ಆ್ಯಪ್ನಗರ

ದತ್ತಿ ಉಪನ್ಯಾಸ ಕಾರ್ಯಕ್ರಮ

ಧಾರವಾಡ : ಭಾರತದ ಯಾವುದೇ ಸಂಪ್ರದಾಯಗಳು ಮೂಢನಂಬಿಕೆಗಳು ಅಲ್ಲ ಅವು ವೈಜ್ಞಾನಿಕ ಹಿನ್ನೆಲೆಯಿಂದ ಕೂಡಿವೆ ಎಂದು ಡಾ.ಬಿ.ಪಿ.ಮಠದ ಹೇಳಿದರು.

Vijaya Karnataka 28 Dec 2018, 5:00 am
ಧಾರವಾಡ : ಭಾರತದ ಯಾವುದೇ ಸಂಪ್ರದಾಯಗಳು ಮೂಢನಂಬಿಕೆಗಳು ಅಲ್ಲ ಅವು ವೈಜ್ಞಾನಿಕ ಹಿನ್ನೆಲೆಯಿಂದ ಕೂಡಿವೆ ಎಂದು ಡಾ.ಬಿ.ಪಿ.ಮಠದ ಹೇಳಿದರು.
Vijaya Karnataka Web DRW-27RANGA03


ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಬುಧವಾರ ಆಯೋಜಿಸಿದ್ದ ಶಕುಂತಲಾ ಎಸ್‌.ಅಯ್ಯನಗೌಡರ ಮತ್ತು ಡಾ.ಎಸ್‌.ವಿ.ಅಯ್ಯನಗೌಡರ ದತ್ತಿ ಕಾರ‍್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕರಾಗಿ ಆಗಮಿಸಿ, ರಂಗೋಲಿ ಮತ್ತು ಸಂಸ್ಕೃತಿ ವಿಷಯ ಕುರಿತು ಮಾತನಾಡಿದರು.

ರಂಗೋಲಿ ಅನ್ನುವುದು ಒಂದು ಕಲೆ. ಭಾರತದಲ್ಲಿ ಬಹುಶಃ ಶೇ.90 ರಷ್ಟು ಹೆಣ್ಣುಮಕ್ಕಳು ಶಾಲೆಗೆ ಹೋಗದೇ ರಂಗೋಲಿಯ ಬಗ್ಗೆ ಓದದೇ ಅವರ ತಾಯಂದಿರಿಂದ, ಅಜ್ಜಿಯರಿಂದ, ಅಕ್ಕಂದಿರಿಂದ ಕಲಿತ ಒಂದು ಪಾರಂಪರಿಕ ಕಲೆ. ರಂಗೋಲಿಯ ಹಿಂದೆ ಒಂದು ಸಂಪ್ರದಾಯವಿದೆ. ರಂಗೋಲಿಯನ್ನು ವೇದ ಕಾಲದಲ್ಲಿಯೂ ಹಾಕುತ್ತಿದ್ದರು. ರಾಮಾಯಣ, ಮಹಾಭಾರತ ಕಾಲದಲ್ಲಿ ಹಾಕುತ್ತಿದ್ದರು ಎನ್ನುವ ಬಗ್ಗೆ ಪುರಾವೆಗಳಿವೆ ಎಂದರು.

ರಂಗೋಲಿಯನ್ನು ಹಾಕುವುದರಿಂದ ಹತ್ತಾರು ಶನಿಗಳು ಓಡಿಹೋಗುತ್ತವೆ. ರಂಗೋಲಿಯನ್ನು ಅಕ್ಕಿ ಹಿಟ್ಟಿನಿಂದ ಹಾಕಿದರೆ ಅತಿ ಶ್ರೇಷ್ಠ ಎನ್ನುತ್ತಾರೆ. ಏಕೆಂದರೆ ಆ ಅಕ್ಕಿ ಹಿಟ್ಟನ್ನು ಇರುವೆಗಳು, ಸಣ್ಣ ಸಣ್ಣ ಕೀಟಗಳು ಸೇವಿಸಿ ಹೊಟ್ಟೆಯನ್ನು ತುಂಬಿಸಿಕೊಳ್ಳುತ್ತವೆ. ನಮಗೆ ಅರಿವಿಲ್ಲದೆ ನಾವು ಹತ್ತಾರು ಕೀಟಗಳ ಹೊಟ್ಟೆಯನ್ನು ತುಂಬಿಸುತ್ತೇವೆ ಎಂದರು.

ಆಧುನಿಕ ರಂಗೋಲಿಗಳು ದಿನಕ್ಕೆ ಲಕ್ಷ ಗಟ್ಟಲೆ ಹುಟ್ಟಿಕೊಳ್ಳುತ್ತವೆ. ಸಾಹಿತ್ಯದಲ್ಲಿ ರಂಗೋಲಿ ಇದೆ. ಸಂಸ್ಕೃತಿಯಲ್ಲಿ ರಂಗೋಲಿ ಇದೆ. ಆದಿ ಪಂಪನ ಕಾಲದಲ್ಲಿಯೂ ರಂಗೋಲಿ ಇತ್ತು. ರಂಗೋಲಿ ಹಾಕುವುದರಿಂದ ಸಂಯಮ ವಿಕಿರಣಗಳು ಮನೆಯ ಪ್ರವೇಶ ಮಾಡುವುದಿಲ್ಲ. ರಂಗೋಲಿಯು ವಚನದಲ್ಲಿ, ದಾಸರ ಪದದಲ್ಲಿ, ಜಾನಪದದಲ್ಲಿ ಹಾಡಿದ ಬಗ್ಗೆ ದಾಖಲೆ ಇದೆ. ಭಾರತದಲ್ಲಿ ಸ್ವಚ್ಛ ಅಭಿಯಾನದ ಜತೆ ರಂಗೋಲಿ ಅಭಿಯಾನ ಆರಂಭಿಸಬೇಕು ಎಂದು ತಿಳಿಸಿದರು.

ರಂಗೋಲಿಗಳನ್ನು ಹಾಕುವುದನ್ನು ಎಲ್ಲ ಧರ್ಮ ಪ್ರದೇಶ, ಜನಾಂಗಗಳಲ್ಲಿಯೂ ಕಾಣುತ್ತೇವೆ. ರಂಗೋಲಿಯ ಬಗ್ಗೆ ವೈಜ್ಞಾನಿಕವಾದ ಆಳವಾದ ಅಧ್ಯಯನಗಳು ಆಗದೇ ಇರುವುದು ದುರದೃಷ್ಟಕರ. ರಂಗೋಲಿ ಬಗ್ಗೆ ವೈಜ್ಞಾನಿಕ ಸಂಶೋಧನಗಳು ಆಗಬೇಕಿದೆ. ಎಲ್ಲ ಮೂಲಾಕ್ಷ ರಗಳಿಗೂ ರಂಗೋಲಿಯಲ್ಲಿರುವ ಚುಕ್ಕೆಗಳೇ ಆಧಾರ. ರಂಗೋಲಿ ಹಾಕುವ ರೀತಿಯೇ ಮುಂದೆ ಅಕ್ಷ ರವಾಗಿ ಅಭಿವೃದ್ಧಿ ಹೊಂದಿವೆ ಎಂದು ಭಾಷಾ ತಜ್ಞರು ಹೇಳುತ್ತಾರೆ ಎಂದರು.

ಸಂಘದ ಕಾರಾರ‍ಯಧ್ಯಕ್ಷ ಶಿವಣ್ಣ ಬೆಲ್ಲದ ಅಧ್ಯಕ್ಷ ತೆ ವಹಿಸಿ, ರಂಗೋಲಿ ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಕಲೆಯಾಗಿದ್ದು, ಅದರ ಕುರಿತು ಇನ್ನೂ ಹೆಚ್ಚಿನ ಅಧ್ಯಯನಗಳು ಆಗಬೇಕಿದೆ ಎಂದರು.

ಎಸ್‌.ವಿ.ಅಯ್ಯನಗೌಡರ ದಂಪತಿಗಳು, ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಎಸ್‌.ಉಡಿಕೇರಿ, ಸಹ ಕಾರ್ಯದರ್ಶಿ ಸದಾನಂದ ಶಿವಳ್ಳಿ, ಕಾರ‍್ಯಕಾರಿ ಸಮಿತಿ ಸದಸ್ಯ ಶಂಕರ ಕುಂಬಿ, ಡಾ.ಮನಗುಂಡಿ, ಡಾ.ಬಸವರಾಜ ತಲ್ಲೂರ, ಪ್ರೊ.ಎಸ್‌.ಬಿ.ಜೋಗೂರ, ಡಿ.ಎಚ್‌.ಮೋರೆ, ಡಾ.ಚಂದ್ರಶೇಖರ ರೊಟ್ಟಿಗವಾಡ, ಪ್ರಭು ಹಂಚಿನಾಳ, ಚನಬಸಪ್ಪ ಅವರಾದಿ, ನಿಂಗಪ್ಪ ಮಾಯಕೊಂಡ, ಎಂ.ಬಿ.ಹೆಗ್ಗೇರಿ, ಲಕ್ಷ ್ಮಣ ಪುರದ ಇತರರಿದ್ದರು.

ಸಂಘದ ಕೋಶಾಧ್ಯಕ್ಷ ಕೃಷ್ಣ ಜೋಶಿ ಸ್ವಾಗತಿಸಿದರು. ಉಪಾಧ್ಯಕ್ಷ ನಿಂಗಣ್ಣ ಕುಂಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ‍್ಯಕಾರಿ ಸಮಿತಿ ಸದಸ್ಯ ಸತೀಶ ತುರಮರಿ ನಿರೂಪಿಸಿ, ವಂದಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ