ಸಂಭ್ರಮದ ಗುರುಪೂರ್ಣಿಮೆ
ಹುಬ್ಬಳ್ಳಿ: ವಿಜಯನಗರ ಸಮೀಪದ ಅಧ್ಯಾಪಕನಗರದಲ್ಲಿರುವ ಸದ್ಗುರು ಶ್ರೀ ಬ್ರಹ್ಮ ಚೈತನ್ಯ ಮಂದಿರದಲ್ಲಿ ಗುರುಪೂರ್ಣಮೆ ಉತ್ಸವವನ್ನು ಮಂಗಳವಾರ ಸಂಭ್ರಮದಿಂದ ಆಚರಿಸಲಾಯಿತು.
Vijaya Karnataka 17 Jul 2019, 5:00 am
ಹುಬ್ಬಳ್ಳಿ: ವಿಜಯನಗರ ಸಮೀಪದ ಅಧ್ಯಾಪಕನಗರದಲ್ಲಿರುವ ಸದ್ಗುರು ಶ್ರೀ ಬ್ರಹ್ಮ ಚೈತನ್ಯ ಮಂದಿರದಲ್ಲಿ ಗುರುಪೂರ್ಣಮೆ ಉತ್ಸವವನ್ನು ಮಂಗಳವಾರ ಸಂಭ್ರಮದಿಂದ ಆಚರಿಸಲಾಯಿತು.
ಪ್ರಾರಂಭದಲ್ಲಿ ವೈದಿಕರಿಂದ ರುದ್ರಾಭಿಷೇಕ ನಡೆಯಿತು. ನಂತರ ಮಹಿಳೆಯರಿಂದ ಸಾಮೂಹಿಕವಾಗಿ ಶ್ರೀರಾಮ ಭಜನಾವಳಿ, ರಾಮರಕ್ಷಸ್ತೋತ್ರ, ಹನುಮಾನ ಚಾಲಿಸ ಪಠಣೆ ಮತ್ತು ಶ್ರೀ ಬ್ರಹ್ಮಚೈತನ್ಯ ಮಹಾರಾಜರ ಭಜನೆ ಹಾಡುಗಳನ್ನು ಹಾಡಲಾಯಿತು.
ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎಚ್.ಪಿ. ಶಾರದ, ಮಂದಿರದ ಅಧ್ಯಕ್ಷೆ ಪದ್ಮಾವತಿ ಅಶ್ವಸ್ಥನವರ, ದೇವಿಭಟ್ಟ ಮತ್ತು ಸುಧಾ ಮುತ್ತಗಿ ಅವರನ್ನು ಸನ್ಮಾನಿಸಲಾಯಿತು. ಸುನಂದ ನಾಡಗೀರ ಮಂದರಕ್ಕೆ ದೇಣಿಗೆ ನೀಡುವುದಾಗಿ ತಿಳಿಸಿದರು. ಕಾರ್ಯದರ್ಶಿ ಕಾವೇರಿ ದೇಸಾಯಿ ವಂದಿಸಿದರು.
ಪ್ರಾರಂಭದಲ್ಲಿ ವೈದಿಕರಿಂದ ರುದ್ರಾಭಿಷೇಕ ನಡೆಯಿತು. ನಂತರ ಮಹಿಳೆಯರಿಂದ ಸಾಮೂಹಿಕವಾಗಿ ಶ್ರೀರಾಮ ಭಜನಾವಳಿ, ರಾಮರಕ್ಷಸ್ತೋತ್ರ, ಹನುಮಾನ ಚಾಲಿಸ ಪಠಣೆ ಮತ್ತು ಶ್ರೀ ಬ್ರಹ್ಮಚೈತನ್ಯ ಮಹಾರಾಜರ ಭಜನೆ ಹಾಡುಗಳನ್ನು ಹಾಡಲಾಯಿತು.
ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎಚ್.ಪಿ. ಶಾರದ, ಮಂದಿರದ ಅಧ್ಯಕ್ಷೆ ಪದ್ಮಾವತಿ ಅಶ್ವಸ್ಥನವರ, ದೇವಿಭಟ್ಟ ಮತ್ತು ಸುಧಾ ಮುತ್ತಗಿ ಅವರನ್ನು ಸನ್ಮಾನಿಸಲಾಯಿತು. ಸುನಂದ ನಾಡಗೀರ ಮಂದರಕ್ಕೆ ದೇಣಿಗೆ ನೀಡುವುದಾಗಿ ತಿಳಿಸಿದರು. ಕಾರ್ಯದರ್ಶಿ ಕಾವೇರಿ ದೇಸಾಯಿ ವಂದಿಸಿದರು.