ಆ್ಯಪ್ನಗರ

ಹಿರಿಯ ಗುರುಗಳಿಗೆ ಸನ್ಮಾನ

ಧಾರವಾಡ: ನಗರದ ಕೃಷಿ ವಿಶ್ವವಿದ್ಯಾಲಯದಲ್ಲಿ1969ನೇ ಸಾಲಿನ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ವರ್ಷಕ್ಕೆ 50 ವರ್ಷ ಪೂರೈಸಿದ ನಿಮಿತ್ತ ಸುವರ್ಣ ಮಹೋತ್ಸವ ಆಚರಿಸಿದರು.

Vijaya Karnataka 25 Nov 2019, 5:00 am
ಧಾರವಾಡ: ನಗರದ ಕೃಷಿ ವಿಶ್ವವಿದ್ಯಾಲಯದಲ್ಲಿ1969ನೇ ಸಾಲಿನ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ವರ್ಷಕ್ಕೆ 50 ವರ್ಷ ಪೂರೈಸಿದ ನಿಮಿತ್ತ ಸುವರ್ಣ ಮಹೋತ್ಸವ ಆಚರಿಸಿದರು.
Vijaya Karnataka Web felicity for senior teachers
ಹಿರಿಯ ಗುರುಗಳಿಗೆ ಸನ್ಮಾನ


ಮುಖ್ಯ ಅತಿಥಿ ಕೃಷಿ ವಿಶ್ವವಿದ್ಯಾಲಯ ಉಪ ಕುಲಪತಿ ಡಾ.ಎಂ.ಬಿ.ಚೆಟ್ಟಿ ಮಾತನಾಡಿ, ದೇಶದ 75ಕ್ಕೂ ಅಧಿಕ ಕೃಷಿ ವಿಶ್ವವಿದ್ಯಾಲಯಗಳ ಪೈಕಿ ಧಾರವಾಡದ ಕೃಷಿ ವಿವಿ 16ನೇ ಸ್ಥಾನದಲ್ಲಿದೆ. ವಿಶ್ವ ವಿದ್ಯಾಲಯಕ್ಕೆ ವಿಶ್ವ ಬ್ಯಾಂಕ್‌,ವಿದೇಶಿ ವಿಶ್ವವಿದ್ಯಾಲಯಗಳಿಂದ ಆರ್ಥಿಕ ನೆರವು ದೊರೆಯುತ್ತಿದ್ದು, ಕೃಷಿ ವಿವಿ ಎಲ್ಲೆಡೆ ಖ್ಯಾತಿ ಪಸರಿಸಿದೆ. ಇತ್ತೀಚಿಗೆ ವಿಶ್ವ ಬ್ಯಾಂಕ್‌, ಸಂಸ್ಥೆಯ ಅಭಿವೃದ್ಧಿಯೋಜನೆ, ಸಂಶೋಧನೆ, ವಿವಿಧ ತರಬೇತಿ ನಡೆಸಲು ಧನ ಸಹಾಯ ಒದಗಿಸಿದ್ದು ಹರ್ಷ ತಂದಿದೆ ಎಂದರು.

ಇದೇ ವೇಳೆ ವಿದ್ಯಾರ್ಥಿಗಳು ತಮ್ಮ ಗುರುಗಳಾದ ಡಾ.ಶಂಕರ ಮಾರ್ಕಂಡೆ, ಡಾ.ಎ.ಎಸ್‌. ಪ್ರಭಾಕರ, ಡಾ.ಎ.ಎಸ್‌.ಖಾವಿ, ಡಾ. ಎಸ್‌.ಎಸ್‌.ಮೇಲಿ ಅವರನ್ನು ಆಹ್ವಾನಿಸಿ ಸತ್ಕರಿಸಿದರು. ಇದಲ್ಲದೇ ಹಳೇ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಅಭಿವೃದ್ಧಿಯೋಜನೆ ಕಾರ್ಯಗಳಿಗೊಸ್ಕರ 1ಲಕ್ಷ ರೂ.ದೇಣಿಗೆ ನೀಡಿದರು. ಎರಡು ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿವಿದ್ಯಾರ್ಥಿಗಳು ಮುಖ್ಯದ್ವಾರದಿಂದ ಡಾ.ಎಸ್‌.ಮೆಣಸಿನಕಾಯಿ ಪ್ರತಿಮೆಯವರೆಗೆ ಪಥಸಂಚಲನ ನಡೆಸಿದರು. ವಿದ್ಯಾರ್ಥಿಗಳು ಹಾಗೂ ಅವರ ಕುಟುಂಬಸ್ಥರಿಗೆ ವಿವಿಧ ಮನೋರಂಜನಾ ಕಾರ್ಯಕ್ರಮಗಳು ನಡೆದವು.

1969ರಲ್ಲಿ101 ವಿದ್ಯಾರ್ಥಿಗಳು ತೇರ್ಗಡೆಯಾಗಿ ಹೊರಹೊಮ್ಮಿ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಬ್ಯಾಂಕ್‌, ಕೈಗಾರಿಕೆ ಮುಂತಾದ ಕ್ಷೇತ್ರಗಳಲ್ಲಿಸೇವೆ ಸಲ್ಲಿಸಿ ನಿವೃತ್ತಿ ಸಲ್ಲಿಸುತ್ತಿದ್ದಾರೆ.

ಕೃಷಿ ವಿವಿಯ ಮಾಜಿ ಉಪಕುಲಪತಿ ಡಾ. ಜೆ.ಎಚ್‌.ಕುಲಕರ್ಣಿ, ಕೃಷಿ ವಿವಿ ನಿಖಾಯದ ಮುಖ್ಯಸ್ಥ ಡಾ.ಬಿ.ಡಿ. ಬಿರಾದಾರ, ಪ್ರಗತಿಪರ ರೈತರಾದ ಮೂಡಲಗಿಯ ಎಸ್‌.ಆರ್‌.ಸೋನವಾಲ್ಕರ್‌, ಮಸ್ಕಿಯ ತಿಮ್ಮನಗೌಡ ಗೌಡರ ಸೇರಿದಂತೆ 1969ನೇ ಸಾಲಿನ ವಿದ್ಯಾರ್ಥಿಗಳು, ಕುಟುಂಬಸ್ಥರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ