ಆ್ಯಪ್ನಗರ

'ಬಿಜೆಪಿ ಸರಕಾರಕ್ಕೀಗ ಮಾಡಿದ್ದುಣ್ಣೋ ಮಹರಾಯಾ ಗತಿ': ಕೋನರೆಡ್ಡಿ ವ್ಯಂಗ್ಯ

ಕೊರೊನಾ ಬಿಕ್ಕಟ್ಟಿನ ನಡುವೆ ರಾಜ್ಯದಲ್ಲಿ ರಾಜಕೀಯ ಬಿರುಸುಗೊಂಡಿದೆ. ಬಿಜೆಪಿಯಲ್ಲಿ ಭಿನ್ನಮತ ಹೊಗೆಯಾಡುತ್ತಿದೆ. ಸಚಿವ ಸ್ಥಾನ ಆಕಾಂಕ್ಷಿಗಳು ಬಿಎಸ್‌ವೈ ವಿರುದ್ಧ ಅಸಮಾಧಾನಗೊಂಡಂತೆ ಕಾಣುತ್ತಿದೆ. ಈ ಹಿನ್ನೆಲೆ ಜೆಡಿಎಸ್‌ನ ಮಾಜಿ ಶಾಸಕ ಎನ್‌.ಎಚ್‌ ಕೋನರೆಡ್ಡಿ ಪ್ರತಿಕ್ರಿಯೆ ನೀಡಿದ್ದು, ಸರಕಾರ ಮಾಡಿದ್ದನ್ನು ಅನುಭವಿಸಬೇಕು ಎಂದು ಹೇಳಿದ್ದಾರೆ.

Vijaya Karnataka Web 29 May 2020, 7:43 pm
ಧಾರವಾಡ: ಪ್ರಜಾಪ್ರಭುತ್ವದಲ್ಲಿ ಸ್ಥಾಪನೆಯಾದ ಸರಕಾರವನ್ನು ಕೆಡವಲು ಬುನಾದಿ ಹಾಕಿದವರೇ ಬಿಜೆಪಿಯವರು. ಇವತ್ತು ಅದೇ ಬಿಜೆಪಿಯಲ್ಲಿ25 ಶಾಸಕರು ಸಚಿವ ಸ್ಥಾನ ಸಿಕ್ಕಿಲ್ಲವೆಂದು ಅಸಮಾಧಾನಗೊಂಡಿದ್ದು, ಆಶ್ಚರ್ಯ ಮೂಡಿಸಿದೆ ಎಂದು ಮಾಜಿ ಶಾಸಕ ಎನ್‌.ಎಚ್‌.ಕೋನರೆಡ್ಡಿ ಹೇಳಿದರು.
Vijaya Karnataka Web ಎನ್‌.ಎಚ್‌.ಕೋನರೆಡ್ಡಿ
ಮಾಜಿ ಶಾಸಕ ಎನ್‌.ಎಚ್‌.ಕೋನರೆಡ್ಡಿ (ಫೈಲ್‌ ಫೋಟೋ)


ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ ಕತ್ತಿಯನ್ನು ರಾಜ್ಯಸಭಾ ಸದಸ್ಯ ಮಾಡುವುದಾಗಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯವರು ಭರವಸೆ ಕೊಟ್ಟಿದ್ದರು. ಈಗ ಅದು ಈಡೇರದ ಕಾರಣ ಎಲ್ಲೋ ಒಂದು ಕಡೆ ಅಸಮಾಧಾನ ಹೊಗೆ ಆಡುತ್ತಿದೆ ಎಂದರು.

ಉಮೇಶ ಕತ್ತಿ ಸೀನಿಯರ್‌ ಲೀಡರ್‌. ಅವರು ಉತ್ತರ ಕರ್ನಾಟಕದಲ್ಲಿ ತಮ್ಮದೇ ಆದ ಪ್ರಭಾವ ಹೊಂದಿದ್ದಾರೆ. ಹೀಗಾಗಿ ಅವರಿಗೆ ಸಚಿವ ಸ್ಥಾನ ನೀಡಿದರೆ ಸ್ವಾಗತ. ಕುಮಾರಸ್ವಾಮಿ ಅವರ ಸರಕಾರವನ್ನು ತೆಗೆದು ಹಾಕಿದ್ದು ಬಿಜೆಪಿಯವರು. ಮುಳ್ಳಿಗೆ ಮುಳ್ಳು, ಸೇಡಿಗೆ ಸೇಡು, ಮಾಡಿದ್ದುಣ್ಣೋ ಮಾಹಾರಾಯ ಅನ್ನೋ ಹಾಗೆ ಆಗಿದೆ ಎಂದು ಕೋನರೆಡ್ಡಿ ವ್ಯಂಗ್ಯವಾಡಿದರು.

'22 'ಕೈ' ಶಾಸಕರು ಸಂಪರ್ಕದಲ್ಲಿ; ಐವರು ತಕ್ಷಣ ರಾಜೀನಾಮೆಗೆ ಸಿದ್ಧʼ: ರಮೇಶ್‌ ಜಾರಕಿಹೊಳಿ

ಕೊರೊನಾ ಬಿಕ್ಕಟ್ಟಿನ ನಡುವೆಯೂ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಬಿಎಸ್‌ವೈ ಸರಕಾರದಲ್ಲಿ ಸಚಿವ ಸ್ಥಾನ ಸಿಗದ ಹಿರಿಯ ನಾಯಕರು ಸರಕಾರದ ವಿರುದ್ಧ ಮುನಿಸನ್ನು ಹೊರಹಾಕುತ್ತಿದ್ದಾರೆ. ಇದರ ಜೊತೆ ವಲಸಿಗರಿಗೆ ಯಡಿಯೂರಪ್ಪ ಮಣೆ ಹಾಕುತ್ತಿರುವುದು ಮೂಲ ಬಿಜೆಪಿಗರ ಕಣ್ಣನ್ನು ಕೆಂಪಗಾಗಿಸಿದೆ.

'ರಾಜ್ಯದಲ್ಲಿ ಶೀಘ್ರ ಚುನಾವಣೆ, ಬಿಜೆಪಿಯವರಿಂದಲೇ ಸರಕಾರ ಪತನʼ: ಡಿ.ಕೆ.ಸುರೇಶ್‌ ಭವಿಷ್ಯ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ