ಆ್ಯಪ್ನಗರ

ರೈತರ ಸಮಸ್ಯೆ ಜೀವಂತವಿಟ್ಟು ರಾಜಕಾರಣ :ಕೋಡಿಹಳ್ಳಿ ಚಂದ್ರಶೇಖರ

ನವಲಗುಂದ : ಅಧಿಕಾರಿ ಶಾಹಿಗಳು ಎಂದಿಗೂ ರೈತರ ಏಳ್ಗೆ ಸಹಿಸುವುದಿಲ್ಲ. ಕೃಷಿ ಕೂಲಿ ಮಾಡಿಯೇ ಜೀವನ ಕಟ್ಟಿಕೊಳ್ಳುವ ಮಾರಕ ಯೋಜನೆ ರೂಪಿಸುತ್ತಾರೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಆರೋಪಿಸಿದರು.

Vijaya Karnataka 22 Jul 2019, 5:00 am
ನವಲಗುಂದ : ಅಧಿಕಾರಿ ಶಾಹಿಗಳು ಎಂದಿಗೂ ರೈತರ ಏಳ್ಗೆ ಸಹಿಸುವುದಿಲ್ಲ. ಕೃಷಿ ಕೂಲಿ ಮಾಡಿಯೇ ಜೀವನ ಕಟ್ಟಿಕೊಳ್ಳುವ ಮಾರಕ ಯೋಜನೆ ರೂಪಿಸುತ್ತಾರೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಆರೋಪಿಸಿದರು.
Vijaya Karnataka Web DRW-21-NVL-1
ನವಲಗುಂದ ರೈತಭವನದ ರೈತ ಹುತಾತ್ಮ ಬಸಪ್ಪ ಲಕ್ಕುಂಡಿ ವೀರಗಲ್ಲಿಗೆ ರೈತ ಮುಖಂಡ ಕೋಡಹಳ್ಳಿ ಚಂದ್ರಶೇಖರ ಮಾಲಾರ್ಪಣೆ ಮಾಡಿ ಮಾತನಾಡಿದರು.


ಭಾನುವಾರ ಸ್ಥಳೀಯ ರೈತ ಭವನದಲ್ಲಿ ಜರುಗಿದ 39ನೇ ರೈತ ಹುತಾತ್ಮ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು. ರಾಜಕೀಯ ಒಳಜಗಳಗಳಿಂದ ರಾಜ್ಯದ ಜನತೆ ಪರದಾಡುವ ಪರಿಸ್ಥಿತಿ ಬಂದೊದಗಿದ್ದು, ರೈತರ ಸಮಸ್ಯೆ ಜೀವಂತವಾಗಿಟ್ಟು ಅದರಲ್ಲಿಯೇ ರಾಜಕಾರಣ ಮಾಡುತ್ತಿದ್ದು, ಎಲ್ಲ ರೈತ ಸಂಘಟನೆಗಳು ಒಂದಾದಾಗ ಮಾತ್ರ ರೈತರ ಬೇಡಿಕೆ ಈಡೇರಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.

ರೈತ ಸಂಘದ ಪುಟ್ಟಣ್ಣಯ್ಯ ಬಣದ ದರ್ಶನ ಪುಟ್ಟಣ್ಣಯ್ಯ ಮಾತನಾಡಿ, ಇವತ್ತು ಎಲ್ಲ ರಂಗದಲ್ಲಿ ರಾಜಕೀಯ ಬೆರಿಸಿ ರೈತರ ಅಸ್ತಿತ್ವ ಕಳೆದುಕೊಳ್ಳುತ್ತಿದ್ದಾರೆ. ಸಾಲದಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರೈತರು ಸರಿಯಾದ ಬೆಳೆ ಬರದೆ ಇರುವುದರಿಂದ ನಗರಕ್ಕೆ ಗುಳೆ ಹೋರಟಿದ್ದಾರೆ. ರೈತರು ಒಗ್ಗಟ್ಟಾಗಿ ಹಕ್ಕಿಗಾಗಿ ಸತತ ಹೋರಾಟ ಮುಂದುವರಿಸಿಕೊಂಡು ಹೋಗಬೇಕೆಂದು ಹೇಳಿದರು.

ರೈತಸೇನಾ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಮಾತನಾಡಿ, ರೈತರು ಜಾಗೃತರಾಗಿ ಜನಪ್ರತಿನಿಧಿಗಳ ಬಣ್ಣದ ಮಾತಿಗೆ ಮರಳಾಗದೆ ಕರ್ತವ್ಯ ಅರಿತುಕೊಳ್ಳಬೇಕು. ಬೇಡಿಕೆ ಈಡೇರಬೇಕೆಂದರೆ ಮೊದಲು ರೈತರಿಲ್ಲರೂ ಒಗ್ಗಟ್ಟಾದಾಗ ಮಾತ್ರ ಸಾಧ್ಯ ಎಂದರು.

ಹುತಾತ್ಮ ರೈತರ ಸ್ಮರಣಾರ್ಥ ಒಂದು ನಿಮಿಷ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು. ಬಡಗಾಲಪೂರ ನಾಗೇಂದ್ರ, ಗಂಗಾಧರ ಮೇಟಿ, ಬಸವರಾಜ ಸಾಬಳೆ, ವಿಠ್ಠಲ ಜಾಧವ, ರಾಘವೇಂದ್ರ ನಾಯಕ, ಸುಣ್ಣಪ್ಪ ಪೂಜಾರ, ಕರಿಯಪ್ಪ ಮೇಟಿ,

ಹೊತ್ತನಗೌಡ್ರ, ಬಸಮ್ಮ ಸಂಕಣ್ಣವರ, ವೀರಸಿಂಗ ರಜಪೂತ್‌, ಸುಭಾಸಚಂದ್ರಗೌಡ ಪಾಟೀಲ, ಮಲ್ಲೇಶ ಉಪ್ಪಾರ, ಬಸಪ್ಪ ಬೀರಣ್ಣವರ, ಡಿ.ವಿ.ಕುರಹಟ್ಟಿ, ರವಿ ತೋಟದ, ರವಿ ಪಾಟೀಲ, ರಾಮಣ್ಣ ಕಿಲಾರಿ, ಸಂಗಪ್ಪ ನಿಡವಣೆ, ಶಿವಪ್ಪ ಸಂಗಳದ, ಅಲ್ಲಾಭಕ್ಷ ಹಂಚಿನಾಳ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ