ಆ್ಯಪ್ನಗರ

ಸಂಭ್ರಮ, ಸಡಗರ ಮಧ್ಯ ಗಣೇಶ ವಿಸರ್ಜನೆ

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿ ಹಾಗೂ ಧಾರವಾಡದ ವಿವಿಧ ಸ್ಥಳಗಳಲ್ಲಿಪ್ರತಿಷ್ಟಾಪಿಸಲಾದ 200ಕ್ಕೂ ಹೆಚ್ಚು ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಒಂಬತ್ತನೇ ದಿನ ಮಂಗಳವಾರ ಸಡಗರ, ಸಂಭ್ರಮ ಮತ್ತು ಭಕ್ತಿಪೂರ್ವಕವಾಗಿ ವಿಸರ್ಜನೆ ಮಾಡಲಾಯಿತು.

Vijaya Karnataka 11 Sep 2019, 5:00 am
ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿ ಹಾಗೂ ಧಾರವಾಡದ ವಿವಿಧ ಸ್ಥಳಗಳಲ್ಲಿಪ್ರತಿಷ್ಟಾಪಿಸಲಾದ 200ಕ್ಕೂ ಹೆಚ್ಚು ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಒಂಬತ್ತನೇ ದಿನ ಮಂಗಳವಾರ ಸಡಗರ, ಸಂಭ್ರಮ ಮತ್ತು ಭಕ್ತಿಪೂರ್ವಕವಾಗಿ ವಿಸರ್ಜನೆ ಮಾಡಲಾಯಿತು.
Vijaya Karnataka Web DRW-10MANJU4E


ಹಳೇ ಹುಬ್ಬಳ್ಳಿಯಲ್ಲಿಬರುವ ದುರ್ಗದಬೈಲ್‌(9 ಅಡಿ ಗಣಪ), ಕಂಬಾರ ಸಾಲ, ಮೇದಾರ ಓಣಿ, ನವ ಆಯೋಧ್ಯನಗರ, ಹಿರೇಪೇಟ, ಗುಡಿ ಓಣಿ, ದಾಳಿಂಬರ ಪೇಟ, ಚನ್ನಪೇಟ, ಬಾಣತಿಕಟ್ಟಿ ಓಣಿ, ಕಾಳಿಕಾದೇವಸ್ಥಾನ, ಅಕ್ಕ ಸಾಲಿಗರ ಓಣಿ ಸೇರಿದಂತೆ ವಿವಿಧ ಸ್ಥಳಗಳಲ್ಲಿಪ್ರತಿಷ್ಟಾಪಿಸಲಾದ ಸಾರ್ವಜನಿಕ ಗಣಪತಿ ಮೂರ್ತಿಗಳ ವಿಸರ್ಜನೆ ನಡೆಯಿತು.

ಕುಣಿದು ಕುಪ್ಪಳಿಸಿದ ಯುವಪಡೆ...
9ನೇ ದಿನದ ಸಾರ್ವಜನಿಕ ಗಣೇಶ ಮೂರ್ತಿ ವಿಸರ್ಜನೆಯ ಮೆರವಣಿಗೆಯಲ್ಲಿಭಾಗವಹಿಸಿದ್ದ ಯುವಕ-ಯುವತಿಯರು, ಮಹಿಳೆಯರು, ಮಕ್ಕಳು ಅಕ್ಷರಶಃ ಕುಣಿದು ಕುಪ್ಪಳಿಸುವ ಮೂಲಕ ಹುಬ್ಬಳ್ಳಿ ಗಣೇಶನ ವಿಶೇಷತೆ ಸಾರಿದರು. ಮೆರವಣಿಗೆಯ ಉದ್ದಕ್ಕೂ ಗಣಪತಿ ಬಪ್ಪಾ ಮೋರಯ್ಯಾ...ಎಂಬ ಜಯ ಘೋಷಣೆ ಹಾಗೂ ಡಿಜೆ ಸಂಗೀತದ ಅಬ್ಬರ ಜೋರಾಗಿತ್ತು. ಮೆರವಣಿಗೆಯಲ್ಲಿಕೆಲ ಯುವಕ-ಯುವತಿಯರು ಪರಸ್ಪರ ಬಣ್ಣ ಎರಚುವ ಮೂಲಕ ಸಂಭ್ರಮಿಸಿದರು. ಮೆರವಣಿಗೆಯ ಉದ್ದಕ್ಕೂ ಪೊಲೀಸ್‌ ಬಂದೋ ಬಸ್‌್ತ ನಿಯೋಜಿಸಲಾಗಿತ್ತು.

ಇದಕ್ಕೂ ಮುನ್ನ ದುರ್ಗದಬೈಲ್‌ ಸರ್ಕಲ್‌ನಲ್ಲಿನಡೆದ ಸಾರ್ವಜನಿಕ ಸಮಾರಂಭದಲ್ಲಿಗಣ್ಯರು ಗಣಪತಿ ವಿಸರ್ಜನಾ ಮೆರವಣಿಗೆಗೆ ಚಾಲನೆ ನೀಡಿದರು. ನಂತರ ಆರಂಭವಾದ ಮೆರವಣಿಗೆ ಚನ್ನಪೇಟೆ, ಅರವಿಂದನಗರ, ಕಾರವಾರ ರಸ್ತೆ, ಗಿರಣಿಚಾಳ ಮೂಲಕ ಹಾಯ್ದು ಗ್ಲಾಸ್‌ ಹೌಸ್‌ಗೆ ಆಗಮಿಸಿತು. ಗ್ಲಾಸ್‌ಹೌಸ್‌ ಗಣೇಶ ಬಾವಿಯಲ್ಲಿನೂರಾರು ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಯಿತು. ನಂತರ ಬೃಹದಾಕಾರದ ಗಣೇಶ ಮೂರ್ತಿಗಳನ್ನು ಹೊಸೂರು ಸರ್ಕಲ್‌ ಮಾರ್ಗವಾಗಿ ಮೆರವಣಿಗೆ ಮೂಲಕ ಅಲ್ಲಿನ ಹೊಸೂರು ಬಾವಿಯಲ್ಲಿ ವಿದಾಯ ಹೇಳಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ