ಆ್ಯಪ್ನಗರ

ಪ್ರತಿಭೆಯೊಂದಿಗೆ ಅನುಭವ ಅತ್ಯಗತ್ಯ

ಧಾರವಾಡ: ಪದ ಪೋಣಿಸಿ ಪದ್ಯ ಹೆಣೆಯಬೇಕೆಂದರೆ ಪ್ರತಿಭೆಯೊಂದಿಗೆ ಅನುಭವ ಅತ್ಯಗತ್ಯ. ಸತತ ಅಧ್ಯಯನದಿಂದ ಕ್ರಿಯಾಶೀಲರಾದ ಬರಹಗಾರರಿಗೆ ಕವಿತ್ವ ಒಲಿಯುತ್ತದೆ ಎಂದು ಡಾ.ಶಿವಾನಂದ ಟವಳಿ ಅಭಿಪ್ರಾಯಪಟ್ಟರು.

Vijaya Karnataka 16 Oct 2019, 5:00 am
ಧಾರವಾಡ: ಪದ ಪೋಣಿಸಿ ಪದ್ಯ ಹೆಣೆಯಬೇಕೆಂದರೆ ಪ್ರತಿಭೆಯೊಂದಿಗೆ ಅನುಭವ ಅತ್ಯಗತ್ಯ. ಸತತ ಅಧ್ಯಯನದಿಂದ ಕ್ರಿಯಾಶೀಲರಾದ ಬರಹಗಾರರಿಗೆ ಕವಿತ್ವ ಒಲಿಯುತ್ತದೆ ಎಂದು ಡಾ.ಶಿವಾನಂದ ಟವಳಿ ಅಭಿಪ್ರಾಯಪಟ್ಟರು.
Vijaya Karnataka Web experience with talent is essential
ಪ್ರತಿಭೆಯೊಂದಿಗೆ ಅನುಭವ ಅತ್ಯಗತ್ಯ


ಭೂಮಿ ಪ್ರತಿಷ್ಠಾನವು ಸಮಾಗಮ ತಿಂಗಳ ಕಾರ್ಯಕ್ರಮ ಅಂಗವಾಗಿ ಇಲ್ಲಿನ ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿಆಯೋಜಿದ್ದ ಮಹಾತ್ಮಾ ಗಾಂಧಿಜಿ 150ನೇ ಜಯಂತಿ, ಯುವ ಕವಿಗೋಷ್ಠಿ ಹಾಗೂ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮದಲ್ಲಿಮಾತನಾಡಿದರು.

ಡಾ.ಈರಣ್ಣ ಇಂಜಗನೇರಿ ಮಾತನಾಡಿ, ಪ್ರತಿ ತಿಂಗಳು ಸಮಾಗಮ ಆಯೋಜಿಸಲಾಗುತ್ತದೆ. ಇದು ಪ್ರತಿಷ್ಠಾನವು ಆಯೋಜಿಸಿದ 7ನೇಯ ತಿಂಗಳ ಕಾರ್ಯಕ್ರಮವಾಗಿದೆ ಎಂದರು.

ಯುವ ಕವಿಗೋಷ್ಠಿಯಲ್ಲಿರಾಜಶೇಖರ ಕಲಾಲ್‌, ಮಂಜುನಾಥ ವಡ್ಡರ, ಶ್ರೀಕಾಂತ ಕಾಂಬಳೆ, ಶಿವರಾಜ ಮೋತಿ, ಅಡವಿಸಿದ್ದೇಶ ಟವಳಿ, ದಸ್ತಗೀರ ಮುಲ್ತಾನಿ, ಲಕ್ಷ್ಮೇ ಮುದೇನೂರು, ರಿಹಂತ ಬೆಳಗಾವಿ, ಆನಂದ ಗುಂಡ್ಲೂರ ಮುಂತಾದ ಯುವ ಕವಿಗಳು ಭಾಗವಹಿಸಿ ಮಹಾತ್ಮಾ ಗಾಂಧೀಜಿ ಹಾಗೂ ಸ್ವಚ್ಛ ಭೂಮಿ, ಪರಿಸರ ಪ್ರಜ್ಞೆಯ ಕುರಿತ ಕವಿತೆ ವಾಚಿಸಿದರು. ಇದೇ ಸಂದರ್ಭದಲ್ಲಿಕವನ ವಾಚಿಸಿದ ಕವಿಗಳಿಗೆ ಪ್ರಮಾಣಪತ್ರ ಹಾಗೂ ಪುಸ್ತಕ ನೀಡಲಾಯಿತು.

ಇದಕ್ಕೂ ಮುನ್ನ ಸ್ವಚ್ಛ ಭೂಮಿ ನಮ್ಮ ಆರೋಗ್ಯ ಎಂಬ ಧ್ಯೇಯದೊಂದಿಗೆ ಭೂಮಿ ಪ್ರತಿಷ್ಠಾನದ ಸದಸ್ಯರು ಸೇರಿ ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತಿನ ಆವರಣ ಸ್ವಚ್ಛಗೊಳಿಸುವ ಮೂಲಕ ಸ್ವಚ್ಛತಾ ಶ್ರಮದಾನಕ್ಕೆ ಚಾಲನೆಯನ್ನು ನೀಡಿ ಪ್ಲಾಸ್ಟಿಕ್‌ ವಸ್ತು ಬಳಸದಂತೆ ಜಾಗೃತಿ ಮೂಡಿಸಲಾಯಿತು.ಡಾ. ವಿಜಯಲಕ್ಷ್ಮೇ ದಂಡಿನ, ಹಣಮಂತರಾಯ ಕಿಲಾರಿ, ವಿಶ್ವ ಪೂಜಾರ ಇದ್ದರು. ಸುನೀಲ್‌ ಶಾನವಾಡ ಸ್ವಾಗತಿಸಿದರು. ಮಹೇಂದ್ರ ಶಾಂತಗಿರಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ