ಆ್ಯಪ್ನಗರ

ಪರೀಕ್ಷಾ ಭಯ ನಿವಾರಿಸಿ, ಫಲಿತಾಂಶ ಹೆಚ್ಚಿಸಿ

ಧಾರವಾಡ: ಕಲಿಕೆಯಲ್ಲಿಹಿಂದುಳಿದ ಮಕ್ಕಳು ಸಮರ್ಥವಾಗಿ ಪರೀಕ್ಷೆ ಎದುರಿಸಿ, ಹೆಚ್ಚು ಅಂಕ ಗಳಿಸುವಂತೆ ಪ್ರೇರೇಪಿಸಿ, ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಬೆಳಗಾವಿ ವಿಭಾಗದ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹನಿರ್ದೇಶಕ ಪ್ರಸನ್ನಕುಮಾರ ಹೇಳಿದರು.

Vijaya Karnataka 8 Feb 2020, 5:00 am
ಧಾರವಾಡ: ಕಲಿಕೆಯಲ್ಲಿಹಿಂದುಳಿದ ಮಕ್ಕಳು ಸಮರ್ಥವಾಗಿ ಪರೀಕ್ಷೆ ಎದುರಿಸಿ, ಹೆಚ್ಚು ಅಂಕ ಗಳಿಸುವಂತೆ ಪ್ರೇರೇಪಿಸಿ, ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಬೆಳಗಾವಿ ವಿಭಾಗದ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹನಿರ್ದೇಶಕ ಪ್ರಸನ್ನಕುಮಾರ ಹೇಳಿದರು.
Vijaya Karnataka Web eliminate fear of the test and increase the result
ಪರೀಕ್ಷಾ ಭಯ ನಿವಾರಿಸಿ, ಫಲಿತಾಂಶ ಹೆಚ್ಚಿಸಿ


ನಗರದ ಬಿಆರ್‌ಸಿಯಲ್ಲಿಹಮ್ಮಿಕೊಂಡ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಭೆಯಲ್ಲಿಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಕುರಿತು ಅವರು ಮಾತನಾಡಿದರು.

ಜನವರಿ, ಫೆಬ್ರುವರಿ ಮತ್ತು ಮಾರ್ಚ್ ತಿಂಗಳುಗಳು ಪರೀಕ್ಷೆಯ ಅತ್ಯಂತ ಮಹತ್ವಪೂರ್ಣ ಅವಧಿಯಾಗಿರುವುದರಿಂದ ಶಿಕ್ಷಕರು, ಮುಖ್ಯೋಪಾಧ್ಯಾಯರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಮನ್ವಯಾಧಿಕಾರಿಗಳು ಹೆಚ್ಚು ಗಮನ ಹರಿಸಿ, ಜಿಲ್ಲೆಯ ಫಲಿತಾಂಶ ಸುಧಾರಣೆಗೆ ಶ್ರಮವಹಿಸಬೇಕು ಎಂದು ತಿಳಿಸಿದರು.

ಶಾಲಾ ಹಂತದಲ್ಲಿಯೇ ಪ್ರಶ್ನೆಕೋಶ ರಚಿಸಿ, ಮಾದರಿ ಪರೀಕ್ಷೆ ನಡೆಸಿ, ಮಕ್ಕಳಲ್ಲಿರುವ ಪರೀಕ್ಷೆಯ ಭಯವನ್ನು ಹೋಗಲಾಡಿಸಬೇಕು. ಗುಂಪು ಚರ್ಚೆ, ರಸಪ್ರಶ್ನೆ, ಗುಂಪು ಅಧ್ಯಯನ ಇತರೆ ಅಧ್ಯಯನ ಮಾದರಿಗಳನ್ನು ಹೆಚ್ಚು ಬಳಸಿ ವಿದ್ಯಾರ್ಥಿಗಳು ಹೆಚ್ಚಿನ ಅಂಕಗಳನ್ನು ಪಡೆದು ಉತ್ತೀರ್ಣಗೊಳ್ಳುವಂತೆ ಪ್ರಯತ್ನಿಸಬೇಕು ಎಂದರು.

ಎಸ್‌ಎಸ್‌ಎಲ್‌ಸಿ ನೋಡಲ್‌ ಅಧಿಕಾರಿ ಕೆ.ಎಫ್‌. ಜಾವೂರ ಹಾಗೂ ಧಾರವಾಡ ಶಹರದ ಎಲ್ಲಪ್ರೌಢ ಶಾಲೆಗಳ ಮುಖ್ಯೋಪಾಧ್ಯಾಯರು ಸಭೆಯಲ್ಲಿಪಾಲ್ಗೊಂಡಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎ.ಖಾಜಿ ಸ್ವಾಗತಿಸಿದರು. ಕ್ಷೇತ್ರ ಸಮನ್ವಯಾಧಿಕಾರಿ ಎಂ.ವಿ.ಅಡಿವೇರ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ