ಆ್ಯಪ್ನಗರ

ರೈತರ ಅಭ್ಯುದಯ ಬಜೆಟ್‌: ಪ್ರಹ್ಲಾದ್‌ ಜೋಶಿ

ಕೃಷಿ ಸುಸ್ತಿ ಸಾಲದ ಮೇಲಿನ ಬಡ್ಡಿ ಮನ್ನಾ, ತೋಟಗಾರಿಕೆ ಕೃಷಿಗೆ ಸಹಾಯಧನ ಬೆಳೆವಿಮೆಗೆ 900 ಕೋಟಿ ಅನುದಾನ, ಹೊಲದ ಮಣ್ಣು ಪರೀಕ್ಷೆಗೆ ಸಂಚಾರಿ ಪ್ರಯೋಗಾಲಯ, ಹನಿ ನೀರಾವರಿಗೆ ಸಬ್ಸಿಡಿ, ಅನಂತಕುಮಾರ ಪ್ರತಿಷ್ಠಾನಕ್ಕೆ 20 ಕೋಟಿ ರೂ. ನೀಡಲಾಗಿದೆ.

Vijaya Karnataka 5 Mar 2020, 10:14 pm
ಹುಬ್ಬಳ್ಳಿ : ರಾಜ್ಯದ ಸಿಎಂ ಯಡಿಯೂರಪ್ಪ ಅವರು ಮಂಡಿಸಿದ 2020-21ರ ರಾಜ್ಯ ಮುಂಗಡಪತ್ರ ರೈತರ ಹಾಗೂ ಕೃಷಿ ಅಭ್ಯುದಯದ ಮುಂಗಡ ಪತ್ರವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರತಿಕ್ರಿಯಿಸಿದ್ದಾರೆ.
Vijaya Karnataka Web ಪ್ರಹ್ಲಾದ್‌ ಜೋಶಿ
ಪ್ರಹ್ಲಾದ್‌ ಜೋಶಿ


ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಉತ್ತರ ಕರ್ನಾಟಕದ ಜೀವಜಲವಾಗಿರುವ ಮಹದಾಯಿ ಯೋಜನೆಗೆ 500 ಕೋಟಿ ರೂ. ತೆಗೆದಿರಿಸುವ ಮೂಲಕ ಕೃಷಿ ಹಾಗೂ ರಾಜ್ಯ ನೀರಾವರಿಗೆ ವಿಶೇಷ ಒತ್ತು ನೀಡಲಾಗಿದೆ. ರಾಜ್ಯದ ಹೆಚ್ಚಿನ ಕೃಷಿ ಜಮೀನನ್ನು ನೀರಾವರಿಗೆ ಒಳಪಡಿಸುವ ಸಂಕಲ್ಪವನ್ನು ಬಜೆಟ್‌ನಲ್ಲಿಮಾಡಲಾಗಿದೆ.

ಕೃಷಿ ಸುಸ್ತಿ ಸಾಲದ ಮೇಲಿನ ಬಡ್ಡಿ ಮನ್ನಾ, ತೋಟಗಾರಿಕೆ ಕೃಷಿಗೆ ಸಹಾಯಧನ ಬೆಳೆವಿಮೆಗೆ 900 ಕೋಟಿ ಅನುದಾನ, ಹೊಲದ ಮಣ್ಣು ಪರೀಕ್ಷೆಗೆ ಸಂಚಾರಿ ಪ್ರಯೋಗಾಲಯ, ಹನಿ ನೀರಾವರಿಗೆ ಸಬ್ಸಿಡಿ, ಅನಂತಕುಮಾರ ಪ್ರತಿಷ್ಠಾನಕ್ಕೆ 20 ಕೋಟಿ ರೂ. ನೀಡಲಾಗಿದೆ.

ಧಾರವಾಡ-ಬೆಳಗಾವಿ ಹೊಸ ರೈಲು ಮಾರ್ಗಕ್ಕೆ ಉಚಿತ ಭೂಮಿ ಹಾಗೂ ಶೇ.50ರಷ್ಟು ವೆಚ್ಚ ಭರಿಸುವ ಹಾಗೂ ಧಾರವಾಡ ಜಿಲ್ಲೆಯನ್ನು ಹೋಮ್‌ ಮತ್ತು ಕನ್ಸೂತ್ರ್ಯಮರ್‌ ಕೇರ್‌ ಮ್ಯಾನ್ಯುಫ್ಯಾಕ್ಚರಿಂಗ್‌ ಕ್ಲಸ್ಟರ್‌ ಆಗಿ ಅಭಿವೃದ್ಧಿಗೊಳಿಸುವ ಪ್ರಸ್ತಾವಿತ ಕ್ರಮಗಳಿಂದ ಇದೊಂದು ಅಭಿವೃದ್ಧಿಯ ಹೆಬ್ಬಾಗಿಲು ತೆರೆಯುವ ಹಾಗೂ ಪ್ರಗತಿಪರ ಮುಂಗಡಪತ್ರವಾಗಿದೆ ಎಂದು ಸಚಿವ ಜೋಶಿ ಶ್ಲಾಘಿಘಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ