ಆ್ಯಪ್ನಗರ

ರೋಗ ತಡೆಗೆ ಸುರಕ್ಷತಾ ಕ್ರಮ ಅನುಸರಿಸಿ

ಹುಬ್ಬಳ್ಳಿ : ನಿರಂತರ ಮಳೆಯಿಂದ ಎಲ್ಲೇಡೆ ಜನಜೀವನ ಅಸ್ವಸ್ಥಗೊಂಡಿದ್ದು, ರೋಗ-ರುಜಿನೆಗಳು ಹೆಚ್ಚಾಗುವ ಸಾಧ್ಯತೆಗಳಿವೆ. ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು ಎಂದು ಡಾ.ವಿ.ಡಿ.ಕರ್ಪೂರಮಠ ಹೇಳಿದರು.

Vijaya Karnataka 17 Aug 2019, 5:00 am
ಹುಬ್ಬಳ್ಳಿ : ನಿರಂತರ ಮಳೆಯಿಂದ ಎಲ್ಲೇಡೆ ಜನಜೀವನ ಅಸ್ವಸ್ಥಗೊಂಡಿದ್ದು, ರೋಗ-ರುಜಿನೆಗಳು ಹೆಚ್ಚಾಗುವ ಸಾಧ್ಯತೆಗಳಿವೆ. ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು ಎಂದು ಡಾ.ವಿ.ಡಿ.ಕರ್ಪೂರಮಠ ಹೇಳಿದರು.
Vijaya Karnataka Web follow safety measures for disease prevention
ರೋಗ ತಡೆಗೆ ಸುರಕ್ಷತಾ ಕ್ರಮ ಅನುಸರಿಸಿ


ಧಾರವಾಡ ಜಿಲ್ಲಾ ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆ ಹಾಗೂ ಭಾರತಾಂಬೆ ಮಹಿಳಾ ಮಂಡಳದ ಆಶ್ರಯದಲ್ಲಿ ಅಮರಗೋಳ ಅಧ್ಯಾಪಕನಗರದ ಹತ್ತಿರ ನೆಲೆಸಿರುವ ಅಲೆಮಾರಿ ಜನಾಂಗದ ಗುಡಿಸಲಿಗೆ ಭೇಟಿ ನೀಡಿ ಅವರು ಮಾತನಾಡಿದರು.

ಮಳೆಗಾಲದಲ್ಲಿ ಎಲ್ಲೆಡೆ ನೀರು ನಿಲ್ಲುತ್ತಿದ್ದು, ಅದು ರೋಗ ಹರಡಲು ಕಾರಣವಾಗುತ್ತಿದೆ. ಶುದ್ಧ ಆಹಾರ ಮತ್ತು ನೀರನ್ನು ಕುಡಿಯುವುದರಿಂದ ರೋಗ ಬಾರದಂತೆ ತಡೆಯಬಹುದು. ಮನೆಯ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಪರಿಸರ ಸಂರಕ್ಷಣೆ ಮಾಡಬೇಕು ಎಂದು ಸಲಹೆ ನೀಡಿದರು.

ಡಾ.ಉಮೇಶ ಹಳ್ಳಿಕೇರಿ ಮಾತನಾಡಿ, ಡೆಂಗೆ ಮತ್ತು ಚಿಕ್ಯುನ್‌ ಗುನ್ಯಾ ರೋಗವು ಸೊಳ್ಳೆ ಕಚ್ಚವುದರಿಂದ ಬರುವ ಕಾಯಿಲೆಯಾಗಿದೆ. ಮನೆಯ ಸದಸ್ಯರು ಉದ್ದನೆಯ ಬಟ್ಟೆಗಳನ್ನು ಧರಿಸಬೇಕು. ರಾತ್ರಿ ಸೊಳ್ಳೆ ಪರದೆ, ಬತ್ತಿ ಹಚ್ಚಬೇಕು ಎಂದು ತಿಳಿಸಿದರು.

ನಜೀರಅಹ್ಮದ ಕೋಲಕಾರ ನೇತೃತ್ವ ವಹಿಸಿದ್ದರು. ಡಾ.ಸುಭಾಷ ಬಬ್ರೂವಾಡ, ಚಂದ್ರಕಲಾ ಚಿನ್ನಪ್ಪಗೌಡ್ರ, ಸುಲೂಚನಾ ಹಿರೇಮಠ, ನಾಗರತ್ನ ಮುಂಡರಗಿ, ನಂದನಿ ಕೋಳಿವಾಡ, ರೇಣುಕಾ ಹಳ್ಳಿಕೇರಿ, ಮಾಲಾ ಗಡೆದ, ಲಲಿತಾ ಬಟ್ಟ, ಎಚ್‌.ಎಂ.ಮಾದೇವಿ, ನಿರ್ಮಲಾ ಪಾಟೀಲ್‌, ಪಾರ್ವತಿ ಉಗರಗೋಳ, ಸುವಾಂಗಿ ಅಕ್ಕಿಸಾಗರ, ಎಸ್‌.ಜಿ. ಮಂಜುಳಾ, ಕಾವ್ಯಾ ಭಟ್ಟ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ