡಿದ್ದಾರೆ. ಒಬ್ಬೊಬ್ಬ ಶಾಸಕರು ಹತ್ತಕ್ಕೂ ಹೆಚ್ಚು ಮನೆ ಮಾಡಿಕೊಂಡಿದ್ದಾರೆ. ಉತ್ತರ ಕರ್ನಾಟಕ ರಾಜಕಾರಣಿಗಳೇನು ಹಿಂದೆ ಬಿದ್ದಿಲ್ಲ. ನಮ್ಮ ಭಾಗ ಮಾತ್ರ ಹಿಂದುಳಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮೂರು ಪಕ್ಷಗಳ ರಾಜಕಾರಣಿಗಳ ಮಕ್ಕಳ, ಮೊಮ್ಮಕ್ಕಳು ಅವರೇ ತುಂಬಿಕೊಂಡರೆ ನಾವು ಎಲ್ಲಿಗೆ ಹೋಗಬೇಕು ಎಂದು ಸವಾಲ್ ಹಾಕಿದ ಪ್ರತ್ಯೇಕ ರಾಜ್ಯದಿಂದ ಲಾಭ ಇಲ್ಲ ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ