ಆ್ಯಪ್ನಗರ

ತಹಸೀಲ್ದಾರರಿಗೆ ಮನವಿ ಸಲ್ಲಿಸಿದ ರೈತರು

ನವಲಗುಂದ : ಮಹದಾಯಿ ವಿಚಾರವಾಗಿ ಒಂದು ವಾರದಲ್ಲಿ ಸಂಬಂಧಿಸಿದ ಸಚಿವರು ಹಾಗೂ ಗೋವಾ ಸರಕಾರದೊಂದಿಗೆ ಮಾತುಕತೆ ನಡೆಸುವುದಾಗಿ ಭರವಸೆ ನೀಡಿದ್ದ ಕೇಂದ್ರ ಸಂಸದೀಯ ಸಚಿವರು ಇದುವರೆಗೂ ಯಾವುದೇ ಮಾತುಕತೆಗೆ ಮುಂದಾಗದಿರುವುದು ರೈತರಿಗೆ ಬೇಸರ ಮೂಡಿಸಿದ್ದು ಕೂಡಲೇ ಮಾತುಕತೆಗೆ ಮುಂದಾಗುವ ಮೂಲಕ ಮಹದಾಯಿ ಸೇರಿದಂತೆ ರೈತರ ಸಮಸ್ಯೆ ಈಡೇರಿಸಬೇಕೆಂದು ಆಗ್ರಹಿಸಿ ಪಕ್ಷಾತೀತ ರೈತ ಹೋರಾಟ ಸಮಿತಿ ರೈತರು ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.

Vijaya Karnataka 4 Jul 2019, 5:00 am
ನವಲಗುಂದ : ಮಹದಾಯಿ ವಿಚಾರವಾಗಿ ಒಂದು ವಾರದಲ್ಲಿ ಸಂಬಂಧಿಸಿದ ಸಚಿವರು ಹಾಗೂ ಗೋವಾ ಸರಕಾರದೊಂದಿಗೆ ಮಾತುಕತೆ ನಡೆಸುವುದಾಗಿ ಭರವಸೆ ನೀಡಿದ್ದ ಕೇಂದ್ರ ಸಂಸದೀಯ ಸಚಿವರು ಇದುವರೆಗೂ ಯಾವುದೇ ಮಾತುಕತೆಗೆ ಮುಂದಾಗದಿರುವುದು ರೈತರಿಗೆ ಬೇಸರ ಮೂಡಿಸಿದ್ದು ಕೂಡಲೇ ಮಾತುಕತೆಗೆ ಮುಂದಾಗುವ ಮೂಲಕ ಮಹದಾಯಿ ಸೇರಿದಂತೆ ರೈತರ ಸಮಸ್ಯೆ ಈಡೇರಿಸಬೇಕೆಂದು ಆಗ್ರಹಿಸಿ ಪಕ್ಷಾತೀತ ರೈತ ಹೋರಾಟ ಸಮಿತಿ ರೈತರು ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
Vijaya Karnataka Web farmers appealed to tahsildars
ತಹಸೀಲ್ದಾರರಿಗೆ ಮನವಿ ಸಲ್ಲಿಸಿದ ರೈತರು


ರೈತ ಮುಖಂಡ ಸುಭಾಸಚಂದ್ರಗೌಡ ಪಾಟೀಲ್‌ ಮಾತನಾಡಿ, ಮಹದಾಯಿ ನ್ಯಾಯಾಧೀಕರಣ ತೀರ್ಪು ನೀಡಿದ ನಂತರ ಮುಂದಿನ ಕಾನೂನು ಪ್ರಕ್ರಿಯೆ ಆರಂಭಿಸಲು ರಾಜ್ಯ ಸರಕಾರ ವಿಳಂಬ ನೀತಿ ತಾಳುತ್ತಿದೆ. ಸಿಎಂ ಕುಮಾರಸ್ವಾಮಿ ಮಹದಾಯಿ, ಕಳಸಾ ಬಂಡೂರಿ ಯೋಜನೆ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ರೈತರಿಗೆ ಭರವಸೆ ನೀಡಿದ್ದರೂ ಇದುವರೆಗೆ ಯಾವುದೇ ಪ್ರಗತಿ ಕಂಡು ಬಂದಿಲ್ಲ. ರಾಜ್ಯ ಹಾಗೂ ಕೇಂದ್ರ ಸರಕಾರ ಇದೇ ರೀತಿಯ ವಿಳಂಬ ನೀತಿ ತೊರದೇ ಜು.21ರಂದು ಜರುಗಲಿರುವ ರೈತ ಹುತಾತ್ಮ ದಿನಾಚರಣೆ ಒಳಗಾಗಿ ಸೂಕ್ತ ನಿರ್ಧಾರ ಪ್ರಕಟಿಸದಿದ್ದರೆ ಮತ್ತೊಮ್ಮೆ ರೈತರು ದಂಗೆ ಏಳುವುದು ಖಚಿತ ಎಂದು ಎಚ್ಚರಿಸಿದ ಅವರು, ಸತತ ಬರಗಾಲದಿಂದ ಬೇಸತ್ತ ರೈತರಿಗೆ ಮಹಾರಾಷ್ಟ್ರ ಮಾದರಿ ಪರಿಹಾರ ಒದಗಿಸುವುದು, ಫಸಲ ಬಿಮಾ ಯೋಜನೆಯಲ್ಲಿ ತಾಂತ್ರಿಕ ದೋಷದಿಂದ ಹೊರಗುಳಿದ ರೈತರಿಗೆ ವಿಮೆ ಹಣ ಬಿಡುಗಡೆ ಮಾಡುವುದು , ರಾಷ್ಟ್ರೀಕೃತ ಬ್ಯಾಂಕಗಳು ಸಾಲ ಮನ್ನಾ ಹಣ ಸಾಲದ ಖಾತೆಗೆ ಜಮೆ ಮಾಡುವುದನ್ನು ಬಿಟ್ಟು ಹೊಸ ಸಾಲ ನೀಡಲು ಪ್ರಮ ಜರುಗಿಸುವುದು ಸೇರಿದಂತೆ ಅನೇಕ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.ತಹಸೀಲ್ದಾರ ಶೋಭೀತಾ ರೈತರಿಂದ ಮನವಿ ಸ್ವೀಕರಿಸಿದರು.

ಪಕ್ಷಾತೀತ ರೈತ ಹೋರಾಟ ಸಮಿತಿ ಅಧ್ಯಕ್ಷ ಬಸಪ್ಪ ಬೀರಣ್ಣವರ, ಡಿ.ವಿ.ಕುರಟ್ಟಿ,ಸಂಗಪ್ಪ ನಿಡವಣಿ, ಸಿದ್ದಪ್ಪ ಮುಪ್ಪಯ್ಯನವರ, ಬಸಪ್ಪ ಕುಂಬಾರ, ಮಲ್ಲಯ್ಯ ಪೂಜಾರ,ಶೀವಪ್ಪ ಸಂಗಳದ,ಹನಮಂತಪ್ಪ ಬನ್ನೆಣ್ಣವರ,ಶಿವಪ್ಪ ಸಂಗಟಿ,ಯಲ್ಲಪ್ಪ ದಾಡಿಬಾವಿ,ಫಕ್ಕೀರಪ್ಪ ಮರಲಕ್ಕಣ್ಣವರ ಮತ್ತಿತರರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ