ಧಾರವಾಡ : ಬರದ ಕರಿಛಾಯೆ ಮಧ್ಯೆಯೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಂಡಿಸುತ್ತಿರುವ ರಾಜ್ಯ ಬಜೆಟ್ ಜಿಲ್ಲೆಯಲ್ಲಿ ಭಾರಿ ನಿರೀಕ್ಷೆ ಹುಟ್ಟುಹಾಕಿದೆ. ಹುಬ್ಬಳ್ಳಿ- ಅಂಕೋಲಾ ರೈಲು ಮಾರ್ಗ ನಿರ್ಮಾಣಕ್ಕೆ ಪೂರಕ ವಾತಾವರಣ, ಐಐಟಿ ಮೂಲ ಸೌಕರ್ಯಕ್ಕೆ ಅಗತ್ಯಅನುದಾನ ಸೇರಿದಂತೆ ನೂರಾರು ನಿರೀಕ್ಷೆಗಳ ಮೂಟೆಯನ್ನು ಜಿಲ್ಲೆಯ ಜನರು ಹೊತ್ತು ಕುಳಿತಿದ್ದಾರೆ.
2016- 17ನೇ ಸಾಲಿನ ರಾಜ್ಯ ಬಜೆಟ್ನಲ್ಲಿ ಬರ ನಿರ್ವಹಣೆ, ರೈತರ ಸಾಲ ಮನ್ನಾ, ಹು- ಧಾ ನಗರಗಳ ರಸ್ತೆ ಅಗಲೀಕರಣ,ಕೈಗಾರಿಕಾ ಅಭಿವೃದ್ಧಿಗೆ ವಿಶೇಷ ಅನುದಾನ ಸಿಗುವ ಜತೆಗೆ ಹಲವಾರು ಬೇಡಿಕೆಗಳು ಈಡೇರುವಆಸೆ ಜನರಲ್ಲಿದೆ. ಕೇಂದ್ರದಿಂದ ಐಐಟಿ, ಅಮೃತ್ ಯೋಜನೆಗಳು ಧಾರವಾಡಕ್ಕೆ ಮಂಜೂರು ಆಗಿದ್ದರಿಂದ ಇದಕ್ಕೆ ಪ್ರತಿಯಾಗಿ ರಾಜ್ಯ ಸರಕಾರವೂ ಹಲವು ಕೊಡುಗೆಗಳನ್ನು ನೀಡಬಹುದು ಎಂಬ ನಿರೀಕ್ಷೆ ಜನರಲ್ಲಿದೆ.
ಹುಬ್ಬಳ್ಳಿ- ಅಂಕೋಲ ಮಾರ್ಗಕನಸು 1998ರಿಂದಲೂ ವಿವಾದದಕೇಂದ್ರಬಿಂದುವಾಗಿದ್ದ ಹುಬ್ಬಳ್ಳಿ- ಅಂಕೋಲಾ ರೈಲ್ವೆ ಮಾರ್ಗ ನಿರ್ಮಾಣಕ್ಕೆ ರಾಷ್ಟ್ರೀಯ ಹಸಿರುನ್ಯಾಯಮಂಡಳಿ (ಎನ್ಜಿಟಿ) ಇತ್ತೀಚೆಗಷ್ಟೇ ಒಪ್ಪಿಗೆ ನೀಡಿದೆ. ಈ ಕುರಿತಂತೆ ಎನ್ಜಿಟಿ ರೈಲ್ವೆ ಇಲಾಖೆಗೆಪತ್ರ ಬರೆದಿದ್ದು, ರಾಜ್ಯ ಸರಕಾರದೊಂದಿಗೆ ಚರ್ಚೆ ನಡೆಸಲು ಸೂಚಿಸಿದೆ. ಹೀಗಾಗಿ ಅಗತ್ಯ ಭೂಮಿಹಸ್ತಾಂತರ ಸೇರಿದಂತೆ 50*50 ಮಾದರಿಯಲ್ಲಿ ಯೋಜನೆ ಅನುಷ್ಠಾನಕ್ಕೆ ಸ್ಪಂದಿಸಲು ರಾಜ್ಯಸರಕಾರ ವಿಶೇಷ ಅನುದಾನ ಮಂಜೂರು ಮಾಡಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. ಬಳ್ಳಾರಿಮತ್ತು ಹೊಸಪೇಟೆಯಿಂದ ಕಬ್ಬಿಣದ ಅದಿರು ಸಾಗಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಹುಬ್ಬಳ್ಳಿ- ಅಂಕೋಲಾ ನಡುವೆ 168 ಕಿ.ಮೀ. ರೈಲ್ವೆ ಮಾರ್ಗ ನಿರ್ಮಾಣದ ಪ್ರಸ್ತಾವನೆಇತ್ತು. ಆದರೆ, ಪಶ್ಚಿಮಘಟ್ಟದಲ್ಲಿ ಅಪಾರ ಪ್ರಮಾಣದ ಪರಿಸರ ಹಾನಿ ಆಗಲಿದೆ ಎಂಬ ಅರ್ಜಿಸಲ್ಲಿಕೆಯಾದ ಹಿನ್ನೆಲೆಯಲ್ಲಿ ಆರಂಭವಾಗಿದ್ದ ಕಾಮಗಾರಿಗೆ ಕೋರ್ಟ್ ತಡೆಯಾಜ್ಞೆ ಬಿದ್ದಿತ್ತು. ಇದೀಗಎನ್ಜಿಟಿ ಹಸಿರು ನಿಶಾನೆ ತೋರಿದ್ದರಿಂದ ರಾಜ್ಯ ಸರಕಾರ ಇದಕ್ಕೆ ಹೇಗೆ ಸ್ಪಂದಿಸಲಿದೆಎಂಬುದನ್ನು ನೋಡಬೇಕಿದೆ. ಈ ಮಾರ್ಗ ನಿರ್ಮಾಣ ಆದಲ್ಲಿ ಧಾರವಾಡ ಮಾತ್ರವಲ್ಲ ಉತ್ತರಕರ್ನಾಟಕದ ನಾನಾ ಜಿಲ್ಲೆಗಳಲ್ಲಿ ಸರಕು ಸಾಗಾಟಕ್ಕೆ ಸೂಕ್ತ ರೈಲ್ವೆ ಸೌಲಭ್ಯ ಸಿಕ್ಕಂತಾಗಲಿದೆ.
ಐಐಟಿಗೆ ಪೂರಕ ಸೌಲಭ್ಯ ಧಾರವಾಡ ಜಿಲ್ಲೆಗೆ ಐಐಟಿ ಮಂಜೂರು ಆಗಿದೆ. 2016- 17 ಸಾಲಿನಿಂದ ತಾತ್ಕಾಲಿಕವಾಗಿ ಬೇಲೂರಿನ ವಾಲ್ಮೀ ಕಟ್ಟಡದಲ್ಲಿ ಐಐಟಿ ಶೈಕ್ಷಣಿಕಚಟುವಟಿಕೆಗಳು ಕಾರ್ಯಾರಂಭಗೊಳ್ಳಲಿದೆ. ಇದಕ್ಕೆ ಅಗತ್ಯ ಸೌಲಭ್ಯವನ್ನು ಕಲ್ಪಿಸಬೇಕಿದೆ. ಈ ಮಧ್ಯೆ ಕಾಯಂ ಕಟ್ಟಡಕ್ಕೆ ಮುಮ್ಮಿಗಟ್ಟಿ ಹಾಗೂ ಕೆಲಗೇರಿ ವ್ಯಾಪ್ತಿಯಲ್ಲಿ ಜಮೀನುಗುರುತಿಸಲಾಗಿದ್ದು, ಈ ಪೈಕಿ ಕೆಲ ರೈತರು ಭೂಮಿ ನೀಡಲು ಹಿಂದೇಟು ಹಾಕಿ ಕೋರ್ಟ್ ಮೊರೆಹೋಗಿದ್ದಾರೆ. ಹೀಗಾಗಿ ರೈತರೊಂದಿಗೆ ಸಂಧಾನ ಸಭೆ ನಡೆಸಿ ಸಮಸ್ಯೆ ಬಗೆಹರಿಸುವ ಜತೆಗೆಐಐಟಿಗೆ ನೀರು, ರಸ್ತೆ, ವಿದ್ಯುತ್ ಸೌಲಭ್ಯ ಕಲ್ಪಿಸಲು ರಾಜ್ಯ ಬಜೆಟ್ನಲ್ಲಿ ವಿಶೇಷ ಅನುದಾನಸಿಗುವ ನಿರೀಕ್ಷೆ ಮೂಡಿದೆ.
ಕಳೆದ ತಿಂಗಳಷ್ಟೇ ನಡೆದ ಇನ್ವೆಸ್ಟ್ ಕರ್ನಾಟಕದಲ್ಲಿ ಉತ್ತರ ಕರ್ನಾಟಕಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ಕೈಗಾರಿಕೆಗಳು ಬಂದಿಲ್ಲ. ಈಭಾಗದಲ್ಲಿ ಅಂದಾಜು, 7,500 ಕೋಟಿ ರೂ. ಮಾತ್ರ ಹೂಡಿಕೆ ಆಗುತ್ತಿದೆ. ಹೀಗಾಗಿ ಕೈಗಾರಿಕೆಗೆಪೂರಕ ವಾತಾವರಣ ಸೃಷ್ಟಿಸುವ ನಿಟ್ಟಿನಲ್ಲಿ ಮೂಲ ಸೌಕರ್ಯ ಕಲ್ಪಿಸಲು ಒನ್ಟೈಮ್ ಇನ್ವೆಸ್ಟ್ಮೆಂಟ್ ಘೋಷಿಸಬೇಕಿದೆ. ಅಂದರೆ ಗಾಮನಗಟ್ಟಿಯಲ್ಲಿನ ಇಂಡಸ್ಟ್ರೀಯಲ್ ಎಸ್ಟೇಟ್ ನಿರ್ಮಾಣಗೊಂಡು ಐದು ವರ್ಷ ಕಳೆದರೂ ಅಲ್ಲಿ ಮೂಲ ಸೌಲಭ್ಯವೇ ಇಲ್ಲದಾಗಿದೆ. ಹಾಗೆಯೇ ಹುಬ್ಬಳ್ಳಿಯಲ್ಲಿರುವ ಐಟಿಪಾರ್ಕ್ನಲ್ಲಿರುವ ಅಂಗಡಿಗಳ ಬಾಡಿಗೆ ಕಡಿಮೆ ಮಾಡುವ ಜತೆಗೆ ವಿಮಾನ ನಿಲ್ದಾಣ ವಿಸ್ತರಣೆಗೆಪೂರಕವಾಗಿ ವಾಟರ್ ಲೈನ್, ವಿದ್ಯುತ್ ಲೈನ್ ತೆರವಿಗೆ ಅನುದಾನ ನೀಡಬೇಕು ಎಂಬುದುಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಪ್ರಮುಖ ಬೇಡಿಕೆ. ಈ ಕುರಿತಂತೆ ಪ್ರಸ್ತಾವನೆ ಕೂಡಸಲ್ಲಿಕೆ ಆಗಿದೆ.
ಪಾಲಿಕೆ ಅನುದಾನ ಹೆಚ್ಚಳಕ್ಕೆ ಬೇಡಿಕೆ ಹು- ಧಾ ಮಹಾನಗರ ಪಾಲಿಕೆರಾಜ್ಯದಲ್ಲಿಯೇ ದೊಡ್ಡದು. ಬೇರೆ ಕಡೆ 7- 8 ಲಕ್ಷ ಜನಸಂಖ್ಯೆ ಇದ್ದರೆ, ಇಲ್ಲಿ 12ಲಕ್ಷ ಇದೆ.ಹೀಗಾಗಿ ಪ್ರತಿ ವರ್ಷದಂತೆ 100 ಕೋಟಿ ಬದಲಾಗಿ 200 ಕೋಟಿ ರೂ. ವಿಶೇಷ ಅನುದಾನ ನೀಡುವಂತೆಆಡಳಿತ ಹಾಗೂ ಪ್ರತಿಪಕ್ಷಗಳ ನಾಯಕರು ಸರಕಾರವನ್ನು ಒತ್ತಾಯಿಸುತ್ತಲೇ ಇದ್ದಾರೆ.ಹಾಗೆಯೇ ಧಾರವಾಡದ ಸೂಪರ್ ಮಾರ್ಕೆಟ್, ಹುಬ್ಬಳ್ಳಿಯ ಗಾಂ ಮಾರ್ಕೆಟ್ ಅಭಿವೃದ್ಧಿ, ಯುಜಿಡಿ,ನಿರಂತರ ನೀರು ಯೋಜನೆಗಳಿಗೆ ಹೆಚ್ಚುವರಿ ಅನುದಾನದ ನಿರೀಕ್ಷೆ ಜತೆಗೆ ಧಾರವಾಡ- ;ಬೆಳಗಾವಿ ರೈಲು ಮಾರ್ಗ ಯೋಜನೆಗಳಿ ಅಗತ್ಯ ಭೂಮಿ ಸ್ವಾಧೀನ ಮಾಡಿಕೊಳ್ಳಲು ಬಜೆಟ್ನಲ್ಲಿ ಹಣಮಂಜೂರಾಗುವ ನಿರೀಕ್ಷೆಗಳು ಇವೆ.
ಬರ ಹಿನ್ನೆಲೆಯಲ್ಲಿ ಕೃಷಿಪರಿಕರಗಳ ಮೇಲಿನ ವ್ಯಾಟ್ ತೆರವು, ಮಾರುಕಟ್ಟೆಗಳಲ್ಲಿ ಸೆಸ್ ಪ್ರಮಾಣವನ್ನು 1.5ರಿಂದ1ಕ್ಕೆ ಇಳಿಸುವುದು, ಕಚ್ಚಾ ಹಾಗೂ ಜಿನ್ ಹತ್ತಿಯ ಹತ್ತಿಯ ಮೇಲಿನ ಶುಂಕ ಒಂದೇ ರೂಪದಲ್ಲಿಇರಬೇಕು. ಸೋಲಾರ್ ವಿದ್ಯುತ್ ಪಂಪ್ಸೆಟ್ಗಳಿಗೆ ತೆರಿಗೆ ವಿನಾಯತಿ, ಮಚ್ಚರದಾನಿ,ಇಸಿಪೆಟ್ಟಿಗೆ, ಮಿಕ್ಸಿ ಮೇಲಿನ ತೆರಿಗೆಯನ್ನೂ ಕಡಿತಗೊಳಿಸಬೇಕೆಂಬ ಮನವಿಗಳು ಧಾರವಾಡಜಿಲ್ಲೆಯಿಂದ ಸಲ್ಲಿಕೆ ಆಗಿದ್ದು, ಈ ಪೈಕಿ ಕೆಲವು ಈಡೇರುವ ಸಾಧ್ಯತೆಗಳಿವೆ.
ಬಾಕ್ಸ್..ಪ್ರಮುಖ ಬೇಡಿಕೆಗಳು • ಯುಜಿಡಿ ಯೋಜನೆಅನುಷ್ಠಾನಕ್ಕೆ 200 ಕೋಟಿ ಹೆಚ್ಚುವರಿ ಅನುದಾನದ ಬೇಡಿಕೆ • ಹು-ಞ;ಧಾಮಹಾನಗರ ಪಾಲಿಕೆಗೆ ಇನ್ನೂ 100 ಕೋಟಿ ಹೆಚ್ಚುರಿ ವಿಶೇಷ ಅನುದಾನ ನೀಡಿ • ಪಾಲಿಕೆವ್ಯಾಪ್ತಿಯ ಹಳ್ಳಿಗಳ ಅಭಿವೃದ್ಧಿಗೆ ವಿಶೇಷ ಅನುದಾನದ ಕೋರಿಕೆ • ಹುಬ್ಬಳ್ಳಿ- ಧಾರವಾಡ ಮಾರುಕಟ್ಟೆ ಅಗಲೀಕರಣಕ್ಕೆ ಸೇರಿದಂತೆ ಹುಡಾ ಕ್ರಿಯಾಯೋಜನೆಗೆ ಅಸ್ತು ಹೇಳಿ • ಪೂರ್ವವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸರಕಾರಿ ಕಾಲೇಜು ತೆರೆಯಲು ಒತ್ತಾಯ • ಹಳೇಹುಬ್ಬಳ್ಳಿಸರಕಾರಿ ಆಸ್ಪತ್ರೆ ಮೇಲ್ದರ್ಜೆಗೆ ಏರಿಸಲು ಒತ್ತಡ • ಚೆೆನ್ನಮ್ಮವೃತ್ತ- ಗಬ್ಬೂರ ಬೈಪಾಸ್ವರೆಗಿನ ರಸ್ತೆ ಅಗಲೀಕರಣಕ್ಕೆ ಆಗ್ರಹ • ಹುಬ್ಬಳ್ಳಿ- ಅಂಕೋಲಾ ಯೋಜನೆ ಅನುಷ್ಠಾನಕ್ಕೆ ಪೂರಕ ವಾತಾವರಣದ ನಿರೀಕ್ಷೆ • ಧಾರವಾಡ ಐಐಟಿಗೆ ಮೂಲ ಸೌಕರ್ಯವೊದಗಿಸಲು ವಿಶೇಷ ಅನುದಾನದ ಸಾಧ್ಯತೆ • ಕೈಗಾರಿಕಾಪ್ರದೇಶಗಳಲ್ಲಿ ಮೂಲ ಸೌಕರ್ಯ ಕಲ್ಪಿಸಲು ಅನುದಾನ ನೀರಿಕ್ಷೆ
2016- 17ನೇ ಸಾಲಿನ ರಾಜ್ಯ ಬಜೆಟ್ನಲ್ಲಿ ಬರ ನಿರ್ವಹಣೆ, ರೈತರ ಸಾಲ ಮನ್ನಾ, ಹು- ಧಾ ನಗರಗಳ ರಸ್ತೆ ಅಗಲೀಕರಣ,ಕೈಗಾರಿಕಾ ಅಭಿವೃದ್ಧಿಗೆ ವಿಶೇಷ ಅನುದಾನ ಸಿಗುವ ಜತೆಗೆ ಹಲವಾರು ಬೇಡಿಕೆಗಳು ಈಡೇರುವಆಸೆ ಜನರಲ್ಲಿದೆ. ಕೇಂದ್ರದಿಂದ ಐಐಟಿ, ಅಮೃತ್ ಯೋಜನೆಗಳು ಧಾರವಾಡಕ್ಕೆ ಮಂಜೂರು ಆಗಿದ್ದರಿಂದ ಇದಕ್ಕೆ ಪ್ರತಿಯಾಗಿ ರಾಜ್ಯ ಸರಕಾರವೂ ಹಲವು ಕೊಡುಗೆಗಳನ್ನು ನೀಡಬಹುದು ಎಂಬ ನಿರೀಕ್ಷೆ ಜನರಲ್ಲಿದೆ.
ಹುಬ್ಬಳ್ಳಿ- ಅಂಕೋಲ ಮಾರ್ಗಕನಸು 1998ರಿಂದಲೂ ವಿವಾದದಕೇಂದ್ರಬಿಂದುವಾಗಿದ್ದ ಹುಬ್ಬಳ್ಳಿ- ಅಂಕೋಲಾ ರೈಲ್ವೆ ಮಾರ್ಗ ನಿರ್ಮಾಣಕ್ಕೆ ರಾಷ್ಟ್ರೀಯ ಹಸಿರುನ್ಯಾಯಮಂಡಳಿ (ಎನ್ಜಿಟಿ) ಇತ್ತೀಚೆಗಷ್ಟೇ ಒಪ್ಪಿಗೆ ನೀಡಿದೆ. ಈ ಕುರಿತಂತೆ ಎನ್ಜಿಟಿ ರೈಲ್ವೆ ಇಲಾಖೆಗೆಪತ್ರ ಬರೆದಿದ್ದು, ರಾಜ್ಯ ಸರಕಾರದೊಂದಿಗೆ ಚರ್ಚೆ ನಡೆಸಲು ಸೂಚಿಸಿದೆ. ಹೀಗಾಗಿ ಅಗತ್ಯ ಭೂಮಿಹಸ್ತಾಂತರ ಸೇರಿದಂತೆ 50*50 ಮಾದರಿಯಲ್ಲಿ ಯೋಜನೆ ಅನುಷ್ಠಾನಕ್ಕೆ ಸ್ಪಂದಿಸಲು ರಾಜ್ಯಸರಕಾರ ವಿಶೇಷ ಅನುದಾನ ಮಂಜೂರು ಮಾಡಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. ಬಳ್ಳಾರಿಮತ್ತು ಹೊಸಪೇಟೆಯಿಂದ ಕಬ್ಬಿಣದ ಅದಿರು ಸಾಗಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಹುಬ್ಬಳ್ಳಿ- ಅಂಕೋಲಾ ನಡುವೆ 168 ಕಿ.ಮೀ. ರೈಲ್ವೆ ಮಾರ್ಗ ನಿರ್ಮಾಣದ ಪ್ರಸ್ತಾವನೆಇತ್ತು. ಆದರೆ, ಪಶ್ಚಿಮಘಟ್ಟದಲ್ಲಿ ಅಪಾರ ಪ್ರಮಾಣದ ಪರಿಸರ ಹಾನಿ ಆಗಲಿದೆ ಎಂಬ ಅರ್ಜಿಸಲ್ಲಿಕೆಯಾದ ಹಿನ್ನೆಲೆಯಲ್ಲಿ ಆರಂಭವಾಗಿದ್ದ ಕಾಮಗಾರಿಗೆ ಕೋರ್ಟ್ ತಡೆಯಾಜ್ಞೆ ಬಿದ್ದಿತ್ತು. ಇದೀಗಎನ್ಜಿಟಿ ಹಸಿರು ನಿಶಾನೆ ತೋರಿದ್ದರಿಂದ ರಾಜ್ಯ ಸರಕಾರ ಇದಕ್ಕೆ ಹೇಗೆ ಸ್ಪಂದಿಸಲಿದೆಎಂಬುದನ್ನು ನೋಡಬೇಕಿದೆ. ಈ ಮಾರ್ಗ ನಿರ್ಮಾಣ ಆದಲ್ಲಿ ಧಾರವಾಡ ಮಾತ್ರವಲ್ಲ ಉತ್ತರಕರ್ನಾಟಕದ ನಾನಾ ಜಿಲ್ಲೆಗಳಲ್ಲಿ ಸರಕು ಸಾಗಾಟಕ್ಕೆ ಸೂಕ್ತ ರೈಲ್ವೆ ಸೌಲಭ್ಯ ಸಿಕ್ಕಂತಾಗಲಿದೆ.
ಐಐಟಿಗೆ ಪೂರಕ ಸೌಲಭ್ಯ ಧಾರವಾಡ ಜಿಲ್ಲೆಗೆ ಐಐಟಿ ಮಂಜೂರು ಆಗಿದೆ. 2016- 17 ಸಾಲಿನಿಂದ ತಾತ್ಕಾಲಿಕವಾಗಿ ಬೇಲೂರಿನ ವಾಲ್ಮೀ ಕಟ್ಟಡದಲ್ಲಿ ಐಐಟಿ ಶೈಕ್ಷಣಿಕಚಟುವಟಿಕೆಗಳು ಕಾರ್ಯಾರಂಭಗೊಳ್ಳಲಿದೆ. ಇದಕ್ಕೆ ಅಗತ್ಯ ಸೌಲಭ್ಯವನ್ನು ಕಲ್ಪಿಸಬೇಕಿದೆ. ಈ ಮಧ್ಯೆ ಕಾಯಂ ಕಟ್ಟಡಕ್ಕೆ ಮುಮ್ಮಿಗಟ್ಟಿ ಹಾಗೂ ಕೆಲಗೇರಿ ವ್ಯಾಪ್ತಿಯಲ್ಲಿ ಜಮೀನುಗುರುತಿಸಲಾಗಿದ್ದು, ಈ ಪೈಕಿ ಕೆಲ ರೈತರು ಭೂಮಿ ನೀಡಲು ಹಿಂದೇಟು ಹಾಕಿ ಕೋರ್ಟ್ ಮೊರೆಹೋಗಿದ್ದಾರೆ. ಹೀಗಾಗಿ ರೈತರೊಂದಿಗೆ ಸಂಧಾನ ಸಭೆ ನಡೆಸಿ ಸಮಸ್ಯೆ ಬಗೆಹರಿಸುವ ಜತೆಗೆಐಐಟಿಗೆ ನೀರು, ರಸ್ತೆ, ವಿದ್ಯುತ್ ಸೌಲಭ್ಯ ಕಲ್ಪಿಸಲು ರಾಜ್ಯ ಬಜೆಟ್ನಲ್ಲಿ ವಿಶೇಷ ಅನುದಾನಸಿಗುವ ನಿರೀಕ್ಷೆ ಮೂಡಿದೆ.
ಕಳೆದ ತಿಂಗಳಷ್ಟೇ ನಡೆದ ಇನ್ವೆಸ್ಟ್ ಕರ್ನಾಟಕದಲ್ಲಿ ಉತ್ತರ ಕರ್ನಾಟಕಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ಕೈಗಾರಿಕೆಗಳು ಬಂದಿಲ್ಲ. ಈಭಾಗದಲ್ಲಿ ಅಂದಾಜು, 7,500 ಕೋಟಿ ರೂ. ಮಾತ್ರ ಹೂಡಿಕೆ ಆಗುತ್ತಿದೆ. ಹೀಗಾಗಿ ಕೈಗಾರಿಕೆಗೆಪೂರಕ ವಾತಾವರಣ ಸೃಷ್ಟಿಸುವ ನಿಟ್ಟಿನಲ್ಲಿ ಮೂಲ ಸೌಕರ್ಯ ಕಲ್ಪಿಸಲು ಒನ್ಟೈಮ್ ಇನ್ವೆಸ್ಟ್ಮೆಂಟ್ ಘೋಷಿಸಬೇಕಿದೆ. ಅಂದರೆ ಗಾಮನಗಟ್ಟಿಯಲ್ಲಿನ ಇಂಡಸ್ಟ್ರೀಯಲ್ ಎಸ್ಟೇಟ್ ನಿರ್ಮಾಣಗೊಂಡು ಐದು ವರ್ಷ ಕಳೆದರೂ ಅಲ್ಲಿ ಮೂಲ ಸೌಲಭ್ಯವೇ ಇಲ್ಲದಾಗಿದೆ. ಹಾಗೆಯೇ ಹುಬ್ಬಳ್ಳಿಯಲ್ಲಿರುವ ಐಟಿಪಾರ್ಕ್ನಲ್ಲಿರುವ ಅಂಗಡಿಗಳ ಬಾಡಿಗೆ ಕಡಿಮೆ ಮಾಡುವ ಜತೆಗೆ ವಿಮಾನ ನಿಲ್ದಾಣ ವಿಸ್ತರಣೆಗೆಪೂರಕವಾಗಿ ವಾಟರ್ ಲೈನ್, ವಿದ್ಯುತ್ ಲೈನ್ ತೆರವಿಗೆ ಅನುದಾನ ನೀಡಬೇಕು ಎಂಬುದುಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಪ್ರಮುಖ ಬೇಡಿಕೆ. ಈ ಕುರಿತಂತೆ ಪ್ರಸ್ತಾವನೆ ಕೂಡಸಲ್ಲಿಕೆ ಆಗಿದೆ.
ಪಾಲಿಕೆ ಅನುದಾನ ಹೆಚ್ಚಳಕ್ಕೆ ಬೇಡಿಕೆ ಹು- ಧಾ ಮಹಾನಗರ ಪಾಲಿಕೆರಾಜ್ಯದಲ್ಲಿಯೇ ದೊಡ್ಡದು. ಬೇರೆ ಕಡೆ 7- 8 ಲಕ್ಷ ಜನಸಂಖ್ಯೆ ಇದ್ದರೆ, ಇಲ್ಲಿ 12ಲಕ್ಷ ಇದೆ.ಹೀಗಾಗಿ ಪ್ರತಿ ವರ್ಷದಂತೆ 100 ಕೋಟಿ ಬದಲಾಗಿ 200 ಕೋಟಿ ರೂ. ವಿಶೇಷ ಅನುದಾನ ನೀಡುವಂತೆಆಡಳಿತ ಹಾಗೂ ಪ್ರತಿಪಕ್ಷಗಳ ನಾಯಕರು ಸರಕಾರವನ್ನು ಒತ್ತಾಯಿಸುತ್ತಲೇ ಇದ್ದಾರೆ.ಹಾಗೆಯೇ ಧಾರವಾಡದ ಸೂಪರ್ ಮಾರ್ಕೆಟ್, ಹುಬ್ಬಳ್ಳಿಯ ಗಾಂ ಮಾರ್ಕೆಟ್ ಅಭಿವೃದ್ಧಿ, ಯುಜಿಡಿ,ನಿರಂತರ ನೀರು ಯೋಜನೆಗಳಿಗೆ ಹೆಚ್ಚುವರಿ ಅನುದಾನದ ನಿರೀಕ್ಷೆ ಜತೆಗೆ ಧಾರವಾಡ- ;ಬೆಳಗಾವಿ ರೈಲು ಮಾರ್ಗ ಯೋಜನೆಗಳಿ ಅಗತ್ಯ ಭೂಮಿ ಸ್ವಾಧೀನ ಮಾಡಿಕೊಳ್ಳಲು ಬಜೆಟ್ನಲ್ಲಿ ಹಣಮಂಜೂರಾಗುವ ನಿರೀಕ್ಷೆಗಳು ಇವೆ.
ಬರ ಹಿನ್ನೆಲೆಯಲ್ಲಿ ಕೃಷಿಪರಿಕರಗಳ ಮೇಲಿನ ವ್ಯಾಟ್ ತೆರವು, ಮಾರುಕಟ್ಟೆಗಳಲ್ಲಿ ಸೆಸ್ ಪ್ರಮಾಣವನ್ನು 1.5ರಿಂದ1ಕ್ಕೆ ಇಳಿಸುವುದು, ಕಚ್ಚಾ ಹಾಗೂ ಜಿನ್ ಹತ್ತಿಯ ಹತ್ತಿಯ ಮೇಲಿನ ಶುಂಕ ಒಂದೇ ರೂಪದಲ್ಲಿಇರಬೇಕು. ಸೋಲಾರ್ ವಿದ್ಯುತ್ ಪಂಪ್ಸೆಟ್ಗಳಿಗೆ ತೆರಿಗೆ ವಿನಾಯತಿ, ಮಚ್ಚರದಾನಿ,ಇಸಿಪೆಟ್ಟಿಗೆ, ಮಿಕ್ಸಿ ಮೇಲಿನ ತೆರಿಗೆಯನ್ನೂ ಕಡಿತಗೊಳಿಸಬೇಕೆಂಬ ಮನವಿಗಳು ಧಾರವಾಡಜಿಲ್ಲೆಯಿಂದ ಸಲ್ಲಿಕೆ ಆಗಿದ್ದು, ಈ ಪೈಕಿ ಕೆಲವು ಈಡೇರುವ ಸಾಧ್ಯತೆಗಳಿವೆ.
ಬಾಕ್ಸ್..ಪ್ರಮುಖ ಬೇಡಿಕೆಗಳು • ಯುಜಿಡಿ ಯೋಜನೆಅನುಷ್ಠಾನಕ್ಕೆ 200 ಕೋಟಿ ಹೆಚ್ಚುವರಿ ಅನುದಾನದ ಬೇಡಿಕೆ • ಹು-ಞ;ಧಾಮಹಾನಗರ ಪಾಲಿಕೆಗೆ ಇನ್ನೂ 100 ಕೋಟಿ ಹೆಚ್ಚುರಿ ವಿಶೇಷ ಅನುದಾನ ನೀಡಿ • ಪಾಲಿಕೆವ್ಯಾಪ್ತಿಯ ಹಳ್ಳಿಗಳ ಅಭಿವೃದ್ಧಿಗೆ ವಿಶೇಷ ಅನುದಾನದ ಕೋರಿಕೆ • ಹುಬ್ಬಳ್ಳಿ- ಧಾರವಾಡ ಮಾರುಕಟ್ಟೆ ಅಗಲೀಕರಣಕ್ಕೆ ಸೇರಿದಂತೆ ಹುಡಾ ಕ್ರಿಯಾಯೋಜನೆಗೆ ಅಸ್ತು ಹೇಳಿ • ಪೂರ್ವವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸರಕಾರಿ ಕಾಲೇಜು ತೆರೆಯಲು ಒತ್ತಾಯ • ಹಳೇಹುಬ್ಬಳ್ಳಿಸರಕಾರಿ ಆಸ್ಪತ್ರೆ ಮೇಲ್ದರ್ಜೆಗೆ ಏರಿಸಲು ಒತ್ತಡ • ಚೆೆನ್ನಮ್ಮವೃತ್ತ- ಗಬ್ಬೂರ ಬೈಪಾಸ್ವರೆಗಿನ ರಸ್ತೆ ಅಗಲೀಕರಣಕ್ಕೆ ಆಗ್ರಹ • ಹುಬ್ಬಳ್ಳಿ- ಅಂಕೋಲಾ ಯೋಜನೆ ಅನುಷ್ಠಾನಕ್ಕೆ ಪೂರಕ ವಾತಾವರಣದ ನಿರೀಕ್ಷೆ • ಧಾರವಾಡ ಐಐಟಿಗೆ ಮೂಲ ಸೌಕರ್ಯವೊದಗಿಸಲು ವಿಶೇಷ ಅನುದಾನದ ಸಾಧ್ಯತೆ • ಕೈಗಾರಿಕಾಪ್ರದೇಶಗಳಲ್ಲಿ ಮೂಲ ಸೌಕರ್ಯ ಕಲ್ಪಿಸಲು ಅನುದಾನ ನೀರಿಕ್ಷೆ