ಆ್ಯಪ್ನಗರ

ನಗುವಿನಿಂದ ರೋಗ ನಿರೋಧಕ ಶಕ್ತಿ ವೃದ್ಧಿ

ಧಾರವಾಡ : ನಗು ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಜೀವನದಲ್ಲಿಯ ನೋವುಗಳನ್ನು ನಿವಾರಿಸುತ್ತದೆ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶ ಹಾಗೂ ಜಿಲ್ಲಾಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆರ್‌.ಎಸ್‌.ಚಿಣ್ಣನ್ನವರ ಹೇಳಿದರು.

Vijaya Karnataka 18 Jan 2020, 5:00 am
ಧಾರವಾಡ : ನಗು ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಜೀವನದಲ್ಲಿಯ ನೋವುಗಳನ್ನು ನಿವಾರಿಸುತ್ತದೆ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶ ಹಾಗೂ ಜಿಲ್ಲಾಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆರ್‌.ಎಸ್‌.ಚಿಣ್ಣನ್ನವರ ಹೇಳಿದರು.
Vijaya Karnataka Web enhance immunity with laughter
ನಗುವಿನಿಂದ ರೋಗ ನಿರೋಧಕ ಶಕ್ತಿ ವೃದ್ಧಿ


ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ನಾಡೋಜ ಡಾ.ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿಸಂಕ್ರಾಂತಿ ನಗೆ ಹಬ್ಬದ ಪ್ರಯುಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಾನಪದ ಲೋಕ ಸಂಸ್ಥೆ ಸಹಯೋಗದಲ್ಲಿಸೋಮಶೇಖರ ಜಾಡರ ರಚನೆಯ 'ಸುಳ್ಳು ನಮ್ಮಲ್ಲಿಲ್ಲವಯ್ಯಾಧಿಧಿ...' ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ನಗು ಮನುಷ್ಯನ ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ. ಮುಖದಲ್ಲಿಪ್ರಸನ್ನತೆ ಮೂಡಿಸುತ್ತದೆ. ನಗುವುದಕ್ಕೆ ಹಣ ಖರ್ಚು ಮಾಡಬೇಕಿಲ್ಲ. ಹಾಸ್ಯ ಪ್ರವೃತ್ತಿ ನಿಮ್ಮ ಸುತ್ತಮುತ್ತಲಿನ ಪರಿಸರ ಬೆಳಗಿಸುತ್ತದೆ ಎಂದರು. ಸಂಘದ ಪ್ರದಾನ ಕಾರ್ಯದರ್ಶಿ ಪ್ರಕಾಶ ಉಡಿಕೇರಿ ಅಧ್ಯಕ್ಷತೆ ವಹಿಸಿದ್ದರು. ವೈ.ಪಿ.ಮದ್ನೂರ ಮಾತನಾಡಿದರು.

ಸೋಮಶೇಖರ ಜಾಡರ ಸಾರಥ್ಯದ ನಾಟಕದಲ್ಲಿಜಿ.ಸರಸ್ವತಿ, ಭಾರತಿ ದಾವಣಗೆರೆ, ಮಂಜುಳಾ ಕುರ್ತಕೋಟಿ, ಹನುಮಂತ ತಳವಾರ, ಚಂದ್ರಶೇಖರ ಜಾಡರ, ಹಿಮ್ಯಾಳದಲ್ಲಿಚಂದ್ರಿಕಾ ನಾಯ್ಕ, ಗೀತಾ ಅಂಗಡಿ, ಶಾರದಾ ಅಗಸಿಮನಿ, ಈಶ್ವರ ಹೆಸರೂರ, ನಾರಾಯಣಾಚಾರ ಹೊಸಳ್ಳಿ, ಪ್ರಕಾಶ ಜಾಡರ, ಸಂತೋಷ ಮಹಾಲೆ, ಟ್ರ್ಯಾವರ್‌ ಡಿಸೋಜಾ, ಬಾಬು ರಾಠೋಡ ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ