ಆ್ಯಪ್ನಗರ

ಪರಿಸರ ಸಂರಕ್ಷಣೆ ಎಲ್ಲರ ಹೊಣೆ

ಧಾರವಾಡ : ನಗರದ ಪ್ರಿಮಿಯರ ಸಿಟಿಜನ್ಸ್‌ ಕ್ಲಬ್‌ ಹಾಗೂ ವಕೀಲರ ಸಂಘದ ಆಶ್ರಯದಲ್ಲಿ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ವನಮಹೋತ್ಸವ ಆಚರಿಸಲಾಯಿತು.

Vijaya Karnataka 6 Jul 2019, 5:00 am
ಧಾರವಾಡ : ನಗರದ ಪ್ರಿಮಿಯರ ಸಿಟಿಜನ್ಸ್‌ ಕ್ಲಬ್‌ ಹಾಗೂ ವಕೀಲರ ಸಂಘದ ಆಶ್ರಯದಲ್ಲಿ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ವನಮಹೋತ್ಸವ ಆಚರಿಸಲಾಯಿತು.
Vijaya Karnataka Web DRW-5NIJAGUNI3
ಧಾರವಾಡ ಪ್ರಿಮಿಯರ್‌ ಸಿಟಿಜನ್ಸ್‌ ಕ್ಲಬ್‌ ಹಾಗೂ ವಕೀಲರ ಸಂಘದ ಆಶ್ರಯದಲ್ಲಿ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಯಿತು.


ಜಿಲ್ಲಾ ಪ್ರಧಾನ ನ್ಯಾಯಾಧೀಶ ಈಶಪ್ಪ ಭೂತೆ ಮಾತನಾಡಿ, ಇಂದಿನ ಯುಗದಲ್ಲಿ ಪರಿಸರ ಸಂರಕ್ಷಿಸುವ ಹೊಣೆಗಾರಿಕೆ ಎಲ್ಲರಲ್ಲೂ ಇರಬೇಕು. ಅಂದಾಗ ಮಾತ್ರ ಪರಿಸರ ಮಾಲಿನ್ಯ ಮತ್ತಿತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದರು.

ವೃತ್ತಿ ಜೀವನದಿಂದ ವಿರಾಮ ತೆಗೆದುಕೊಂಡರು ಇಳಿ ವಯಸ್ಸಿನಲ್ಲಿ ಸಮಾಜಮುಖಿ ಕಾರ್ಯ ಮಾಡುತ್ತಿರುವ ಪ್ರಿಮಿಯರ್‌ ಸಿಟಿಜನ್ಸ್‌ ಕ್ಲಬ್‌ ಇಂದಿನ ಯುವ ಪೀಳಿಗೆಗೆ ಸ್ಪೂರ್ತಿಯಾಗಿದೆ. ಇಂತಹ ಪರಿಸರ ಸ್ನೇಹಿ ಕಾರ್ಯಕ್ರಮ ಹದಿನಾಲ್ಕು ವರ್ಷದಿಂದ ನಡೆದುಕೊಂಡು ಬಂದಿದೆ. ಈ ಕಾರ್ಯ ಹೀಗೆ ಮುಂದುವರಿಯಲಿ ಎಂದು ಹೇಳಿದರು.

ನ್ಯಾಯಾಧೀಶರಾದ ಆರ್‌.ಎಸ್‌. ಚಿನ್ನಣ್ಣವರ, ಶ್ರೀಕಾಂತ ಎಸ್‌.ವಿ, ಕುರಣಿಕಾಂತ ಡಾಕು, ಕೃಷ್ಣ ಜಾಗೀರದಾರ, ಗಿರೀಶ ವಾಜಪೇಯಿ,
ಆರ್‌.ಯು. ಬೆಳ್ಳಕ್ಕಿ, ಪೊಲೀಸಪಾಟೀಲ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ