ಆ್ಯಪ್ನಗರ

ಜನಪದ ಕಲೆ ಗ್ರಾಮೀಣ ಬದುಕಿನ ಮೂಲ ಸೆಲೆ

ಧಾರವಾಡ: ಜನಪದ ಕಲೆ ಗ್ರಾಮೀಣ ಬದುಕಿನ ಮೂಲ ಸೆಲೆ. ಜನಪದ ನಮ್ಮ ಪಿತ್ರಾರ್ಜಿತ ಸೊತ್ತು ಎಂದು ಭಾರತ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾಕಾರ್ಯದರ್ಶಿ ವೀರಣ್ಣ ಒಡ್ಡೀನ ಅಭಿಪ್ರಾಯಪಟ್ಟರು.

Vijaya Karnataka 15 Nov 2019, 5:49 pm
ಧಾರವಾಡ: ಜನಪದ ಕಲೆ ಗ್ರಾಮೀಣ ಬದುಕಿನ ಮೂಲ ಸೆಲೆ. ಜನಪದ ನಮ್ಮ ಪಿತ್ರಾರ್ಜಿತ ಸೊತ್ತು ಎಂದು ಭಾರತ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾಕಾರ್ಯದರ್ಶಿ ವೀರಣ್ಣ ಒಡ್ಡೀನ ಅಭಿಪ್ರಾಯಪಟ್ಟರು.
Vijaya Karnataka Web 14MAILAR09_21
ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿನಡೆದ ಜನಪದ ಸಂಭ್ರಮ-2019 ಕಾರ್ಯಕ್ರಮವನ್ನು ಭಾರತ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾಕಾರ್ಯದರ್ಶಿ ವೀರಣ್ಣ ಒಡ್ಡೀನ ಉದ್ಘಾಟಿಸಿದರು.


ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿಕರ್ನಾಟಕ ಜನಪದ ಕಲಾ ಅಭಿವೃದ್ಧಿ ಸಂಸ್ಥೆ ಆಶ್ರಯದಲ್ಲಿಹಮ್ಮಿಕೊಂಡ ಜನಪದ ಸಂಭ್ರಮ-2019 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜನಪದವು ಜನ ಸಮುದಾಯದ ಜೀವಾಳ. ಗ್ರಾಮೀಣ ಬದುಕಿನ ಅಂತಃಸತ್ವದ ರಸಪಾಕ. ಎಲ್ಲಕಲಾ ಪ್ರಕಾರಗಳಿಗೂ ಮೂಲಾಧಾರ. ಕಲಾವಿದರ ಸಂಸ್ಕೃತಿ ಪರಂಪರೆಯ ವಾರಸುದಾರರು. ಗ್ರಾಮೀಣ ಬದುಕಿನ ಜನರು ನೋವು ನಲಿವುಗಳನ್ನು ಹಾಡಿನ ಮೂಲಕ ವ್ಯಕ್ತಗೊಳಿಸಿ ಜನಪದ ಸಂಸ್ಕೃತಿಯ ಶ್ರೀಮಂತಿಕೆ ಹೆಚ್ಚಿಸಿದ್ದಾರೆ ಎಂದು ಹೇಳಿದರು.

ಅತಿಥಿಯಾಗಿ ಆಗಮಿಸಿದ ಸಂಘದ ಯುವಜನ ಮಂಟಪದ ಸಂಚಾಲಕ ಸತೀಶ ತುರಮರಿ ಮಾತನಾಡಿ, ಇಂದಿನ ಸಂಕೀರ್ಣ ಪರಿಸ್ಥಿತಿಯಲ್ಲಿಜನಪದ ಕಲೆ ಹಾಗೂ ಕಲಾವಿದರನ್ನು ಪ್ರೋತ್ಸಾಹಿಸುವ ಅಗತ್ಯವಿದೆ. ಕಲಾವಿದರಿಗೆ ಸರಕಾರದಿಂದ ಸಿಗಬೇಕಾದ ಸಕಲ ಸೌಲಭ್ಯ ಒದಗಿಸಲು ಸಂಘವೂ ಪ್ರಾಮಾಣಿಕ ಪ್ರಯತ್ನ ಮಾಡಲಿದೆ ಎಂದರು.

ಅಧ್ಯಕ್ಷತೆ ವಹಿಸಿದ ಡಾ. ಪ್ರಕಾಶ ಮಲ್ಲಿಗವಾಡ ಮಾತನಾಡಿ, ಜಾಗತೀಕರಣದ ಈ ಸಂದರ್ಭದಲ್ಲಿಸಂಸ್ಕೃತಿ ಪರಂಪರೆಗಳನ್ನು ಉಳಿಸುವ ಕಾರ್ಯವಾಗಬೇಕು. ಜನಪದ ಸಂಸ್ಕೃತಿಯ ಉಳಿವಿಗಾಗಿ ನಾವೆಲ್ಲಾಬದ್ಧತೆಯಿಂದ ಕಾರ್ಯನಿರ್ವಹಿಸಬೇಕು. ಜನಪದ ಸಾಹಿತ್ಯ ಜನಾಂಗದ ಸಮಸ್ತ ನೆಲೆ ಪರಿಚಯಿಸುವ ಕಾಮಧೇನು ಎಂದರು.

ಇದೇ ವೇಳೆ ಜನಪದ ನೃತ್ಯ, ಕೋಲಾಟ, ಸೋಬಾನಪದ, ಗೀಗೀ ಪದ, ಡೊಳ್ಳಿನಪದಗಳನ್ನು ವಿವಿಧ ತಂಡಗಳು ಪ್ರದರ್ಶಿಸಿದರು. ಈಶ್ವರ ತೋರನಗಟ್ಟಿ, ದುರ್ಗಪ್ಪ ಹಿರೇಮನಿ, ಮೀರಾ ಬೀರಣ್ಣವರ್‌, ಬಿ.ಕೆ. ಹೊಂಗಲ್‌, ದಾವಲಸಾಬ್‌ ವಲ್ಲೆಪ್ಪನವರ ಇದ್ದರು. ಇಮಾಮಸಾಬ ವಲ್ಲೆಪ್ಪನವರ್‌ ಪ್ರಾಸ್ತಾವಿಕ ಮಾತನಾಡಿದರು. ಯಕ್ಕೇರಪ್ಪ ನಡುವಿನಮನಿ ಸ್ವಾಗತಿಸಿ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ