ಧಾರವಾಡ : ಅತಿವೃಷ್ಟಿಗೆ ತುತ್ತಾಗಿರುವ ಜಿಲ್ಲೆಯ ಸಂತ್ರಸ್ತರಿಗೆ ಅಗತ್ಯ ಪರಿಹಾರ ಸೇರಿದಂತೆ ರಾಜ್ಯದಲ್ಲಿನ ನೆರೆ ಹಾವಳಿಯನ್ನು ಕೇಂದ್ರ ಸರಕಾರ ಕೂಡಲೇ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು ಎಂದು ಆಗ್ರಹಿಸಿ ಮಾಜಿ ಸಚಿವ ವಿನಯ ಕುಲಕರ್ಣಿ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದರು ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು.
ಈ ವೇಳೆ ರಾಜ್ಯ ಮತ್ತು ಕೇಂದ್ರ ಬಿಜೆಪಿ ಸರಕಾರದ ವಿರುದ್ಧ ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಅತಿವೃಷ್ಟಿಗೆ ಒಳಗಾದ ಸಂತ್ರಸ್ತರಿಗೆ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ಜತೆಗೆ ಬೇಕಾಬಿಟ್ಟಿಯಾಗಿ ವೈಮಾನಿಕ ಸಮೀಕ್ಷೆ ನಡೆಸಿವೆ. ರಾಜ್ಯದ ಜನತೆ ಸಂಕಷ್ಟದಲ್ಲಿದ್ದು, ತಕ್ಷ ಣೆ ಹೆಚ್ಚಿನ ಪರಿಹಾರ ನೀಡುವಂತೆ ಒಕ್ಕೊರಲಿನಿಂದ ಒತ್ತಾಯಿಸಿದರು.
ಮಾಜಿ ಸಚಿವ ವಿನಯ ಕಲಕರ್ಣಿ ಮಾತನಾಡಿ, ಮುಂಗಾರು ರಾಜ್ಯಕ್ಕೆ ತಡವಾಗಿ ಆಗಮಿಸಿದೆ.ಅಲ್ಲದೇ ನೆರೆಹಾವಳಿಯಿಂದ ಸಾಕಷ್ಟು ಪ್ರಮಾಣದಲ್ಲಿ ಹಾನಿ ಉಂಟು ಮಾಡಿದೆ. ನಿರಂತರ ಸುರಿದ ಮಳೆಗೆ ಬಡವರ ಮನೆಗಳು, ರೈತರ ಬೆಳೆಗಳು, ಜಾನುವಾರುಗಳು, ರಸ್ತೆಗಳು, ಸೇತುವೆಗಳು, ಕಾಲುವೆಗಳು ಹಾನಿಯಾಗಿವೆ ಎಂದರು.
ಬಿಜೆಪಿಯ ಶಾಸಕರು ಹೊಲ-ಮನಿ ಮಾರಿ ಜನರಿಗೆ ಪರಿಹಾರ ಕೊಡುವುದಾಗಿ ಹೇಳಿಕೆ ನೀಡುವುದು ಸರಿಯಾದ ಕ್ರಮ ಅಲ್ಲ. ಶಾಸಕರಿಗೆ ರಾಜ್ಯದಲ್ಲಿ ಸರಕಾರವಿದೆ, ಪರಿಹಾರ ಸರಕಾರ ಕೊಡಬೇಕೆಂಬ ಪರಿಜ್ಞಾನವಿಲ್ಲ. ಅಲ್ಲದೇ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತದ್ವಿರುದ್ಧ ಹೇಳಿಕೆ ನೀಡುತ್ತಿದ್ದು, ಅವರಿಗೆ ರಾಜ್ಯದ ಚಿತ್ರಣದ ಸ್ಪಷ್ಟ ಮಾಹಿತಿ ಇಲ್ಲ ಎಂದು ದೂರಿದರು.
ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಜಿ.ಎಂ.ಕುಂದಗೋಳ ಮಾತನಾಡಿ ಶಾಸಕ ಅಮೃತ ದೇಸಾಯಿ ಅವರು ಆಸ್ತಿ ಮಾರಿ ಆದರು ಪರಿಹಾರ ನೀಡುತ್ತೇನೆ ಎಂದು ಹೇಳಿಕೆ ನೀಡಿರುವುದು ಖಂಡನೀಯ. ಅವರದೇ ಸರಕಾರವಿದೆ ಹೀಗಾಗಿ ಸರಕಾರದಿಂದ ಸೂಕ್ತ ಪರಿಹಾರ ನೀಡಲು ಮುಂದಾಗಬೇಕು ಎಂದರು.
ಕಾಂಗ್ರೆಸ್ ಮುಖಂಡರಾದ ಬಸವರಾಜ ಮಲಕಾರಿ, ಪ್ರಕಾಶ ಘಾಟಗೆ ಮಾತನಾಡಿದರು. ನಂತರ ಕೇಂದ್ರ ಸರಕಾರ ರಾಷ್ಟ್ರೀಯ ವಿಫತ್ತು ಘೋಷಣೆ ಮಾಡಬೇಕು ಹಾಗೂ ರಾಜ್ಯ ಸರಕಾರ ಹೆಚ್ಚಿನ ಪರಿಹಾರ ನೀಡಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ಪ್ರದಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿಎಸ್ವೈ ಅವರಿಗೆ ಮನವಿ ಸಲ್ಲಿಸಿದರು.
ಸಿದ್ದಣ್ಣ ಪ್ಯಾಟಿ, ಬಸವರಾಜ ಕಿತ್ತೂರ, ಜಿಪಂ ಅಧ್ಯಕ್ಷೆ ವಿಜಯಲಕ್ಷ್ಮಿ ಪಾಟಿಲ, ನಿಂಗಪ್ಪ ಘಾಟಿನ, ಮಹಾವೀರ ಜೈನ್, ಕರೆಪ್ಪ ಮಾದರ, ಸಿದ್ದಣ ಸಪೂರಿ, ಆನಂದ ಕಲಾಲ, ಶಿವಾನಂದ ಗಿರಿಯೆಪ್ಪನವರ, ಸ್ವಾತಿ ಮಾಳಗಿ, ಗೌರಿ ನಾಡಗೇರ, ಪ್ರದೀಪ ಪಾಟಿಲ, ರಮೇಶ ತಳಗೆರಿ, ಮಹಾವೀರ ಜೈನ, ಪ್ರಕಾಶ ಬಾವಿಕಟ್ಟ, ಆನಂದ ಸಿಂಗನಾಥ, ಹೇಮಂತ ಗುರ್ಲಹೊಸುರ, ಬಸವರಾಜ ಮಟ್ಟಿ ಸೇರಿದಂತೆ ಇತರರು ಇದ್ದರು.
ಈ ವೇಳೆ ರಾಜ್ಯ ಮತ್ತು ಕೇಂದ್ರ ಬಿಜೆಪಿ ಸರಕಾರದ ವಿರುದ್ಧ ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಅತಿವೃಷ್ಟಿಗೆ ಒಳಗಾದ ಸಂತ್ರಸ್ತರಿಗೆ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ಜತೆಗೆ ಬೇಕಾಬಿಟ್ಟಿಯಾಗಿ ವೈಮಾನಿಕ ಸಮೀಕ್ಷೆ ನಡೆಸಿವೆ. ರಾಜ್ಯದ ಜನತೆ ಸಂಕಷ್ಟದಲ್ಲಿದ್ದು, ತಕ್ಷ ಣೆ ಹೆಚ್ಚಿನ ಪರಿಹಾರ ನೀಡುವಂತೆ ಒಕ್ಕೊರಲಿನಿಂದ ಒತ್ತಾಯಿಸಿದರು.
ಮಾಜಿ ಸಚಿವ ವಿನಯ ಕಲಕರ್ಣಿ ಮಾತನಾಡಿ, ಮುಂಗಾರು ರಾಜ್ಯಕ್ಕೆ ತಡವಾಗಿ ಆಗಮಿಸಿದೆ.ಅಲ್ಲದೇ ನೆರೆಹಾವಳಿಯಿಂದ ಸಾಕಷ್ಟು ಪ್ರಮಾಣದಲ್ಲಿ ಹಾನಿ ಉಂಟು ಮಾಡಿದೆ. ನಿರಂತರ ಸುರಿದ ಮಳೆಗೆ ಬಡವರ ಮನೆಗಳು, ರೈತರ ಬೆಳೆಗಳು, ಜಾನುವಾರುಗಳು, ರಸ್ತೆಗಳು, ಸೇತುವೆಗಳು, ಕಾಲುವೆಗಳು ಹಾನಿಯಾಗಿವೆ ಎಂದರು.
ಬಿಜೆಪಿಯ ಶಾಸಕರು ಹೊಲ-ಮನಿ ಮಾರಿ ಜನರಿಗೆ ಪರಿಹಾರ ಕೊಡುವುದಾಗಿ ಹೇಳಿಕೆ ನೀಡುವುದು ಸರಿಯಾದ ಕ್ರಮ ಅಲ್ಲ. ಶಾಸಕರಿಗೆ ರಾಜ್ಯದಲ್ಲಿ ಸರಕಾರವಿದೆ, ಪರಿಹಾರ ಸರಕಾರ ಕೊಡಬೇಕೆಂಬ ಪರಿಜ್ಞಾನವಿಲ್ಲ. ಅಲ್ಲದೇ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತದ್ವಿರುದ್ಧ ಹೇಳಿಕೆ ನೀಡುತ್ತಿದ್ದು, ಅವರಿಗೆ ರಾಜ್ಯದ ಚಿತ್ರಣದ ಸ್ಪಷ್ಟ ಮಾಹಿತಿ ಇಲ್ಲ ಎಂದು ದೂರಿದರು.
ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಜಿ.ಎಂ.ಕುಂದಗೋಳ ಮಾತನಾಡಿ ಶಾಸಕ ಅಮೃತ ದೇಸಾಯಿ ಅವರು ಆಸ್ತಿ ಮಾರಿ ಆದರು ಪರಿಹಾರ ನೀಡುತ್ತೇನೆ ಎಂದು ಹೇಳಿಕೆ ನೀಡಿರುವುದು ಖಂಡನೀಯ. ಅವರದೇ ಸರಕಾರವಿದೆ ಹೀಗಾಗಿ ಸರಕಾರದಿಂದ ಸೂಕ್ತ ಪರಿಹಾರ ನೀಡಲು ಮುಂದಾಗಬೇಕು ಎಂದರು.
ಕಾಂಗ್ರೆಸ್ ಮುಖಂಡರಾದ ಬಸವರಾಜ ಮಲಕಾರಿ, ಪ್ರಕಾಶ ಘಾಟಗೆ ಮಾತನಾಡಿದರು. ನಂತರ ಕೇಂದ್ರ ಸರಕಾರ ರಾಷ್ಟ್ರೀಯ ವಿಫತ್ತು ಘೋಷಣೆ ಮಾಡಬೇಕು ಹಾಗೂ ರಾಜ್ಯ ಸರಕಾರ ಹೆಚ್ಚಿನ ಪರಿಹಾರ ನೀಡಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ಪ್ರದಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿಎಸ್ವೈ ಅವರಿಗೆ ಮನವಿ ಸಲ್ಲಿಸಿದರು.
ಸಿದ್ದಣ್ಣ ಪ್ಯಾಟಿ, ಬಸವರಾಜ ಕಿತ್ತೂರ, ಜಿಪಂ ಅಧ್ಯಕ್ಷೆ ವಿಜಯಲಕ್ಷ್ಮಿ ಪಾಟಿಲ, ನಿಂಗಪ್ಪ ಘಾಟಿನ, ಮಹಾವೀರ ಜೈನ್, ಕರೆಪ್ಪ ಮಾದರ, ಸಿದ್ದಣ ಸಪೂರಿ, ಆನಂದ ಕಲಾಲ, ಶಿವಾನಂದ ಗಿರಿಯೆಪ್ಪನವರ, ಸ್ವಾತಿ ಮಾಳಗಿ, ಗೌರಿ ನಾಡಗೇರ, ಪ್ರದೀಪ ಪಾಟಿಲ, ರಮೇಶ ತಳಗೆರಿ, ಮಹಾವೀರ ಜೈನ, ಪ್ರಕಾಶ ಬಾವಿಕಟ್ಟ, ಆನಂದ ಸಿಂಗನಾಥ, ಹೇಮಂತ ಗುರ್ಲಹೊಸುರ, ಬಸವರಾಜ ಮಟ್ಟಿ ಸೇರಿದಂತೆ ಇತರರು ಇದ್ದರು.