ಹುಬ್ಬಳ್ಳಿ: ಗುರುಕುಲ ಪದ್ಧತಿಯ ಶಿಕ್ಷಣ ಸಂಸ್ಥೆ ಹಾಗೂ ಬ್ಯಾಂಕ್ ಸ್ಥಾಪಿಸುವ ಜತೆಗೆ ಸಮಾಜದ ಅಭಿವೃದ್ಧಿಯ ಉದ್ದೇಶದಿಂದ 'ವಿಶ್ವ ವಿಪ್ರ ಸೇವಾ ಟ್ರಸ್ಟ್' ಇಲ್ಲಿನ ವಿಜಯನಗರದ ಕೆಂಪಣ್ಣವರ ಕಲ್ಯಾಣ ಮಂಟಪದಲ್ಲಿಶನಿವಾರ ಉದ್ಘಾಟನೆಗೊಂಡಿತು.
ಟ್ರಸ್ಟ್ ಉದ್ಘಾಟಿಸಿದ ಖ್ಯಾತ ನೇತ್ರ ತಜ್ಞ ಡಾ.ಎಂ.ಎಂ.ಜೋಶಿ ಮಾತನಾಡಿ, ವಿಪ್ರ ಸಮಾಜ ಒಳಪಂಗಡಗಳಲ್ಲಿಇರುವ ಆಚಾರ, ವಿಚಾರ ಹಾಗೂ ಸಂಪ್ರದಾಯಗಳನ್ನು ಬದಿಗೊತ್ತಿ ಸಮಸ್ತ ವಿಪ್ರ ಸಮಾಜದ ಏಕತೆ ಹಾಗೂ ಒಗ್ಗೂಡಿಕೆಗೆ ಪ್ರತಿಯೊಬ್ಬರು ಶ್ರಮಿಸಬೇಕಿದೆ. ಸಮಾಜದ ಒಳಪಂಗಡದ ಆಚರಣೆಗಳನ್ನು ಕೇವಲ ಮನೆಗೆ ಸೀಮಿತಗೊಳಿಸಬೇಕು. ಸಮಾಜದ ವಿಷಯ ಬಂದಾಗ ಅದನ್ನು ಮರೆತು ಪ್ರತಿಯೊಬ್ಬರು ಒಂದಾಗಬೇಕು ಎಂದು ಸಲಹೆ ನೀಡಿದರು.
ವಿಪ್ರ ಸಮಾಜಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವಾರು ಸಂಘಗಳು ಸ್ಥಾಪನೆಯಾಗಿವೆ. ಆದರೆ ಕೇವಲ ಸಮಾಜದ ಅಭಿವೃದ್ಧಿಗೆ ಮಾತ್ರ ಸಂಘ ಸ್ಥಾಪನೆಯಾದರೇ ಸಾಲದು, ಬದಲಾಗಿ ಶಿಕ್ಷಣ ಹಾಗೂ ಬ್ಯಾಂಕಿಂಗ್ ಕ್ಷೇತ್ರದಲ್ಲಿಯೂ ಸಮಾಜವು ಸ್ವಾವಲಂಬಿಯಾಗಬೇಕಿದೆ ಎಂದರು. ವಿಪ್ರ ಸಮಾಜದ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಗುರುಕುಲ ಪದ್ಧತಿಯ ಶಿಕ್ಷಣ ಸಂಸ್ಥೆ ಸ್ಥಾಪಿಸುವ ಉದ್ದೇಶ ಹೊಂದಿರುವ ವಿಶ್ವ ವಿಪ್ರ ಸೇವಾ ಟ್ರಸ್ಟ್ ಕಾರ್ಯ ಶ್ಲಾಘನೀಯ ಎಂದರು.
ಪಾಶ್ಚಾತ್ಯ ಸಂಸ್ಕೃತಿ ಬೇಡ
ಪಂ.ಪ್ರದ್ಯುಮ್ನಾಚಾರ್ಯ ಜೋಶಿ ಮಾತನಾಡಿ, ಬ್ರಿಟಿಷ ಸಂಸ್ಕೃತಿಯ ಪ್ರಭಾವದಿಂದಾಗಿ ಭಾರತೀಯರ ಆಚಾರ, ವಿಚಾರ, ವೇಷ ಭೂಷಣ ಮತ್ತು ಆಹಾರ ಪದ್ಧತಿಯಲ್ಲಿಯೂ ಬದಲಾವಣೆಗಳಾಗಿವೆ. ಇಂದು ಕೇವಲ ಆಂಗ್ಲಭಾಷೆಯಲ್ಲಿಮಾತಾಡುವುದಷ್ಟೇ ಅಲ್ಲಅವರಂತೆಯೇ ಜೀವನ ಸಾಗಿಸುವ ಮನೋಭಾವನೆ ಹೆಚ್ಚುತ್ತಿರುವುದು ದುರ್ದೈವದ ಸಂಗತಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಸಂಜೀವಕುಮಾರ ಹುಲಗಿ ಟ್ರಸ್ಟ್ನ ಧ್ಯೇಯೋದ್ದೇಶ ಹಾಗೂ ಪರಿಚಯ ಮಾಡಿದರು.
ಸಮಾರಂಭದಲ್ಲಿಗಣ್ಯರಾದ ಡಾ.ಎಂ.ಎಂ.ಜೋಶಿ, ನಾಡೋಜ ಡಾ.ಮಹೇಶ ಜೋಶಿ,ಖ್ಯಾತ ಗಾಯಕಿ ದೀಪಿಕಾ ಪಾಂಡುರಂಗಿ, ಪಂ.ಶಂಕರಭಟ್ ಜೋಶಿ, ಪಂ.ರವಿಆಚಾರ್ಯ,ಎ.ಸಿ.ಗೋಪಾಲ, ಅಧ್ಯಕ್ಷತೆ ವಹಿಸಿದ್ದ ವಿಶ್ವ ವಿಪ್ರ ಸೇವಾ ಟ್ರಸ್ಟ್ ಅಧ್ಯಕ್ಷ ಲಕ್ಷಣ ಕುಲಕರ್ಣಿ ಹಾಗೂ ಟ್ರಸ್ಟ್ ಎಲ್ಲಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.
ಎನ್.ಆರ್.ಕುಲಕರ್ಣಿ, ಎಂ.ಬಿ.ನಾತು, ಮನು ಅಯ್ಯಂಗಾರ, ಹನುಮಂತ ಡಂಬಳ, ರಾಜಾ ದೇಸಾಯಿ, ಅರವಿಂದ ಕುರ್ತಕೋಟಿ, ರಾಜು ಪಾಟೀಲ ಕುಲಕರ್ಣಿ, ಸುನೀಲ ಗುಮಾಸ್ತೆ, ಡಾ.ಬಿ.ಬಿ.ಪಾಟೀಲ, ಶಂಕರ ಪಾಟೀಲ ಮತ್ತಿತರರು ಇದ್ದರು.
ಪದ್ಮಜಾ ಮಹಿಳಾ ಮಂಡಳದವರು ಪ್ರಾರ್ಥಿಸಿದರು. ಮಾಯಾ ರಾಮನ್ ನಿರೂಪಿಸಿದರು. ಡಾ.ರಾಮಚಂದ್ರ ಕಾರಟಗಿ ಸ್ವಾಗತಿಸಿದರು.
ಸ್ವಾವಲಂಬಿಗಳಾಗಿ...
ವೃತ್ತಿಯಲ್ಲಿಯಾವುದೇ ಮೇಲು-ಕೀಳು ಎಂಬ ಭೇದ ಮಾಡದೇ ವಿಪ್ರ ಸಮಾಜವು ಸ್ವಾವಲಂಬಿಯಾಗಿ ಬದುಕಬೇಕಿದೆ. ಯಾವುದೇ ಉದ್ಯೋಗವನ್ನು ಆಯ್ಕೆ ಮಾಡಿಕೊಂಡರು ಅದರಲ್ಲಿಶ್ರಮಿವಹಿಸಿ ದುಡಿದಾಗ ಮಾತ್ರ ಯಶಸ್ಸು ಲಭಿಸುತ್ತದೆ. ಬೇರೆಯವರ ಬಳಿ ಉದ್ಯೋಗಕ್ಕೆ ಕೈ ಒಡ್ಡುವ ವ್ಯವಸ್ಥೆಯಿಂದ ವಿಪ್ರ ಸಮಾಜ ಹೊರಬರಬೇಕಿದೆ ಎಂದು ಡಾ.ಎಂ.ಎಂ.ಜೋಶಿ ಹೇಳಿದರು.
ಟ್ರಸ್ಟ್ ಉದ್ಘಾಟಿಸಿದ ಖ್ಯಾತ ನೇತ್ರ ತಜ್ಞ ಡಾ.ಎಂ.ಎಂ.ಜೋಶಿ ಮಾತನಾಡಿ, ವಿಪ್ರ ಸಮಾಜ ಒಳಪಂಗಡಗಳಲ್ಲಿಇರುವ ಆಚಾರ, ವಿಚಾರ ಹಾಗೂ ಸಂಪ್ರದಾಯಗಳನ್ನು ಬದಿಗೊತ್ತಿ ಸಮಸ್ತ ವಿಪ್ರ ಸಮಾಜದ ಏಕತೆ ಹಾಗೂ ಒಗ್ಗೂಡಿಕೆಗೆ ಪ್ರತಿಯೊಬ್ಬರು ಶ್ರಮಿಸಬೇಕಿದೆ. ಸಮಾಜದ ಒಳಪಂಗಡದ ಆಚರಣೆಗಳನ್ನು ಕೇವಲ ಮನೆಗೆ ಸೀಮಿತಗೊಳಿಸಬೇಕು. ಸಮಾಜದ ವಿಷಯ ಬಂದಾಗ ಅದನ್ನು ಮರೆತು ಪ್ರತಿಯೊಬ್ಬರು ಒಂದಾಗಬೇಕು ಎಂದು ಸಲಹೆ ನೀಡಿದರು.
ವಿಪ್ರ ಸಮಾಜಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವಾರು ಸಂಘಗಳು ಸ್ಥಾಪನೆಯಾಗಿವೆ. ಆದರೆ ಕೇವಲ ಸಮಾಜದ ಅಭಿವೃದ್ಧಿಗೆ ಮಾತ್ರ ಸಂಘ ಸ್ಥಾಪನೆಯಾದರೇ ಸಾಲದು, ಬದಲಾಗಿ ಶಿಕ್ಷಣ ಹಾಗೂ ಬ್ಯಾಂಕಿಂಗ್ ಕ್ಷೇತ್ರದಲ್ಲಿಯೂ ಸಮಾಜವು ಸ್ವಾವಲಂಬಿಯಾಗಬೇಕಿದೆ ಎಂದರು. ವಿಪ್ರ ಸಮಾಜದ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಗುರುಕುಲ ಪದ್ಧತಿಯ ಶಿಕ್ಷಣ ಸಂಸ್ಥೆ ಸ್ಥಾಪಿಸುವ ಉದ್ದೇಶ ಹೊಂದಿರುವ ವಿಶ್ವ ವಿಪ್ರ ಸೇವಾ ಟ್ರಸ್ಟ್ ಕಾರ್ಯ ಶ್ಲಾಘನೀಯ ಎಂದರು.
ಪಾಶ್ಚಾತ್ಯ ಸಂಸ್ಕೃತಿ ಬೇಡ
ಪಂ.ಪ್ರದ್ಯುಮ್ನಾಚಾರ್ಯ ಜೋಶಿ ಮಾತನಾಡಿ, ಬ್ರಿಟಿಷ ಸಂಸ್ಕೃತಿಯ ಪ್ರಭಾವದಿಂದಾಗಿ ಭಾರತೀಯರ ಆಚಾರ, ವಿಚಾರ, ವೇಷ ಭೂಷಣ ಮತ್ತು ಆಹಾರ ಪದ್ಧತಿಯಲ್ಲಿಯೂ ಬದಲಾವಣೆಗಳಾಗಿವೆ. ಇಂದು ಕೇವಲ ಆಂಗ್ಲಭಾಷೆಯಲ್ಲಿಮಾತಾಡುವುದಷ್ಟೇ ಅಲ್ಲಅವರಂತೆಯೇ ಜೀವನ ಸಾಗಿಸುವ ಮನೋಭಾವನೆ ಹೆಚ್ಚುತ್ತಿರುವುದು ದುರ್ದೈವದ ಸಂಗತಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಸಂಜೀವಕುಮಾರ ಹುಲಗಿ ಟ್ರಸ್ಟ್ನ ಧ್ಯೇಯೋದ್ದೇಶ ಹಾಗೂ ಪರಿಚಯ ಮಾಡಿದರು.
ಸಮಾರಂಭದಲ್ಲಿಗಣ್ಯರಾದ ಡಾ.ಎಂ.ಎಂ.ಜೋಶಿ, ನಾಡೋಜ ಡಾ.ಮಹೇಶ ಜೋಶಿ,ಖ್ಯಾತ ಗಾಯಕಿ ದೀಪಿಕಾ ಪಾಂಡುರಂಗಿ, ಪಂ.ಶಂಕರಭಟ್ ಜೋಶಿ, ಪಂ.ರವಿಆಚಾರ್ಯ,ಎ.ಸಿ.ಗೋಪಾಲ, ಅಧ್ಯಕ್ಷತೆ ವಹಿಸಿದ್ದ ವಿಶ್ವ ವಿಪ್ರ ಸೇವಾ ಟ್ರಸ್ಟ್ ಅಧ್ಯಕ್ಷ ಲಕ್ಷಣ ಕುಲಕರ್ಣಿ ಹಾಗೂ ಟ್ರಸ್ಟ್ ಎಲ್ಲಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.
ಎನ್.ಆರ್.ಕುಲಕರ್ಣಿ, ಎಂ.ಬಿ.ನಾತು, ಮನು ಅಯ್ಯಂಗಾರ, ಹನುಮಂತ ಡಂಬಳ, ರಾಜಾ ದೇಸಾಯಿ, ಅರವಿಂದ ಕುರ್ತಕೋಟಿ, ರಾಜು ಪಾಟೀಲ ಕುಲಕರ್ಣಿ, ಸುನೀಲ ಗುಮಾಸ್ತೆ, ಡಾ.ಬಿ.ಬಿ.ಪಾಟೀಲ, ಶಂಕರ ಪಾಟೀಲ ಮತ್ತಿತರರು ಇದ್ದರು.
ಪದ್ಮಜಾ ಮಹಿಳಾ ಮಂಡಳದವರು ಪ್ರಾರ್ಥಿಸಿದರು. ಮಾಯಾ ರಾಮನ್ ನಿರೂಪಿಸಿದರು. ಡಾ.ರಾಮಚಂದ್ರ ಕಾರಟಗಿ ಸ್ವಾಗತಿಸಿದರು.
ಸ್ವಾವಲಂಬಿಗಳಾಗಿ...
ವೃತ್ತಿಯಲ್ಲಿಯಾವುದೇ ಮೇಲು-ಕೀಳು ಎಂಬ ಭೇದ ಮಾಡದೇ ವಿಪ್ರ ಸಮಾಜವು ಸ್ವಾವಲಂಬಿಯಾಗಿ ಬದುಕಬೇಕಿದೆ. ಯಾವುದೇ ಉದ್ಯೋಗವನ್ನು ಆಯ್ಕೆ ಮಾಡಿಕೊಂಡರು ಅದರಲ್ಲಿಶ್ರಮಿವಹಿಸಿ ದುಡಿದಾಗ ಮಾತ್ರ ಯಶಸ್ಸು ಲಭಿಸುತ್ತದೆ. ಬೇರೆಯವರ ಬಳಿ ಉದ್ಯೋಗಕ್ಕೆ ಕೈ ಒಡ್ಡುವ ವ್ಯವಸ್ಥೆಯಿಂದ ವಿಪ್ರ ಸಮಾಜ ಹೊರಬರಬೇಕಿದೆ ಎಂದು ಡಾ.ಎಂ.ಎಂ.ಜೋಶಿ ಹೇಳಿದರು.