ಆ್ಯಪ್ನಗರ

ಉರುಳಿ ಬಿದ್ದ ಟ್ರ್ಯಾಕ್ಟರ್‌:ರೈತರಿಂದ ಪ್ರತಿಭಟನೆ ಎಚ್ಚರಿಕೆ

ಪಟ್ಟಣದ ಹನ್ನೆರಡುಮಠದ ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್‌ ಉರುಳಿ ಬಿದ್ದು ಹಾಗೂ ಲಾರಿ ರಸ್ತೆ ಕೆಳಗೆ ಸಿಲುಕಿಹಾಕಿಕೊಂಡು ಸಂಚಾರಕ್ಕೆ ...

Vijaya Karnataka Web 9 Jan 2019, 5:00 am
ಕಲಘಟಗಿ:ಪಟ್ಟಣದ ಹನ್ನೆರಡುಮಠದ ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್‌ ಉರುಳಿ ಬಿದ್ದು ಹಾಗೂ ಲಾರಿ ರಸ್ತೆ ಕೆಳಗೆ ಸಿಲುಕಿಹಾಕಿಕೊಂಡು ಸಂಚಾರಕ್ಕೆ ವ್ಯತ್ಯಯ ಉಂಟಾದ ಘಟನೆ ಮಂಗಳವಾರ ಸಂಜೆ ಜರುಗಿದೆ.
Vijaya Karnataka Web fallen tractor protest warning from farmers
ಉರುಳಿ ಬಿದ್ದ ಟ್ರ್ಯಾಕ್ಟರ್‌:ರೈತರಿಂದ ಪ್ರತಿಭಟನೆ ಎಚ್ಚರಿಕೆ


ರಾಷ್ಟ್ರೀಯ ಹೆದ್ದಾರಿ 63ರ 106 ರಿಂದ 110 ಕಿಮೀ ವರೆಗಿನ ದ್ವಿಪಥ ರಸ್ತೆಯನ್ನು ಚತುಷ್ಪಥ ಕಾಂಕ್ರೀಟ ರಸ್ತೆಯನ್ನಾಗಿ ಅಭಿವೃದ್ಧಿಪಡಿಸುವ ಕಾಮಗಾರಿ ನಡೆಯುತ್ತಿದ್ದು ಇಲ್ಲಿ ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್‌ ಉರುಳಿ ಬಿದ್ದಿದ್ದರಿಂದ ಹಾಗೂ ಲಾರಿ ಕಾಂಕ್ರೀಟ್‌ ರಸ್ತೆ ಕೆಳಗೆ ಇಳಿದು ಸಿಲುಕಿಹಾಕಿಕೊಂಡ ಪರಿಣಾಮ ಸಂಜೆ ಎರಡು ಗಂಟೆ ಸಂಚಾರಕ್ಕೆ ಅಡಚಣೆ ಉಂಟಾುತು.

ಸೋಮವಾರ ಇದೇ ಸ್ಥಳದಲ್ಲಿ ಟ್ರ್ಯಾಕ್ಟರ್‌ ಉರುಳಿ ಬಿದ್ದು ರೈತರಿಗೆ ಸಾಕಷ್ಟು ಹಾನಿಯಾಗಿತ್ತು.ಈಗ ಮಂಗಳವಾರ ಮತ್ತೆ ಅದೇ ಸ್ಥಳದಲ್ಲಿ ಟ್ರ್ಯಾಕ್ಟರ್‌ ಬಿದ್ದು ರೈತರಿಗೆ ಆರ್ಥಿಕ ಹಾನಿಯಾಗಿದೆ.ರಸ್ತೆ ಕಾಮಗಾರಿ ಸರಿಯಾಗಿ ಮಾಡದೇ ಇರವುದರಿಂದ ಲಾರಿ ಟ್ರ್ಯಾಕ್ಟರ್‌ ಹಾಗೂ ಲಾರಿಗಳು ಅಪಘಾತಕ್ಕಿಡಾಗುತ್ತಿವೆ.ಸಿ ಪಿ ಐ ವಿಜಯ ಬಿರಾದಾರ ಹಾಗೂ ಪಿಎಸ್‌ಐ ಆನಂದ ಡೋಣಿ ರಸ್ತೆ ಸಂಚಾರಕ್ಕೆ ಅನಕೂಲ ಕಲ್ಪಿಸಿದರು.

ರಸ್ತೆ ಕಾಮಗಾರಿಯಿಂದ ಇಕ್ಕೆಲಗಳಲ್ಲಿ ತಗ್ಗು ಗುಂಡಿಗಳು ನಿರ್ಮಾಣವಾಗಿದ್ದು,ತಿರುವುಗಳಲ್ಲಿ ಯಾವುದೇ ಎಚ್ಚರಿಕೆಯ ನಾಮಫಲಕ ಹಾಗೂ ಸುರಕ್ಷ ತಾ ಮಾನದಂಡಗಳನ್ನು ಕೈಗೊಳ್ಳದೆ,ಗೊತ್ತುಗುರಿ ಇಲ್ಲದ ರೀತಿಯಲ್ಲಿ ಕಾಮಗಾರಿಯನ್ನು ನಡೆಸಲಾಗುತ್ತಿದೆ.ಇದರಿಂದ ವಾಹನ ಸವಾರಿಗೆ ಅಪಘಾತ ಭಯ ಕಾಡುತ್ತಿದೆ.ವಾಹನಗಳ ಓಡಾಟಕ್ಕೆ ರಸ್ತೆ ಸರಿ ಇಲ್ಲದೆ ಇರುವುದೇ ಇಂತಹ ಅಪಘಾತಗಳಿಗೆ ಕಾರಣವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಪ್ರತಿಭಟನೆ ಎಚ್ಚರಿಕೆ

ಗುತ್ತಿಗೆದಾರರು ಸರಿಯಾಗಿ ಕಾಮಗಾರಿ ನಿರ್ವಹಿಸದ ಕಾರಣ ರೈತರ ಕಬ್ಬು ತುಂಬಿದ ಲಾರಿ ಹಾಗೂ ಟ್ರ್ಯಾಕ್ಟರ್‌ಗಳು ಉರುಳಿ ಪದೇ ಪದೇ ಬಿದ್ದು ರೈತರು ನಷ್ಟ ಅನುಭವಿಸುತ್ತಿದ್ದಾರೆ.ಗುತ್ತಿಗೆದಾರರು ಸುಗಮ ಸಂಚಾರಕ್ಕೆ ಸರಿಯಾದ ಕಾಮಗಾರಿ ಕೈಗೊಳ್ಳದೆ ಇದ್ದರೆ ರೈತರು ಪ್ರತಿಭಟನೆ ಹಮ್ಮಿಕೊಳ್ಳವುದಾಗಿ ರೈತ ಮುಖಂಡರಾದ ರುದ್ರಗೌಡ ಪಾಟೀಲ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ