ಆ್ಯಪ್ನಗರ

ಪ್ರಥಮ ಪೂಜಿತನಿಗೆ ವಿದಾಯ

ಧಾರವಾಡ/ಹುಬ್ಬಳ್ಳಿ : ಅವಳಿನಗರದ ವಿವಿಧೆಡೆ ಸಾರ್ವಜನಿಕ ಸ್ಥಳ, ಮನೆ ಮತ್ತು ಹಾಸ್ಟೆಲ್‌ಗಳಲ್ಲಿ ಪ್ರತಿಷ್ಠಾಪಿಸಿದ್ದ 115ಕ್ಕೂ ಅಧಿಕ ಗಣೇಶ ಮೂರ್ತಿಗಳನ್ನು ಏಳನೇ ದಿನದಂದು ಭಕ್ತರು ಸಂಪ್ರದಾಯ, ವಿಜೃಂಭಣೆಯಿಂದ ಭಕ್ತಿ ಪೂರ್ವಕವಾಗಿ ವಿಸರ್ಜನೆ ಮಾಡಿದರು.

Vijaya Karnataka 9 Sep 2019, 5:00 am
ಧಾರವಾಡ/ಹುಬ್ಬಳ್ಳಿ : ಅವಳಿನಗರದ ವಿವಿಧೆಡೆ ಸಾರ್ವಜನಿಕ ಸ್ಥಳ, ಮನೆ ಮತ್ತು ಹಾಸ್ಟೆಲ್‌ಗಳಲ್ಲಿ ಪ್ರತಿಷ್ಠಾಪಿಸಿದ್ದ 115ಕ್ಕೂ ಅಧಿಕ ಗಣೇಶ ಮೂರ್ತಿಗಳನ್ನು ಏಳನೇ ದಿನದಂದು ಭಕ್ತರು ಸಂಪ್ರದಾಯ, ವಿಜೃಂಭಣೆಯಿಂದ ಭಕ್ತಿ ಪೂರ್ವಕವಾಗಿ ವಿಸರ್ಜನೆ ಮಾಡಿದರು.
Vijaya Karnataka Web DRW-8SM-1H
ಹುಬ್ಬಳ್ಳಿ/ಧಾರವಾಡ ನಾಗರಿಕರು ಏಳು ದಿನದ ಗಣೇಶ ಮೂರ್ತಿಗಳನ್ನು ಭಕ್ತಿ ಭಾವದಿಂದ ವಿಸರ್ಜನೆ ಮಾಡಿದರು.


ಹುಬ್ಬಳ್ಳಿಯ ವಿವಿಧ ಬಡಾವಣೆ ಮತ್ತು ನಗರ ಹೊರ ವಲಯ ಹಾಗೂ ಧಾರವಾಡ ನಗರ ಮತ್ತು ಧಾರವಾಡ ಹೊರ ವಲಯದ ಪ್ರದೇಶಗಳಲ್ಲಿ ಪ್ರತಿಷ್ಠಾಪನೆಗೊಂಡು ಏಳು ದಿನಗಳ ಕಾಲ ಪೂಜಿತಗೊಂಡಿದ್ದ ಗಣೇಶನಿಗೆ ಭಕ್ತರು ಭಾನುವಾರ ಭಕ್ತಿ ಪೂರ್ವಕ ವಿದಾಯ ಹೇಳಿದರು.

ಪೂಜಾ ಕೈಂಕರ್ಯ, ಖಾದ್ಯ, ಮೋದಕ ನೈವೇಧ್ಯ, ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಗಣೇಶನಿಗೆ ಪೂಜಿಸಿದರು. ನಂತರ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿ ಹುಬ್ಬಳ್ಳಿಯಲ್ಲಿನ ಉಣಕಲ್‌ ಕೆರೆ, ಗ್ಲಾಸ್‌ ಹೌಸ್‌, ಹೊಸುರ ಸರ್ಕಲ್‌, ಕಮರಿಪೇಟೆ ಹಾಗೂ ನಗರದ ಹೊರವಲಯದಲ್ಲಿರುವ ಕೆಲ ಬಾವಿಗಳಲ್ಲಿ ಭಕ್ತ ಭಾವದಿಂದ ವಿಸರ್ಜಿಸಿದರು. ಧಾರವಾಡದಲ್ಲಿ ಕೆಲಗೇರಿ ಕೆರೆ ಸೇರಿದಂತೆ ನಗರದಾದ್ಯಂತ ಇರುವ ಹಲವಾರು ಬಾವಿಗಳಲ್ಲಿ ವಿಸರ್ಜಿಸಿದರು.

ಮೆರವಣಿಯಲ್ಲಿ ಯುವಕ, ಮಹಿಳೆಯರು ಒಟ್ಟಾಗಿಯೇ ಗಣಪತಿ ಬಪ್ಪಾ ಮೋರಯಾ ಎಂದು ಹರ್ಷೋದ್ಘಾರ ಮೊಳಗಿಸಿ ಗಮನ ಸೆಳೆದರು.

ಮೆರವಣಿಯಲ್ಲಿ ಮಹಿಳೆಯರು, ಮಕ್ಕಳು ಮತ್ತು ಯುವಕರು ಕುಣಿದರು. ಯುವಕರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಯಾವುದೇ ಗದ್ದಲ ಗಲಾಟೆ ಇಲ್ಲದೇ ಶಾಂತ ರೀತಿಯಿಂದ ವಿಸರ್ಜನೆ ಮಾಡಲಾಯಿತು ಎಂದು ಧಾರವಾಡದ ಡಿವೈಎಸ್‌ಪಿ ರಾಮನಗೌಡ ಹಟ್ಟಿ, ಎಸಿಪಿ ಎಂ.ಎನ್‌.ರುದ್ರಪ್ಪ ಪತ್ರಿಕೆಗೆ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ