ಆ್ಯಪ್ನಗರ

ಎಲ್ಲರೂ ಬ್ಯಾಂಕ್‌ ಖಾತೆ ಹೊಂದುವುದು ಅವಶ್ಯ

ಧಾರವಾಡ : ನಿತ್ಯದ ಜೀವನದಲ್ಲಿ ಬ್ಯಾಂಕ್‌ ವ್ಯವಹಾರ ಪ್ರಮುಖ ಪಾತ್ರವಹಿಸಲಿದೆ. ಹೀಗಾಗಿ ಪ್ರತಿಯೊಬ್ಬ ವ್ಯಕ್ತಿ ಬ್ಯಾಂಕ್‌ ಖಾತೆ ಹೊಂದುವುದು ಅವಶ್ಯವಾಗಿದೆ ಎಂದು ಭಾರತೀಯ ಸ್ಟೇಟ್‌ ಬ್ಯಾಂಕ್‌ ಕಲಿಕಾ ಹಾಗೂ ಅಭಿವೃದ್ಧಿ ಸಂಸ್ಥೆ ನಿರ್ದೇಶಕ ರವೀಂದ್ರ ಸಾಹುಕಾರ ಹೇಳಿದರು.

Vijaya Karnataka 26 Mar 2019, 5:00 am
ಧಾರವಾಡ : ನಿತ್ಯದ ಜೀವನದಲ್ಲಿ ಬ್ಯಾಂಕ್‌ ವ್ಯವಹಾರ ಪ್ರಮುಖ ಪಾತ್ರವಹಿಸಲಿದೆ. ಹೀಗಾಗಿ ಪ್ರತಿಯೊಬ್ಬ ವ್ಯಕ್ತಿ ಬ್ಯಾಂಕ್‌ ಖಾತೆ ಹೊಂದುವುದು ಅವಶ್ಯವಾಗಿದೆ ಎಂದು ಭಾರತೀಯ ಸ್ಟೇಟ್‌ ಬ್ಯಾಂಕ್‌ ಕಲಿಕಾ ಹಾಗೂ ಅಭಿವೃದ್ಧಿ ಸಂಸ್ಥೆ ನಿರ್ದೇಶಕ ರವೀಂದ್ರ ಸಾಹುಕಾರ ಹೇಳಿದರು.
Vijaya Karnataka Web everyone needs a bank account
ಎಲ್ಲರೂ ಬ್ಯಾಂಕ್‌ ಖಾತೆ ಹೊಂದುವುದು ಅವಶ್ಯ


ನಗರದ ಕೆಎಲ್‌ಇ ಸಂಸ್ಥೆಯ ಶ್ರೀ ಮೃತ್ಯುಂಜಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಅರ್ಥಶಾಸ್ತ್ರ ವಿಭಾಗ ಮತ್ತು ಆಂತರಿಕ ಗುಣಮಟ್ಟ ಖಚಿತತೆ ಕೋಶದ ವತಿಯಿಂದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಬ್ಯಾಂಕಿಂಗ್‌ ಸರ್ಟಿಫಿಕೆಟ್‌ ಕೋರ್ಸ್‌ನ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಎಲ್‌ಪಿಜಿ ನೀತಿಯ ಫಲವಾಗಿ ಇಂದು ಬ್ಯಾಂಕಿಂಗ್‌ ಕ್ಷೇತ್ರದ ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕ್‌ಗಳಲ್ಲಿ ಉದ್ಯೋಗಾವಕಾಶಗಳು ಹೆಚ್ಚಾಗಿವೆ. ಬ್ಯಾಂಕ್‌ಗಳಲ್ಲಿ ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಕೆಲಸ ಪಡೆಯಬಹುದು ಎಂದರು.

ಭಾರತೀಯ ಸ್ಟೇಟ್‌ ಬ್ಯಾಂಕ್‌ ಕಲಿಕಾ ಹಾಗೂ ಅಭಿವೃದ್ಧಿ ಸಂಸ್ಥೆಯ ಮುಖ್ಯ ಪ್ರಬಂಧಕ ರಾಧಾಕೃಷ್ಣ ಮಾತನಾಡಿದರು.

ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ವಿ.ವಿ.ಪಾಟೀಲ ಅಧ್ಯಕ್ಷ ತೆ ವಹಿಸಿ ಮಾತನಾಡಿ, ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಬ್ಯಾಂಕಿಂಗ್‌ ಕ್ಷೇತ್ರದ ಕೊಡುಗೆ ಅಪಾರವಾಗಿದೆ. ಉದ್ಯೋಗವಕಾಶ ಅಧಿಕವಾಗಿದೆ ಎಂದು ತಿಳಿಸಿದರು.

ಇದೇ ವೇಳೆ ಒಂದು ತಿಂಗಳವರೆಗೆ ನಡೆದ ಕೋರ್ಸ್‌ನಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಾಯಿತು. ಪರೀಕ್ಷೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಸಂಯೋಜಕ ಡಾ.ಎಂ.ಪಿ. ಅನುರಾಧಾ, ಡಾ.ತಾರಾ ಬಿ.ಎನ್‌, ಪ್ರೊ.ಎಸ್‌.ಎಸ್‌.ಸಂಗೊಳ್ಳಿ, ಪ್ರೊ.ವಿಶ್ವನಾಥ ಜಿ, ಆರ್‌.ಸಿ. ಉಮರಾಣಿ, ಪ್ರೊ. ಶಿವಯೋಗಿ ಅಕ್ಕಿ, ಪ್ರೊ.ಆನಂದ ಜಕ್ಕಣ್ಣವರ. ಪ್ರೊ.ಶಿಲ್ಪಾ ದಾನಪ್ಪನವರ, ಪ್ರೊ.ಶಿಲ್ಪಾ ಕೊಂಗಿ, ಪ್ರೊ.ಶೈಲಜಾ ಪಟ್ಟಣಶೆಟ್ಟಿ, ಪ್ರೊ.ಸಂಜನಾ ಹೋಳಿಮಠ, ಪ್ರೊ.ಸೌಮ್ಯಾ ಕುಬೇರ, ಪ್ರೊ.ವನಜಾ ನಾಯಕ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಡಾ.ನೀಲಕ್ಕಾ ಸಿ.ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಧಾ ಮತ್ತು ಪ್ರೀತಿ ಪ್ರಾರ್ಥಿಸಿದರು. ಜ್ಯೋತಿ ಸ್ವಾಗತಿಸಿದರು. ಫಣಿ ಹಾಗೂ ಜ್ಯೋತಿ ನಿರೂಪಿಸಿದರು. ಅನುರಾಧಾ ಜಾಧವ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ