ಆ್ಯಪ್ನಗರ

ಫ್ಲೈಓವರ್‌ ಯೋಜನೆ ಮತ್ತೆ ಮುಂದಕ್ಕೆ

ಹುಬ್ಬಳ್ಳಿ : ಮಹಾನಗರದ ಮಹತ್ವಾಕಾಂಕ್ಷಿ ಕಿತ್ತೂರ ಚನ್ನಮ್ಮ ವೃತ್ತದ ಫ್ಲೈಓವರ್‌ ನಿರ್ಮಾಣ ಯೋಜನೆ ಕಾಮಗಾರಿಗೆ ಕರೆಯಲಾಗಿದ್ದ ಮೊದಲ ಹಂತದ ಟೆಂಡರ್‌ ಅಧಿಸೂಚನೆಯನ್ನು ರಾಷ್ಟ್ರೀಯ ಹೆದ್ಧಾರಿ ಪ್ರಾಧಿಕಾರ ರದ್ದುಗೊಳಿಸಿದೆ. ಶೀಘ್ರ ಮರು ಟೆಂಡರ್‌ ಕರೆಯುವುದಾಗಿ ತಿಳಿಸಿದೆ. ಇದರೊಂದಿಗೆ ಫ್ಲೈವರ್‌ ನಿರ್ಮಾಣ ಮತ್ತಷ್ಟು ಮುಂದಕ್ಕೆ ಹೋಗುವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ.

Vijaya Karnataka 8 Jun 2020, 5:00 am
ಹುಬ್ಬಳ್ಳಿ : ಮಹಾನಗರದ ಮಹತ್ವಾಕಾಂಕ್ಷಿ ಕಿತ್ತೂರ ಚನ್ನಮ್ಮ ವೃತ್ತದ ಫ್ಲೈಓವರ್‌ ನಿರ್ಮಾಣ ಯೋಜನೆ ಕಾಮಗಾರಿಗೆ ಕರೆಯಲಾಗಿದ್ದ ಮೊದಲ ಹಂತದ ಟೆಂಡರ್‌ ಅಧಿಸೂಚನೆಯನ್ನು ರಾಷ್ಟ್ರೀಯ ಹೆದ್ಧಾರಿ ಪ್ರಾಧಿಕಾರ ರದ್ದುಗೊಳಿಸಿದೆ. ಶೀಘ್ರ ಮರು ಟೆಂಡರ್‌ ಕರೆಯುವುದಾಗಿ ತಿಳಿಸಿದೆ. ಇದರೊಂದಿಗೆ ಫ್ಲೈವರ್‌ ನಿರ್ಮಾಣ ಮತ್ತಷ್ಟು ಮುಂದಕ್ಕೆ ಹೋಗುವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ.
Vijaya Karnataka Web fly over


ಟೆಂಡರ್‌ ರದ್ದತಿಗೆ ತಾಂತ್ರಿಕ ಕಾರಣ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಯೋಜನೆಯ ಮೊದಲ ಹಂತದ ಟೆಂಡರ್‌ ಕಳೆದ ಜೂ.1ರಂದು ತೆರೆಯಲಾಗಿದ್ದು ಅದರಲ್ಲಿಅರ್ಹ ಬಿಡ್‌ದಾರರು ಬಾರದ ಕಾರಣಕೆæ್ಕ ಟೆಂಡರ್‌ ರದ್ದುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ .

ಮೇ ತಿಂಗಳಲ್ಲಿಮೊದಲ ಹಂತದಲ್ಲಿ2.3 ಕಿಮೀಗೆ 206.19 ಕೋಟಿ ರೂ. ಟೆಂಡರ್‌ ಅಧಿಸೂಚನೆ ಹೊರಡಿಸಲಾಗಿತ್ತು. ಕೊರೊನಾ ಹಿನ್ನೆಲೆಯಲ್ಲಿಟೆಂಡರ್‌ ಅವಧಿಯನ್ನು ಜುಲೈ 31ರವರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ. ಜಿಎಸ್‌ಟಿ ಸೇರಿಸಿ 230 ಕೋಟಿ ರೂ.ಗಳಿಗೆ ಮತ್ತೊಂದು ಟೆಂಡರ್‌ ಕರೆಯಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ವಿಭಾಗದ ಪ್ರಭಾರ ಕಾರ್ಯಪಾಲಕ ಎಂಜಿನಿಯರ್‌ ಮಠದ ಅವರು ತಿಳಿಸಿದ್ದಾರೆ.

ಇನ್ನು ಒಟ್ಟಾರೆ 300 ಕೋಟಿ ರೂ. ಗೂ ಅಧಿಕ ಮೊತ್ತದ ಯೋಜನೆ ಇದಾಗಿದ್ದು, ಮೊದಲ ಹಂತದಲ್ಲಿಲ್ಯಾಮಿಂಗ್ಟನ್‌ ರಸೆæ್ತ, (ರಾಷ್ಟ್ರೀಯ ಹೆದ್ದಾರಿ 63), ಬಂಕಾಪುರ ಚೌಕ್‌-ಹೊಸೂರು ವೃತ್ತ (ರಾಷ್ಟ್ರೀಯ ಹೆದ್ದಾರಿ 4, ಪುಣೆ-ಬೆಂಗಳೂರು ರಸೆæ್ತ) ಮತ್ತು ಕ್ಲಬ್‌ ರಸೆæ್ತ (ರಾಷ್ಟ್ರೀಯ ಹೆದ್ದಾರಿ 218, ಸೋಲಾಪುರ ರಸೆæ್ತ) ಯಲ್ಲಿಹಾದು ಹೋಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ