ಆ್ಯಪ್ನಗರ

ರೈತರ ಹುತಾತ್ಮ ದಿನಾಚರಣೆ 21ಕ್ಕೆ

ಹುಬ್ಬಳ್ಳಿ : ಅಖಂಡ ಕರ್ನಾಟಕ ರೈತ ಸಂಘದ ವತಿಯಿಂದ ಜು.21 ರಂದು ಬೆಂಗಳೂರಿನಲ್ಲಿ ರೈತರ ಹುತಾತ್ಮ ದಿನ ಆಚರಿಸಲಾಗುವುದು ಎಂದು ಸಂಘದ ಉಪಾಧ್ಯಕ್ಷ ಸಿದ್ಧನಗೌಡ ಪಾಟೀಲ ತಿಳಿಸಿದರು.

Vijaya Karnataka 18 Jul 2019, 5:00 am
ಹುಬ್ಬಳ್ಳಿ : ಅಖಂಡ ಕರ್ನಾಟಕ ರೈತ ಸಂಘದ ವತಿಯಿಂದ ಜು.21 ರಂದು ಬೆಂಗಳೂರಿನಲ್ಲಿ ರೈತರ ಹುತಾತ್ಮ ದಿನ ಆಚರಿಸಲಾಗುವುದು ಎಂದು ಸಂಘದ ಉಪಾಧ್ಯಕ್ಷ ಸಿದ್ಧನಗೌಡ ಪಾಟೀಲ ತಿಳಿಸಿದರು.
Vijaya Karnataka Web farmers martyrdom day 21st
ರೈತರ ಹುತಾತ್ಮ ದಿನಾಚರಣೆ 21ಕ್ಕೆ


ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 8ಕ್ಕೆ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಸಿಎಂ ಮನೆಗೆ ಚಳುವಳಿ ನಡೆಸಿ ರೈತರ ಪ್ರಮುಖ ಬೇಡಿಕೆ ಈಡೇಸಬೇಕು ಎಂದು ಒತ್ತಾಯಿಸಲಾಗುವುದು ಎಂದು ತಿಳಿಸಿದರು.

ಸಾಲಮನ್ನಾ ವಿಷಯದಲ್ಲಿ ಚಾಲ್ತಿ ಸಾಲಗಾರರ ಸಾಲಮನ್ನಾ ಜಾರಿಮಾಡಬೇಕು. ಕೇಂದ್ರ ಮತ್ತು ರಾಜ್ಯ ಸರಕಾರಗಳು ಬರ ಪರಿಹಾರ ಹಾಗೂ ಬೆಳೆವಿಮೆ ಹಣವನ್ನು ರೈತರ ಖಾತೆಗೆ ಜಮಾ ಮಾಡಬೇಕು. ಗ್ರಾಮೀಣ ಪ್ರದೇಶದ ಕೆರೆಗಳ ಹೂಳು ಎತ್ತುವ ಕಾರ್ಯಕ್ರಮ ಜಾರಿಗೊಳಿಸಬೇಕು. ನಮ್ಮ ಹೊಲ ನಮ್ಮ ದಾರಿ ಯೋಜನೆಯಲ್ಲಿ ರೈತರ ಹೊಲಗಳಿಗೆ ದಾರಿ ಮಾಡಿಸಿಕೊಡಬೇಕು. ಕೇಂದ್ರ ಸರಕಾರ ಕೈಗೆತ್ತಿಕೊಂಡಿರುವ ನದಿ ಜೋಡಣೆ ಯೋಜನೆಯಲ್ಲಿ ರಾಜ್ಯದ ಪ್ರಮುಖ ನದಿ ಸೇರಿಸಬೇಕು. ಕಬ್ಬು ಬೆಳೆದ ರೈತರ ಬಾಕಿ ಹಣ ಕಾರ್ಖಾನೆ ಮಾಲಿಕರಿಂದ ತಕ್ಷಣ ಕೊಡಿಸಬೇಕು. ಪಂಪ್‌ಸೆಟ್‌ಗೆ ನಿರಂತರ 8 ಗಂಟೆ ವಿದ್ಯುತ್‌ ನೀಡಬೇಕು. ಬಗರ್‌ಹುಕುಂ ಸಾಗುವಳಿದಾರರಿಗೆ ಖಾತೆ ಮಾಡತಕ್ಕದ್ದು. ಗುತ್ತಿಗೆ ಆಧಾರಿತ ನೌಕರರನ್ನು ಖಾಯಂ ಮಾಡಬೇಕು ಎಂಬ ಬೇಡಿಕೆ ಈಡೇರಿಸುವಂತೆ ಸಿಎಂಗೆ ಮನವಿ ಸಲ್ಲಿಸಲಾಗುವುದು ಎಂದು ವಿವರಿಸಿದರು.

ಮಂಡ್ಯ ಜಿಲ್ಲೆ ರೈತ ಮುಖಂಡ ಎಸ್‌.ಕೆ. ಸುಧೀರ್‌ಕುಮಾರ ಮಾತನಾಡಿ, ರೈತರ ಹುತಾತ್ಮ ದಿನ ಆಚರಣೆಯಲ್ಲಿ ರಾಜ್ಯದ ಪ್ರತಿಯೊಂದು ಜಿಲ್ಲೆಯಿಂದ ಆಗಮಿಸಿದ ಸುಮಾರು 5000 ಕ್ಕೂ ಹೆಚ್ಚು ರೈತರು ಭಾಗವಹಿಸಲಿದ್ದಾರೆ. ಅಖಂಡ ಕರ್ನಾಟಕ ರೈತ ಸಂಘದ ಸ್ಥಾಪಕ ಮಾಜಿ ಕೇಂದ್ರ ಸಚಿವ ಬಾಬುಗೌಡ ಪಾಟೀಲ ಜಾಥಾ ಕಾರ್ಯಕ್ರಮದ ನೇತೃತ್ವ ವಹಿಸುವರು ಎಂದರು.

ಧಾರವಾಡ ತಾಲೂಕು ಅಧ್ಯಕ್ಷ ನಿಂಗಪ್ಪ ಜ್ಯೋತಿನಾಯ್ಕರ, ರೈತ ಮುಖಂಡರಾದ ರವಿರಾಜ ಕಂಬಳಿ, ಸದಾಶಿವು ಕೊರಟಗಿ, ಎ.ಕೆ. ಕುಲಕರ್ಣಿ, ಉಳ್ಳವಪ್ಪ ಒಡೆಯರ್‌ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ