ಆ್ಯಪ್ನಗರ

ಲಿಂಗಾಯತ ಹೋರಾಟವನ್ನು ತಪ್ಪಾಗಿ ಬಿಂಬಿಸಿದ ಉಡಾಫೆ ಸ್ವಾಮಿಗಳು: ಹೊರಟ್ಟಿ

ಲಿಂಗಾಯತ ಹೋರಾಟ ಮಾಡಿದ್ದೇ ದೊಡ್ಡ ಅಪರಾಧವಾಗಿದೆ‌. ಕೆಲವು ಸ್ವಾಮಿಗಳು ಧರ್ಮ ಒಡೆಯುತ್ತಾರೆ ಎಂದು ಗುಲ್ಲು ಹಬ್ಬಿಸಿದರು.

Vijaya Karnataka Web 8 Jun 2018, 1:02 pm
ಹುಬ್ಬಳ್ಳಿ: ಲಿಂಗಾಯತ ಹೋರಾಟ ಮಾಡಿದ್ದೇ ದೊಡ್ಡ ಅಪರಾಧವಾಗಿದೆ‌. ಕೆಲವು ಸ್ವಾಮಿಗಳು ಧರ್ಮ ಒಡೆಯುತ್ತಾರೆ ಎಂದು ಗುಲ್ಲು ಹಬ್ಬಿಸಿದರು. ಹಲವು ಉಡಾಫೆ ಸ್ವಾಮಿಗಳು ಹೋರಾಟವನ್ನ ತಪ್ಪಾಗಿ‌ ಬಿಂಬಿಸಿದರು ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಹೇಳಿದ್ದಾರೆ.
Vijaya Karnataka Web horatti


ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಲಿಂಗಾಯತ ಹೋರಾಟದಲ್ಲಿ ಮುಂಚೂಣಿಯಲ್ಲಿ ಇದ್ದದ್ದಕ್ಕೆ ಸಚಿವ ಸ್ಥಾನ ತಪ್ಪಿದೆ. ಪಕ್ಷಕ್ಕೆ ಅಂಟಿಕೊಂಡು ಲಿಂಗಾಯತ ಹೋರಾಟ ಮಾಡಿಲ್ಲ. ಕುಮಾರಸ್ವಾಮಿ, ದೇವೇಗೌಡರಿಗೂ ಈ ವಿಚಾರ ಸ್ಪಷ್ಟಪಡಿಸಿದ್ದೆ‌. ಪರಿಷತ್ ಸಭಾಪತಿ ಮಾಡುವುದು ಪಕ್ಷದ ವರಿಷ್ಠರಿಗೆ ಬಿಟ್ಟಿದ್ದು. ಸಚಿವ ಸ್ಥಾನಕ್ಕಾಗಿ ನಾನು ರಂಪಾಟ ಮಾಡಿ ಕಾಡಿ ಬೇಡಿ ಕೇಳುವವನಲ್ಲ ಎಂದರು.

ಸಚಿವ ಸ್ಥಾ‌ನ ನೀಡಿದರೂ ಸಂತೋಷ, ‌ನೀಡದಿದ್ದರೂ ಸಂತೋಷ. ಹಲವರು ಕರೆ ಮಾಡಿ ನಿಮ್ಮಂತ ಅನುಭವಿಗಳು ಸಚಿವ ಸಂಪುಟದಲ್ಲಿ ಇರಬೇಕಿತ್ತು ಎಂದು ಅಭಿಮಾನ ವ್ಯಕ್ತಪಡಿಸಿದ್ದಾರೆ. ಎಂದಿನಂತೆ ಶಾಸಕರಾಗಿ ಕೆಲಸ ಮಾಡುವೆ. ಮಂತ್ರಿ ಮಾಡುವವರು ನನ್ನನ್ನು ಮಾಡಿಲ್ಲ. ಶಿಕ್ಷಕ ಸಮುದಾಯ ನನ್ನನ್ನು ಏಳು ಬಾರಿ ಆರಿಸಿ ಕಳಿಸಿದೆ. ಸಚಿವನಾಗಿದ್ದರೆ ಶಿಕ್ಷಕರ ಸೇವೆ ಮಾಡಲು‌ ಹೆಚ್ಚಿನ ಅವಕಾಶ ಸಿಗುತ್ತಿತ್ತು ಎಂದು ಹೊರಟ್ಟಿ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ