ಆ್ಯಪ್ನಗರ

ಆರೋಗ್ಯದತ್ತ ಗಮನ ಹರಿಸಿ

ನವಲಗುಂದ : ಆಧುನಿಕ ದಿನಮಾನದ ಒತ್ತಡದ ಜೀವನದಲ್ಲಿ ಮನಷ್ಯನಿಗೆ ಹಣ, ಬಂಗಾರ ಗಳಿಸುವುದಕ್ಕಿಂತ ಆರೋಗ್ಯ ಭಾಗ್ಯವನ್ನು ಕಾಪಾಡಿಕೊಳ್ಳುವುದೇ ದೊಡ್ಡದು ಎಂದು ಗವಿಮಠದ ಶ್ರೀ ಬಸವಲಿಂಗ ಸ್ವಾಮೀಜಿ ಹೇಳಿದರು.

Vijaya Karnataka 31 Jul 2019, 5:00 am
ನವಲಗುಂದ : ಆಧುನಿಕ ದಿನಮಾನದ ಒತ್ತಡದ ಜೀವನದಲ್ಲಿ ಮನಷ್ಯನಿಗೆ ಹಣ, ಬಂಗಾರ ಗಳಿಸುವುದಕ್ಕಿಂತ ಆರೋಗ್ಯ ಭಾಗ್ಯವನ್ನು ಕಾಪಾಡಿಕೊಳ್ಳುವುದೇ ದೊಡ್ಡದು ಎಂದು ಗವಿಮಠದ ಶ್ರೀ ಬಸವಲಿಂಗ ಸ್ವಾಮೀಜಿ ಹೇಳಿದರು.
Vijaya Karnataka Web DRW-30-NVL-1
ನವಲಗುಂದ ಪಟ್ಟಣದ ಗವಿಮಠದಲ್ಲಿ ಗುರುವಂದನಾ ಹಾಗೂ ಉಚಿತ ಎಲಬು, ಕೀಲು, ನೋವು ತಪಾಸಣೆ ಶಿಬಿರವನ್ನು ಗವಿಮಠದ ಬಸವಲಿಂಗ ಶ್ರೀಗಳು ಉದ್ಘಾಟಿಸಿದರು.


ಪಟ್ಟಣದ ಗವಿಮಠದಲ್ಲಿ ಮಾಡೆಲ್‌ ಹೈಸ್ಕೂಲ್‌ ಗುರುವಂದನಾ ಸ್ವಾಗತ ಸಮಿತಿ ಹಾಗೂ ಹುಬ್ಬಳ್ಳಿ-ಧಾರವಾಡ ಇಂಡಿಯನ್‌ ಆರ್ಥೋಪೆಡಿಕ್‌ ಅಸೋಸಿಯೇಶನ್‌ ಸಹಯೋಗದಲ್ಲಿ ನಡೆದ ಗುರುವಂದನಾ ಹಾಗೂ ಉಚಿತ ಎಲಬು, ಕೀಲು, ನೋವು ತಪಾಸಣಾ ಶಿಬಿರದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ರಸಾಯನಿಕಪೂರಿತ ಆಹಾರ ಸೇವಿಸುವುದರಿಂದ ಮನಷ್ಯನಲ್ಲಿ ದೈಹಿಕ ಸದೃಢತೆಯಲ್ಲಿ ಕ್ಷೀಣಿಸುತ್ತಿದೆ. ದೈಹಿಕ, ಮಾನಸಿಕ ಒತ್ತಡ ಹೆಚ್ಚುತ್ತಿವೆ. ಮಹಿಳೆಯರು, ವೃದ್ಧರು, ವಯಸ್ಕರು, ತಮ್ಮಲ್ಲಿರುವ ದೈಹಿಕ ನ್ಯೂನ್ಯತೆ ಹೋಗಲಾಡಿಸಲು ದೈಹಿಕ ಯಥಾಸ್ಥಿತಿ ಕಾಯ್ದುಕೊಳ್ಳಲಿಕ್ಕೆ ಆರೋಗ್ಯ ತಪಾಸಣೆ ಅಗತ್ಯ ಎಂದರು.

ಹುಬ್ಬಳ್ಳಿ-ಧಾರವಾಡ ಇಂಡಿಯನ್‌ ಆರ್ಥೋಪೆಡಿಕ್‌ ಅಸೋಸಿಯೇಶನ್‌ ಅಧ್ಯಕ್ಷ ಡಾ. ಗುರುರಾಜ ಮುರಗೋಡ ಶಿಬಿರದಲ್ಲಿ ಪಾಲ್ಗೊಂಡ 100ಕ್ಕೂ ಹೆಚ್ಚು ಶಿಬಿರಾರ್ಥಿಗಳನ್ನು ತಪಾಸಣೆ ನಡೆಸಿ ಚಿಕಿತ್ಸೆ ನೀಡಿದರು. ಹಿರಿಯ ಮುಖಂಡ ನಿಂಗಪ್ಪ ಚವಡಿ ಅಧ್ಯಕ್ಷ ತೆ ವಹಿಸಿದ್ದರು. ಸಿದ್ದಲಿಂಗಯ್ಯ ಹಿರೇಮಠ, ಅಣ್ಣಪ್ಪ ಬಾಗಿ, ಡಾ.ಗಿರೀಶ್‌ ದಾನಪ್ಪಗೌಡರ, ಗಂಗಾಧರ ಮಟಿಗಾರ,ಬಾಳೇಶ ಯಳಮಲಿ, ನಿಂಗಪ್ಪ ಹಳ್ಳದ,ಅಪ್ಪಣ್ಣ ಹಳ್ಳದ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ