ಆ್ಯಪ್ನಗರ

Hubli News: ಪಡೆಯದ ಸಾಲಕ್ಕೆ ಫೈನಾನ್ಸ್ ಕಂಪನಿಯಿಂದ ಕೋರ್ಟ್ ನೋಟಿಸ್; ಕಂಪನಿ ಕಚೇರಿಯ ಮುಂದೆ ಧರಣಿ!

ಸಿಂದಗಿಯ ರೈತ ಸಿದ್ದಪ್ಪ ಎನ್ನುವವರು ಪೂನಾವಾಲ ಫೈನಾನ್ಸ್‌ನಲ್ಲಿ 2015 ರಲ್ಲಿ ಟ್ರಾಕ್ಟರ್‌ಗಾಗಿ 5 ಲಕ್ಷ ರೂ. ಲೋನ್ ತೆಗೆದುಕೊಂಡಿದ್ದರು. ಸಾಲದ ಕಂತುಗಳಲ್ಲಿ ಲೋನನ್ನು ಕೂಡ ರೈತ ಸಿದ್ದಪ್ಪ ಕ್ಲಿಯರ್ ಮಾಡಿದ್ದಾರೆ. ಇದಕ್ಕೆ ಫೈನಾನ್ಸ್ ಕಂಪನಿ ರೈತ ಸಿದ್ದಪ್ಪನಿಗೆ ನೀವು ಮತ್ತೇ ಲೋನ್ ತೆಗೆದುಕೊಳ್ಳಿ ಎಂದು ಒತ್ತಾಯಿಸಿತ್ತು. ಆಗ ಸಿದ್ದಪ್ಪ ಸಾಲ ಬೇಡ ಎಂದಿದ್ದರು. ಹೀಗಿದ್ದರೂ ಫೈನಾನ್ಸ್ ಕಂಪನಿ ಸಿದ್ದಪ್ಪನಿಗೆ 75 ಸಾವಿರ ರೂ.ವನ್ನು ಸಾಲದ ರೂಪದಲ್ಲಿ 2019ರಲ್ಲಿ ಖಾತೆಗೆ ಮರು ಜಮಾ ಮಾಡಿತ್ತು. ಸಾಲ ಬ ೇಡವೆಂದು ಸಿದ್ದ ಹೇಳಿದ್ದರೂ ಈ ಎಡವಟ್ಟಾಗಿದೆ.

Authored byಚೇತನ್ ಓ.ಆರ್. | Vijaya Karnataka Web 20 Sep 2022, 11:50 am
ಹುಬ್ಬಳ್ಳಿ: ನಗರದಲ್ಲಿರುವ ಖಾಸಗಿ ಫೈನಾನ್ಸ್ ಕಂಪನಿಯೊಂದು, ಇಲ್ಲಿನ ರೈತರೊಬ್ಬರಿಗೆ ಸಾಲದ ಹೆಸರಿನಲ್ಲಿ ವಿನಾಕಾರಣ ಕಿರುಕುಳ ನೀಡಿರುವ ಘಟನೆಯೊಂದು ನಡೆದಿದೆ. ಇದನ್ನು ಖಂಡಿಸಿ, ರೈತರ ಸಮೂಹವೊಂದು ಫೈನಾನ್ಸ್ ಕಂಪನಿಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ರೈತರ ಈ ಪ್ರತಿಭಟನೆ ನಡೆದಿರುವುದು ಹುಬ್ಬಳ್ಳಿಯ ಪಿಂಟೋ ರಸ್ತೆಯಲ್ಲಿರುವ ಆ ಫೈನಾನ್ಸ್‌ ಕಂಪನಿಯ ಕಚೇರಿಯಲ್ಲಿ. ಅಷ್ಟಕ್ಕೂ ರೈತರ ಈ ಧರಣಿಯ ಹಿಂದೆ ಫೈನಾನ್ಸ್ ಕಂಪನಿಯ ಸಿಬ್ಬಂದಿಯ ಬೇಜವಾಬ್ದಾರಿತನವಿದೆ ಎಂದು ರೈತರು ಆರೋಪಿಸಿದ್ದಾರೆ.
Vijaya Karnataka Web HUBLI
ತಮಗೆ ಬಂದಿರುವ ನೋಟಿಸ್ ಪ್ರದರ್ಶಿಸುತ್ತಿರುವ ರೈತ ಸಿದ್ದಪ್ಪ.


ಸಿಂದಗಿಯ ರೈತ ಸಿದ್ದಪ್ಪ ಪಡಶೆಟ್ಟಿ ಎನ್ನುವವರು ಈ ಫೈನಾನ್ಸ್‌ನಲ್ಲಿ 2015 ರಲ್ಲಿ ಟ್ರಾಕ್ಟರ್‌ಗಾಗಿ 5 ಲಕ್ಷ ರೂ. ಲೋನ್ ತೆಗೆದುಕೊಂಡಿದ್ದರಂತೆ. ಪ್ರತಿಯಾಗಿ ಸಾಲದ ಕಂತುಗಳಲ್ಲಿ ಲೋನನ್ನು ಕೂಡ ರೈತ ಸಿದ್ದಪ್ಪ ಕ್ಲಿಯರ್ ಮಾಡಿದ್ದಾರೆ. ಇದಕ್ಕೆ ಫೈನಾನ್ಸ್ ಕಂಪನಿ ರೈತ ಸಿದ್ದಪ್ಪನಿಗೆ ನೀವು ಮತ್ತ ಲೋನ್ ತೆಗೆದುಕೊಳ್ಳಿ ಎಂದು ಒತ್ತಾಯಿಸಿದೆಯಂತೆ. ಆಗ ಸಿದ್ದಪ್ಪ ಅವರಿಗೆ ಲೋನ್ ಅವಶ್ಯಕತೆ ಇಲ್ಲದಿರುವುದರಿಂದ ಬೇಡವೆಂದು ತಿರಸ್ಕಾರ ಮಾಡಿದ್ದಾರೆ.

ಹೀಗಿದ್ದರೂ ಫೈನಾನ್ಸ್ ಕಂಪನಿ ಸಿದ್ದಪ್ಪನಿಗೆ 75 ಸಾವಿರ ರೂ.ವನ್ನು ಆತನ ಸಾಲದ 2019ರಲ್ಲಿ ಖಾತೆಗೆ ಮರು ಜಮಾ ಮಾಡಿದ್ದರು. ಈ ವಿಚಾರ ತಮಗೆ ತಿಳಿಯುತ್ತಿದ್ದಂತೆ ಅದನ್ನು ಪ್ರಶ್ನಿಸಿ ಬ್ಯಾಂಕ್ ಸಿಬ್ಬಂದಿಗಳನ್ನು ಕೇಳಿದಾಗ ಸಮಸ್ಯೆಯನ್ನು ಸರಿ ಮಾಡಿರುವುದಾಗಿ ಸಿಬ್ಬಂದಿ ಆಶ್ವಾಸನೆ ನೀಡಿದ್ದರು. ಇದಾಗಿ, ನಾಲ್ಕು ವರ್ಷಗಳು ಕಳೆದಿದ್ದು, ಈಗ ಫೈನಾನ್ಸ್ ಕಂಪನಿಯು ಸಿದ್ದಪ್ಪನಿಗೆ ಐದು ಲಕ್ಷ ರೂ.ಗಳನ್ನು ಮರುಪಾವತಿ ಮಾಡುವಂತೆ ಕೋರ್ಟ್ ನೋಟಿಸ್ ನೀಡಿದೆ.

ಸಮಾಜದ ಕೆಳಸ್ತರದ ಕುಟುಂಬಗಳನ್ನು ಮೇಲಕ್ಕೆತ್ತಿ ಮುಖ್ಯವಾಹಿನಿಗೆ ತರುವ ಕೆಲಸ ಮಾಡಬೇಕು: ಪ್ರಹ್ಲಾದ್ ಜೋಶಿ
ಇನ್ನು ರೈತ ಸಿದ್ದಪ್ಪನ ಪರಿಸ್ಥಿತಿ ನೋಡಿದ ರೈತ ಸಂಘಟನೆ ಈಗ ಫೈನಾನ್ಸ್ ಕಚೇರಿ ಮುಂದೆ ಧರಣಿಗೆ‌ ನಿರ್ಧರಿಸಿದೆ. ರೈತರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತ ಫೈನಾನ್ಸ್ ತನ್ನ ತಪ್ಪು ಒಪ್ಪಿಕೊಂಡಿದೆ. ಆದರೆ ತನ್ನ ಭಂಡತನವನ್ನು ಮುಂದುವರೆಸಿದ್ದು, ಸೆಪ್ಟೆಂಬರ್ 26 ರಂದು ನಡೆಯುವ ಕೋರ್ಟ್ ವಿಚಾರಣೆಯಲ್ಲಿ ಕೇಸ್ ಹಿಂಪಡೆಯುವ ಭರವಸೆ ನೀಡಿದೆ.‌ ಆದರೆ ಕಂಪನಿಯ ಈ‌ ನಾಟಕವನ್ನು ಒಪ್ಪದ ರೈತರು ಈ ಕೂಡಲೇ ಕೇಸ್ ವಾಪಸು ಪಡೆಯಬೇಕೆಂದು ಒತ್ತಾಯಿಸುತ್ತಿದ್ದಾರೆ.

ಈ ಘಟನೆಯಿಂದ ರೈತರು ಎಚ್ಚೆತ್ತುಕೊಳ್ಳಬೇಕು. ಖಾಸಗಿ ಫೈನಾನ್ಸ್ ಕಂಪನಿಗಳಲ್ಲಿ ವ್ಯವಹಾರ ನಡೆಸುವಾಗ ಎಚ್ಚರಿಕೆಯಿಂದ ಇರಬೇಕು. ಸಾಲವನ್ನಾಗಲೀ, ಕಂತು ಕಟ್ಟಿದ್ದಕ್ಕಾಗಲಿ ಅಥವಾ ಸಾಲ ತೀರಿಸಿದ ಮೇಲಾಗಲೀ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪಡೆಯಬೇಕು ಎಂದು ರೈತ ಸಂಘಟನೆ ಕಿವಿಮಾತು ಹೇಳಿದೆ.
ಲೇಖಕರ ಬಗ್ಗೆ
ಚೇತನ್ ಓ.ಆರ್.
ಪ್ರಸ್ತುತ, ವಿಜಯ ಕರ್ನಾಟಕ ವೆಬ್ ನಲ್ಲಿ ಪತ್ರಕರ್ತನಾಗಿ 2022ರಿಂದ ಪತ್ರಕರ್ತನಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2007ರಲ್ಲಿ ತುಮಕೂರು ವಿವಿಯಿಂದ ಪತ್ರಿಕೋದ್ಯಮದಲ್ಲಿ 5ನೇ ರ‍್ಯಾಂಕ್ ನೊಂದಿಗೆ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಮೈಸೂರು ವಿವಿಯಿಂದ ಪತ್ರಿಕೋದ್ಯಮದಲ್ಲಿ ಪಿಎಚ್ ಡಿ ಪದವಿ ಪಡೆದಿದ್ದಾರೆ. ಜಿಲ್ಲಾ ಸುದ್ದಿಗಳಿಂದ ಹಿಡಿದು ಕ್ರೀಡೆ, ದೇಶ- ವಿದೇಶ, ಸಿನಿಮಾ, ವಿಜ್ಞಾನ- ತಂತ್ರಜ್ಞಾನ ಇತ್ಯಾದಿ ವೈವಿಧ್ಯಯಮ ವಿಷಯಗಳ ಬಗ್ಗೆ ಬರೆಯುವ ಇವರಿಗೆ, ನಾನಾ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಈವರೆಗೆ 16 ವರ್ಷ ಕೆಲಸ ಮಾಡಿದ ಅನುಭವವಿದೆ. ಫೋಟೋಗ್ರಫಿ ಇವರ ಅಚ್ಚುಮೆಚ್ಚಿನ ಹವ್ಯಾಸ. ಸಿನಿಮಾ, ಸಾಕ್ಷ್ಯಚಿತ್ರ, ಸಾಹಿತ್ಯ, ವಿಡಿಯೋ ಸಂಕಲನ, ಪತ್ರಿಕೆ ಪುಟ ವಿನ್ಯಾಸ, ಹಾಡುಗಾರಿಕೆ, ಚಿತ್ರಕಲೆ, ಅನಿಮೇಶನ್, ಸಂಗೀತದಲ್ಲಿಯೂ ಆಸಕ್ತಿಯಿದೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ