ಆ್ಯಪ್ನಗರ

ರಾಜ್ಯದಲ್ಲಿ ಮೊದಲ ಪ್ಲಾಸ್ಮಾ ಥೆರಪಿ ಯಶಸ್ವಿ! ಹುಬ್ಬಳ್ಳಿ ಕಿಮ್ಸ್‌ ವೈದ್ಯರ ಸಾಧನೆ!

ರಾಜ್ಯದಲ್ಲಿ ಮೊದಲ ಬಾರಿಗೆ ಕೊರೊನಾ ಸೋಂಕಿತರಿಗೆ ಪ್ಲಾಸ್ಮಾ ಥೆರಪಿ ಯಶಸ್ವಿಯಾಗಿದೆ. ಹುಬ್ಬಳ್ಳಿಯ ಕಿಮ್ಸ್‌ ವೈದ್ಯರು ಈ ಸಾಧನೆಗೆ ಪಾತ್ರರಾಗಿದ್ದಾರೆ. ಪ್ಲಾಸ್ಮಾ ನೀಡಿದ ಎರಡೇ ದಿನದಲ್ಲಿ ರೋಗಿಯ ಆರೋಗ್ಯದಲ್ಲಿ ಗಣನೀಯ ಸುಧಾರಣೆ ಕಂಡು ಬಂದಿದೆ.

Vijaya Karnataka Web 2 Jun 2020, 3:56 pm
ಹುಬ್ಬಳ್ಳಿ: ರಾಜ್ಯದಲ್ಲಿ ಮೊದಲ ಬಾರಿಗೆ ಕೊರೊನಾ ಸೋಂಕಿತರಿಗೆ ಪ್ಲಾಸ್ಮಾ ಥೆರಪಿ ಯಶಸ್ವಿಯಾಗಿದೆ. ಹುಬ್ಬಳ್ಳಿಯ ಕಿಮ್ಸ್‌ ವೈದ್ಯರು ಈ ಸಾಧನೆಗೆ ಪಾತ್ರರಾಗಿದ್ದಾರೆ.
Vijaya Karnataka Web blood plasma


63 ವರ್ಷದ ಪಿ363 ಸಂಖ್ಯೆಯ ಸೋಂಕಿತ ವ್ಯಕ್ತಿಯಿಂದ ಪ್ಲಾಸ್ಮಾ ಪಡೆದು ತೀವ್ರ ಉಸಿರಾಟ, ಜ್ವರದಿಂದ ಬಳಲುತ್ತಿದ್ದ
65 ವರ್ಷದ ಪಿ2710 ಸೋಂಕಿತ ವ್ಯಕ್ತಿಗೆ ನೀಡಲಾಗಿತ್ತು. ಇದರಿಂದ ಎರಡೇ ದಿನದಲ್ಲಿ ರೋಗಿಯ ಆರೋಗ್ಯದಲ್ಲಿ ಗಣನೀಯ ಸುಧಾರಣೆ ಕಂಡು ಬಂದಿದೆ. ಮೇ 27ರಂದು ರೋಗಿ ದಾಖಲಾಗಿದ್ದರು.

ತೀವ್ರ ಉಸಿರಾಟ, ಜ್ವರದಿಂದ ಬಳಲುತ್ತಿದ್ದ ಅವರಿಗೆ ಆಕ್ಸಿಜನ್ ನೀಡಲಾಗುತಿತ್ತು.‌ ದಿನಕ್ಕೆ 10-12 ಲೀ. ಆಕ್ಸಿಜನ್ ಪಡೆಯುತ್ತಿದ್ದ ಸೋಂಕಿತ ರೋಗಿಯು ಪ್ಲಾಸ್ಮಾ ಥೆರಪಿ ಬಳಿಕ 2-3 ಲೀಟರ್ ಗೆ ತೆಗೆದುಕೊಳ್ಳುತ್ತಿದ್ದಾರೆ.

ಹೃದಯಾಘಾತದಿಂದ ಮೃತಪಟ್ಟ ಕೊರೊನಾ ವಾರಿಯರ್‌ಗೆ 5 ಲಕ್ಷ ಪರಿಹಾರ ಘೋಷಿಸಿದ ಬಿಎಸ್‌ವೈ

ಎಕ್ಸರೇ ಪರೀಕ್ಷಿಸಿದಾಗ ಉಸಿರಾಟದ ತೊಂದರೆ ಕಡಿಮೆಯಾಗಿದೆ. ಅರೋಗ್ಯದ ಲಕ್ಷಣಗಳು ಸುಧಾರಣೆಯಾಗಿದೆ ಕಿಮ್ಸ ನಿರ್ದೇಶಕ ಡಾ.‌ರಾಮಲಿಂಗಪ್ಪ ಅಂಟರತಾನಿ ಸಂತಸ ವ್ಯಕ್ತಪಡಿಸಿದರು.

200 ಮಿ.ಲೀ ನಂತೆ ಎರಡು ಬಾರಿ ಪ್ಲಾಸ್ಮಾ ವನ್ನು ಸೋಂಕಿತ ವ್ಯಕ್ತಿಗೆ ನೀಡಲಾಯಿತು. ‌ಎರಡೇ ದಿನಗಳಲ್ಲಿ ‌ರೋಗಿ‌ಯ ಆರೋಗ್ಯದಲ್ಲಿ ಗಣನೀಯವಾಗಿ ಚೇತರಿಕೆ ಕಂಡು ಬಂದಿದೆ. ನಾಲ್ಕೈದು ದಿನ ಬಿಟ್ಟು ಮತ್ತೊಮ್ಮೆ ಥ್ರೋಟ್ ಟೆಸ್ಟ ಮಾಡಲಾಗುತ್ತದೆ. ರಿಪೋರ್ಟ್‌ ನೆಗೆಟಿವ್ ಬಂದರೆ ಬಿಡುಗಡೆ ಮಾಡುತ್ತೇವೆ ಎಂದರು.

ಕೋವಿಡ್‌ಗಿಂತ ನಾಲ್ಕು ಹೆಜ್ಜೆ ಮುಂದು; 'ದಿಲ್ಲಿ ಕೊರೊನಾ' ಆ್ಯಪ್ ಬಿಡುಗಡೆ

ಡಾ. ಈಶ್ವರ ಹಸಬಿ, ಡಾ.‌ರಾಮ ಕವಲಗುಡ್ಡ, ಪುರಷೋತ್ತಮರೆಡ್ಡಿ, ಡಾ.‌ಕವಿತಾ, ಶೈಲೇಂದ್ರ ಕುಮಾರ್ ಮಹೇಶಕುಮಾರ, ಉದಯ ಬಾಂದೆ, ಎನ್.‌ಐ ಹೆಬಸೂರ ,‌ಜಿಯಾ ಪ್ರಿಯಾ ವೈದ್ಯರ ತಂಡ ಯಶಸ್ವಿ ಥೆರಪಿ ನೀಡಿದರು. ಪ್ಲಾಸ್ಮಾ ಸಂಗ್ರಹಿಸಲು ಒತ್ತು ನೀಡಲಾಗುತ್ತಿದೆ. ‌ಒಂದು ವರ್ಷದವರೆಗೂ ಇದನ್ನು‌ಸಂಗ್ರಹಿಸಬಹುದು. ಪ್ಲಾಸ್ಮಾ ಕೊಡುವರು ಮತ್ತು ಪಡೆಯುವರಿಗೆ ಯಾವುದೆ ತೊಂದರೆ ಇಲ್ಲ ಎಂದು ಕಿಮ್ಸ್‌ ನಿರ್ದೇಶಕ ಡಾ. ರಾಮಲಿಂಗಪ್ಪ‌ತಿಳಿಸಿದರು.

ಇದೆ ವೇಳೆ ಆಸ್ಪತ್ರೆಗೆ ಬಂದಿದ್ದ ಪ್ಲಾಸ್ಮಾ ನೀಡಿದ ಪಿ- 363 ವ್ಯಕ್ತಿಯು ಕಿಮ್ಸ್‌ ವೈದ್ಯರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಪ್ಲಾಸ್ಮಾ ಕೇಳಿದಾಗ ಯಾವುದೇ ಸಮಸ್ಯೆ ಇಲ್ಲ ಎಂದು ಮನವರಿಕೆ ಆದ ಬಳಿಕ ಒಪ್ಪಿದೆ. ನನ್ನಂತೆ ಇತರರು ಬೇಗ ಗುಣಮುಖವಾಗಲಿ ಎಂದು ಆಶಿಸಿದರು. ಆದರೆ, ಸ್ಮಶಾನ ಕಾಯುವ ಕೆಲಸಕ್ಕೆ ತಮ್ಮನ್ನು ತಗೆದುಕೊಳ್ಳಲು ಸಮಾಜದವರು ಹಿಂದೇಟು ಹಾಕುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ