ಆ್ಯಪ್ನಗರ

ಹಿರಿಯರ ಆದರ್ಶ ಅಳವಡಿಸಿಕೊಳ್ಳಿ

ಧಾರವಾಡ : ಹಿರಿಯ ವಕೀಲರ ಆದರ್ಶಗಳನ್ನು, ವೃತ್ತಿ ನೈಪುಣ್ಯತೆಗಳನ್ನು ಅಳವಡಿಸಿಕೊಂಡು ವೃತ್ತಿ ಬದುಕು ರೂಪಿಸಿಕೊಳ್ಳಬೇಕು ಎಂದು ಹೈಕೋರ್ಟ್‌ ವಕೀಲರ ಸಂಘದ ಉಪಾಧ್ಯಕ್ಷ ಗಂಗಾಧರ ಎಸ್‌. ಹೊಸಕೇರಿ ಹೇಳಿದರು.

Vijaya Karnataka 14 Sep 2019, 5:00 am
ಧಾರವಾಡ : ಹಿರಿಯ ವಕೀಲರ ಆದರ್ಶಗಳನ್ನು, ವೃತ್ತಿ ನೈಪುಣ್ಯತೆಗಳನ್ನು ಅಳವಡಿಸಿಕೊಂಡು ವೃತ್ತಿ ಬದುಕು ರೂಪಿಸಿಕೊಳ್ಳಬೇಕು ಎಂದು ಹೈಕೋರ್ಟ್‌ ವಕೀಲರ ಸಂಘದ ಉಪಾಧ್ಯಕ್ಷ ಗಂಗಾಧರ ಎಸ್‌. ಹೊಸಕೇರಿ ಹೇಳಿದರು.
Vijaya Karnataka Web embrace the ideal of elders
ಹಿರಿಯರ ಆದರ್ಶ ಅಳವಡಿಸಿಕೊಳ್ಳಿ


ಕರ್ನಾಟಕ ವಿದ್ಯಾವರ್ಧಕ ಸಂಘವು ಹಿರಿಯ ನ್ಯಾಯವಾದಿಗಳಾಗಿದ್ದ ಮಹಾದೇವ ಸಿದ್ಧೇಶ್ವರ ಕೇಸರಿ ದತ್ತಿ ಅಂಗವಾಗಿ ಕಾನೂನು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರಚಲಿತ ರಾಷ್ಟ್ರೀಯ ಸಮಸ್ಯೆ ಸಂವಿಧಾನದ ಅನುಚ್ಛೇದಗಳಾದ 370 ಮತ್ತು 35 ಎ ರದ್ಧತಿ ಸೂಕ್ತವೆ ? ಎಂಬ ವಿಷಯ ಕುರಿತ ಭಾಷಣ ಸ್ಪರ್ಧೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಭಾಷಾ ಪ್ರೌಢಿಮೆ, ವಸ್ತು-ವಿಷಯದ ಮೇಲೆ ಇರುವ ಪ್ರಭುತ್ವಗಳ ಬಗೆಗೆ ಹೆಚ್ಚು ಮುತುವರ್ಜಿವಹಿಸಿ ವಿಷಯ ನಿರೂಪಿಸುವ ಕಲೆಯನ್ನು ಅಳವಡಿಸಿಕೊಳ್ಳಬೇಕು. ಹೆಚ್ಚು ಅಧ್ಯಯನಶೀಲತೆಯಿಂದ ವಿಷಯಗಳನ್ನು ಪ್ರತಿಪಾದಿಸುವ ನಿಲುವು ತಳೆಯಬೇಕೆಂದರು.

ಹೈಕೋರ್ಟ್‌ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಹರ್ಷ ಎ. ನಿಲೋಪಂತ ಮಾತನಾಡಿ, ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸಕ್ಕೆ ಚರ್ಚಾ ಸ್ಪರ್ಧೆಗಳು ಬಹುಮುಖ್ಯ ಆಧಾರಸ್ತಂಭಗಳು. ಚರ್ಚಾ ಸ್ಪರ್ಧೆಯಲ್ಲಿಭಾಗವಹಿಸುವ ವಿದ್ಯಾರ್ಥಿಗಳಿಗೆ ಮನೋಬಲ ಮತ್ತು ವೇದಿಕೆಯ ಧೈರ್ಯ ತಾನಾಗಿಯೆ ಬರುವುದು ಎಂದರು.

ಕವಿವಿ ಸರ್‌. ಸಿದ್ದಪ್ಪ ಕಂಬಳಿ ಕಾನೂನು ಮಹಾವಿದ್ಯಾಲಯದ ಉಪನ್ಯಾಸಕಿ ಕು. ರಂಜಿತಾ ಎಸ್‌. ಕೆ. ಮಾತನಾಡಿದರು.

ಇದೇ ಸಂದರ್ಭದಲ್ಲಿಶ್ರೀಮತಿ ಪಾರ್ವತಿದೇವಿ ಮಹಾದೇವ ಕೇಸರಿ ದತ್ತಿ ಅಂಗವಾಗಿ ಎಸ್‌.ಎಸ್‌.ಎಲ್‌.ಸಿ. ಪರೀಕ್ಷೆಯಲ್ಲಿಕನ್ನಡ ಮಾಧ್ಯಮದಲ್ಲಿಹೆಚ್ಚು ಅಂಕ ಪಡೆದ ಶೃತಿ ಸುರೇಶ ಜಾಧವ,ಯಲ್ಲಮ್ಮಾ ಹಾಲಪ್ಪ ಬಿಂಕದಕಟ್ಟಿ, ಸ್ನೇಹಾ ನೂಲ್ವಿ ಹಾಗೂ ಶ್ರೀಮತಿ ಲೀಲಾ ಮಹಾದೇವ ಕೇಸರಿ ದತ್ತಿ ಅಂಗವಾಗಿ ದ್ವಿತೀಯ ಪಿಯುಸಿಯಲ್ಲಿಹೆಚ್ಚು ಅಂಕ ಗಳಿಸಿದ ಶಿಲ್ಪಾ ಯಮನಪ್ಪ ಭಜಂತ್ರಿ, ಮಂಜುನಾಥ ನೀಲಪ್ಪ ಲಮಾಣಿ, ಮೈಲಾರಗೌಡ ಮಲ್ಲಿಕಾರ್ಜುನಗೌಡ ಏಗನಗೌಡರ ಇವರಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿಪತ್ರ ನೀಡಲಾಯಿತು.

ಸದಾನಂದ ಶಿವಳ್ಳಿ, ಇಸಬೆಲ್ಲಾಝೇವಿಯರ್‌, ಚೈತ್ರಾ ಮೋಹನ ನಾಗಮ್ಮನವರ, ಸೋಮಶೇಖರ ಜಾಡರ, ಕಾಂತಣ್ಣ ನೂಲ್ವಿ, ಚನ್ನು ನೂಲ್ವಿ ದಂಪತಿಗಳು, ಪ್ರಕಾಶ ಮಲ್ಲಿಗವಾಡ, ಮಲ್ಲಿಕಾರ್ಜುನ ಏಗನಗೌಡರ, ಶಿವಾನಂದ ಅಮರಶೆಟ್ಟಿ ಇದ್ದರು. ಶಿವಾನಂದ ಭಾವಿಕಟ್ಟಿ ಸ್ವಾಗತಿಸಿದರು. ಪ್ರಕಾಶ ಎಸ್‌. ಉಡಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿಂಗಣ್ಣ ಕುಂಟಿ (ಇಟಗಿ) ನಿರೂಪಿಸಿದರು. ಶಾಂತೇಶ ಗಾಮನಗಟ್ಟಿ ವಂದಿಸಿದರು.

ಸಂಕೇತ ಪ್ರಥಮ ಸ್ಥಾನ:
ಭಾಷಣ ಸ್ಪರ್ಧೆಯಲ್ಲಿಧಾರವಾಡ, ಮೈಸೂರು, ಬೆಂಗಳೂರು, ಬೆಳಗಾವಿ, ಗದಗ ಕಾಲೇಜುಗಳಿಂದ ಒಟ್ಟು 22 ಜನ ಕಾನೂನು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಪೈಕಿ ಧಾರವಾಡದ ಹುರಕಡ್ಲಿಕಾನೂನು ಮಹಾವಿದ್ಯಾಲಯದ ಸಂಕೇತ ಅಂಬಲಿ ಪ್ರಥಮ, ಮೈಸೂರಿನ ವಿದ್ಯಾವರ್ಧಕ ಕಾನೂನು ಕಾಲೇಜಿನ ಶಶಾಂಕ ಹೆಚ್‌. ಎಸ್‌. ದ್ವಿತೀಯ ಹಾಗೂ ಬೆಂಗಳೂರು ಕಾನೂನು ಕಾಲೇಜಿನ ನವೀನಕುಮಾರ ತೃತೀಯ ಬಹುಮಾನ ಪಡೆದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ