ಆ್ಯಪ್ನಗರ

ಸಮಸ್ಯೆ ಬಗೆಹರಿಸಲು ಒತ್ತಾಯ

ಹುಬ್ಬಳ್ಳಿ: ಇಲ್ಲಿಯ ಜಗದೀಶ ನಗರ ಆಶ್ರಯ ಬಡಾವಣೆಯ ಮತ್ತು ಮೂಲ ಫಲಾನುಭವಿಗಳ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಒತ್ತಾಯಿಸಿ ಜಗದೀಶನಗರದ ಆಶ್ರಯ ನಿವಾಸಿಗಳ ಹಿತರಕ್ಷಣಾ ಸಮಿತಿ ಜಿಲ್ಲಾಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿತು.

Vijaya Karnataka 20 Oct 2019, 5:00 am
ಹುಬ್ಬಳ್ಳಿ: ಇಲ್ಲಿಯ ಜಗದೀಶ ನಗರ ಆಶ್ರಯ ಬಡಾವಣೆಯ ಮತ್ತು ಮೂಲ ಫಲಾನುಭವಿಗಳ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಒತ್ತಾಯಿಸಿ ಜಗದೀಶನಗರದ ಆಶ್ರಯ ನಿವಾಸಿಗಳ ಹಿತರಕ್ಷಣಾ ಸಮಿತಿ ಜಿಲ್ಲಾಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿತು.
Vijaya Karnataka Web force to solve the problem
ಸಮಸ್ಯೆ ಬಗೆಹರಿಸಲು ಒತ್ತಾಯ


ಫಲಾನುಭವಿಗಳಿಗೆ ಹಕ್ಕು ಪತ್ರ, ಅಡಮಾನ ಪತ್ರ, ಕರಾರು ಪತ್ರ ಸೇರಿದಂತೆ ಮೂಲ ದಾಖಲಾತಿಗಳನ್ನು ಕೂಡಲೇ ನೀಡಬೇಕು. 2014ನೇ ಸಾಲಿನಲ್ಲಿಆದ ಸರಕಾರದ ಆದೇಶದಂತೆ ಎಲ್ಲಆಶ್ರಯ ಫಲಾನುಭವಿಗಳಿಗೆ ಸಾಲಮನ್ನಾ ಪತ್ರ ವಿತರಿಸಬೇಕು. ಅಲ್ಲದ, 2015ನೇ ಸಾಲಿನಿಂದ ಹೊಸದಾಗಿ ನಿರ್ಮಿಸುತ್ತಿರುವ 188 ಆಶ್ರಯ ಮನೆಗಳ ಕಾಮಗಾರಿಯನ್ನು ಕೂಡಲೇ ಪೂರ್ಣಗೊಳಿಸಿ ಫಲಾನುಭವಿಗಳಿಗೆ ಹಸ್ತಾಂತರಿಸಬೇಕು. ಅದರಂತೆ ಹು-ಧಾ ಪಶ್ಚಿಮ ವಿಧಾನಸಭಾ ಕ್ಷೇತ್ರದ ಆಶ್ರಯ ಸಮಿತಿ ಅಧ್ಯಕ್ಷರಿಂದ ಮಾಡಲ್ಪಟ್ಟ ಠರಾವು ನಂ. 8 ಮತ್ತು 12ನ್ನು ರದ್ದುಪಡಿಸಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿಸಮಿತಿ ಕಾರ್ಯದರ್ಶಿ ಪ್ರೇಮನಾಥ ಚಿಕ್ಕತುಂಬಳ, ವೆಂಟೇಶ ದೇಸಾಯಿ, ದೀಪಕ ಚವ್ಹಾಣ, ನಾಗರಾಜ ಕ್ಷೌರದ, ಬಸಪ್ಪ ಮಸೂತಿ, ಗಿರೀಶ ಬಳ್ಳಾರಿ, ಕುಬೇರಪ್ಪ ಗೌಡರ, ಹನುಮಂತ ಖರಾಟೆ, ಗಿರಿಜಾ ಕ್ಯಾಲಕೊಂಡ, ಕಮಲಾ ಹಿತ್ತಲಮನಿ, ಚನ್ನಮ್ಮ ಪಡೇಸೂರ, ಲಕ್ಷ್ಮೇ ಮೊಕಾಶಿ ಸೇರಿದಂತೆ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ