ಆ್ಯಪ್ನಗರ

ಕಬ್ಬಿನ ಬಾಕಿ ಹಣ ನೀಡದಿದ್ದರೆ ಉಗ್ರ ಹೋರಾಟ

ಹುಬ್ಬಳ್ಳಿ : ಬೆಳಗಾವಿ ಅಧಿವೇಶನ ಪೂರ್ವದಲ್ಲಿಯೇ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಸಕ್ಕರೆ ಕಾರ್ಖಾನೆ ಮಾಲೀಕರಿಂದ ಕಬ್ಬು ಬೆಳೆಗಾರರ 629 ಕೋಟಿ ರೂ. ಬಾಕಿ ಹಣ ಕೊಡಿಸಬೇಕು. ಇಲ್ಲದಿದ್ದರೆ ಉಗ್ರ ಸ್ವರೂಪದ ಹೋರಾಟ ಹಮ್ಮಿಕೊಳ್ಳಲಾಗವುದು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರ ಶಾಂತಕುಮಾರ್‌ ಎಚ್ಚರಿಸಿದರು.

Vijaya Karnataka 2 Dec 2018, 5:00 am
ಹುಬ್ಬಳ್ಳಿ : ಬೆಳಗಾವಿ ಅಧಿವೇಶನ ಪೂರ್ವದಲ್ಲಿಯೇ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಸಕ್ಕರೆ ಕಾರ್ಖಾನೆ ಮಾಲೀಕರಿಂದ ಕಬ್ಬು ಬೆಳೆಗಾರರ 629 ಕೋಟಿ ರೂ. ಬಾಕಿ ಹಣ ಕೊಡಿಸಬೇಕು. ಇಲ್ಲದಿದ್ದರೆ ಉಗ್ರ ಸ್ವರೂಪದ ಹೋರಾಟ ಹಮ್ಮಿಕೊಳ್ಳಲಾಗವುದು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರ ಶಾಂತಕುಮಾರ್‌ ಎಚ್ಚರಿಸಿದರು.
Vijaya Karnataka Web fierce fighting is not given sugarcane pending money
ಕಬ್ಬಿನ ಬಾಕಿ ಹಣ ನೀಡದಿದ್ದರೆ ಉಗ್ರ ಹೋರಾಟ


ಶನಿವಾರ ರೈತರೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ಈಗಾಗಲೇ ಮುಖ್ಯಮಂತ್ರಿಯವರು ಕಬ್ಬು ಬೆಳೆಗಾರರ ಜತೆ ಸಭೆ ನಡೆಸಿ ಅಧಿವೇಶನಕ್ಕೂ ಮುನ್ನ ಬಾಕಿ ಹಣ ಕೊಡಿಸುವ ಭರವಸೆ ನೀಡಿದ್ದರು. ಈ ನಿಟ್ಟಿನಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಸಭೆ ಸಹ ನಡೆಸಿ ಕಬ್ಬು ಬೆಳಗಾರರ ಬಾಕಿ ಸಂದಾಯ ಮಾಡುವಂತೆ ಸೂಚನೆ ಸಹ ನೀಡಿದ್ದಾರೆ. ಆದರೆ ಇದುವರೆಗೂ ರೈತರಿಗೆ ಹಣ ಬಂದಿಲ್ಲ'' ಎಂದು ದೂರಿದರು.

''ಅಧಿವೇಶನಕ್ಕೆ ಇನ್ನು ಕೇವಲ ಹತ್ತು ದಿನ ಮಾತ್ರ ಉಳಿದಿದ್ದು, ಕಾರ್ಖಾನೆ ಮಾಲೀಕರು ಕಬ್ಬಿನ ಬಾಕಿ ಹಣ ನೀಡುವ ಯಾವ ಲಕ್ಷಣವೂ ಕಾಣುತ್ತಿಲ್ಲ. ಡಿ. 8ರ ಒಳಗೆ ಬಾಕಿ ಹಣ ನೀಡದಿದ್ದರೆ ಡಿ. 9ರಂದು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎದುರು ರಾಜ್ಯದ ರೈತ ಪದಾಧಿಕಾರಿಗಳು ಪ್ರತಿಭಟನೆ ನಡೆಸುವರು. ಈ ಹೋರಾಟಕ್ಕೂ ಸರಕಾರ ಮಣಿಯದಿದ್ದರೆ ಡಿ. 10ರಂದು ಉಗ್ರ ಚಳವಳಿ ನಡೆಸಲಾಗುವುದು. ಇದಕ್ಕೆ ಸರಕಾರವೇ ನೇರ ಹೊಣೆ ಆಗಲಿದೆ'' ಎಂದು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ವೀರನಗೌಡ ಪಾಟೀಲ, ತೇಜಸ್ವಿ ಪಟೇಲ, ಎಂ.ವಿ. ಗಾಡಿ, ಮಹಾಂತೇಶ ವಾಲಿ, ಸುರೇಶಗೌಡ ಪಾಟೀಲ, ರಮೇಶ ಹೂಗಾರ, ರಾಜು ಗುಂದಗಿ ಸೇರಿದಂತೆ ಇತರರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ