ಧಾರವಾಡ : ನಗರದ ಮರಾಠಾ ವಿದ್ಯಾ ಪ್ರಸಾರಕ ಮಂಡಳದ 125ನೇ ವರ್ಷದ ಸಂಸ್ಥಾಪನಾ ಸಂಭ್ರಮಾಚರಣೆ ಅಂಗವಾಗಿ ಜ.26 ಮತ್ತು 27ರಂದು ಮಂಡಳದ ಆವರಣದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಮಂಡಳದ ಗೌರವ ಕಾರ್ಯದರ್ಶಿ ವಿಜಯ ಭೋಸಲೆ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಸಂಭ್ರಮಾಚರಣೆ ಅಂಗವಾಗಿ ಜ.26ರ ಸಂಜೆ 6ಕ್ಕೆ ಆಯೋಜಿಸಿರುವ ನಗೆ ಹಬ್ಬ ಕಾರ್ಯಕ್ರಮಕ್ಕೆ ಹಾಸ್ಯ ದಿಗ್ಗಜರಾದ ಗಂಗಾವತಿ ಪ್ರಾಣೇಶ, ಬಸವರಾಜ ಮಹಾಮನೆ, ನರಸಿಂಹ ಜೋಶಿ ಆಗಮಿಸಲಿದ್ದಾರೆ ಎಂದರು.
ಜ. 27ರಂದು ಬೆಳಗ್ಗೆ 10.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಬೆಂಗಳೂರಿನ ಗೋಸಾವಿ ಸಂಸ್ಥಾನ ಮಠದ ಭವಾನಿ ಪೀಠದ ಮಂಜುನಾಥ ಸ್ವಾಮಿಜಿ , ಮುರುಘಾಮಠದ ಮಲ್ಲಿಕಾರ್ಜುನ ಶ್ರೀಗಳು ಸಾನಿಧ್ಯವಹಿಸಲಿದ್ದಾರೆ.ಈ ವೇಳೆ ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡವನ್ನು ವಿಧಾನಪರಿಷತ್ ಮಾಜಿ ಹಂಗಾಮಿ ಸಭಾಪತಿ ಬಸವರಾಜ ಹೊರಟ್ಟಿ, ಭಾರತ ಪ್ರೌಢಶಾಲೆಯ ವಜ್ರಮಹೋತ್ಸವವನ್ನು ಶಾಸಕ ಅರವಿಂದ ಬೆಲ್ಲದ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ಅಲ್ಲದೇ ಕಾಜೇಜು ಆವರಣದಲ್ಲಿನ ತುಳಜಾ ಭವಾನಿ ದೇವಸ್ಥಾನ ಉದ್ಘಾಟನೆಯನ್ನು ಮಾಜಿ ಸಚಿವ ಎಸ್.ಆರ್. ಮೋರೆ . ಶಿವಾಜಿ ಉದ್ಯಾನವನ ಉದ್ಘಾಟನೆಯನ್ನು ಗ್ಲೋಬಲ್ ನರ್ಸರಿಯ ಸುನೀಲ ಪಾಟೀಲ ನಡೆಸಿಕೊಡುವರು. ಮಾಜಿ ಸಚಿವ ವಿನಯ ಕುಲಕರ್ಣಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು. ಪದವಿ ಕಾಲೇಜು ಕಟ್ಟಡಕ್ಕೆ ಶಾಸಕ ಅಮೃತ ದೇಸಾಯಿ ಶಂಕು ಸ್ಥಾಪನೆ ಮಾಡಲಿದ್ದಾರೆ. ಸಂಚಾಲಕ ಬಿ.ಕೆ.ಕಾಳೆ ಶಿವಾಜಿ ಪುತ್ಥಳಿ ಅನಾವರಣಗೊಳಿಸಲಿದ್ದಾರೆ ಎಮದು ತಿಳಿಸಿದರು.
ಅಂದಿನ ಕಾರ್ಯಕ್ರಮಕ್ಕೆ ಸಂಸದ ಪ್ರಲಾದ ಜೋಶಿ, ವಿಧಾನ ಪರಿಷತ್ ಸದಸ್ಯರಾದ ಶ್ರೀನಿವಾಸ ಮಾನೆ, ಎಸ್.ಎಲ್ ಗೋಟ್ನೆಕರ, ಶಾಸಕಿ ಅಂಜಲಿತಾಯಿ ನಿಂಬಾಳ್ಕರ, ಶಾಸಕ ಅನೀಲ ಬೆನಕೆ, ಹು-ಧಾ ಮೇಯರ್ ಸುಧೀರ ಸರಾಫ್ , ಪಾಲಿಕೆ ಸದಸ್ಯ ರಾಜು ಅಂಬೋರೆ, ಮಾಜಿ ಮೇಯರ್ ಮಂಜುಳಾ ಅಕ್ಕೂರ, ಕೆ.ಕೆ.ಎಂ.ಪಿ ಸುರೇಶರಾವ್ ಸಾಠೆ , ನಿವೃತ್ತ ಪೋಲಿಸ ಆಯುಕ್ತ ಪಾಂಡುರಂಗ ರಾಣೆ, ನಿವೃತ್ತ ಡಿವೈಎಸ್ಪಿ ಜಿನ್ನಪ್ಪ ಘಾಟಗೆ, ಎಸಿಪಿ ಎಂ.ಎನ್. ರುದ್ರಪ್ಪ, ಡಿವೈಎಸ್ಪಿ ರಾಮನಗೌಡ ಹಟ್ಟಿ, ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಸುದಿಗೋಷ್ಠಿಯಲ್ಲಿ ಮರಾಠಾ ವಿದ್ಯಾಪ್ರಸಾರಕ ಮಂಡಳದ ಕಾರ್ಯಾಧ್ಯಕ್ಷ ಹೇಮಂತ ಆರ್. ತಾಂಬಡೆ, ನವೀನ ಕದಂ, ಪ್ರವೀನ ಪವಾರ, ರಾಘವೇಂದ್ರ ಸಾವಂತ , ಅನಿಲ ಆರ್.ಮಾನೆ ಸೇರಿದಂತೆ ಇತರರು ಇದ್ದರು.
ಯಾರೂ ಅನುದಾನ ನೀಡಿಲ್ಲ...
ಮರಾಠಾ ಸಮಾಜದಿಂದ ಸಾಕಷ್ಟು ಜನಪ್ರತಿನಿಧಿಗಳು ಬೆಳೆದಿದ್ದಾರೆ. ಇಂದಿಗೂ ಯಾರೊಬ್ಬರೂ ಸಮಾಜಕ್ಕೆ ಅನುದಾನ ನೀಡಿಲ್ಲ. ಮಂಡಳದ ಪ್ರತಿ ಕಾರ್ಯಕ್ರಮದಲ್ಲಿ ಅನುದಾನ ನೀಡುವುದಾಗಿ ಭರವಸೆ ನೀಡಿ ಸುಮ್ಮನಾಗುತ್ತಾರೆ. ಅನುದಾನಕ್ಕಾಗಿ ಅವರ ಮನೆ ಸುತ್ತಾಡಿ ಸಾಕಾಗಿದೆ. ಈ ಹಿನ್ನೆಲೆಯಲ್ಲಿ ಸಮಾಜದ ವಿವಿಧ ವಾಣಿಜ್ಯ ಕಟ್ಟಡದಿಂದ ಬರುವ ಅನುದಾನದ ಬಳಕೆಯಿಂದಲೇ ನಾವು ಮಂಡಳವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ ಎಂದು ಪದಾಧಿಕಾರಿಗಳು ಪ್ರಶ್ನೆಗೆ ಉತ್ತರಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಸಂಭ್ರಮಾಚರಣೆ ಅಂಗವಾಗಿ ಜ.26ರ ಸಂಜೆ 6ಕ್ಕೆ ಆಯೋಜಿಸಿರುವ ನಗೆ ಹಬ್ಬ ಕಾರ್ಯಕ್ರಮಕ್ಕೆ ಹಾಸ್ಯ ದಿಗ್ಗಜರಾದ ಗಂಗಾವತಿ ಪ್ರಾಣೇಶ, ಬಸವರಾಜ ಮಹಾಮನೆ, ನರಸಿಂಹ ಜೋಶಿ ಆಗಮಿಸಲಿದ್ದಾರೆ ಎಂದರು.
ಜ. 27ರಂದು ಬೆಳಗ್ಗೆ 10.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಬೆಂಗಳೂರಿನ ಗೋಸಾವಿ ಸಂಸ್ಥಾನ ಮಠದ ಭವಾನಿ ಪೀಠದ ಮಂಜುನಾಥ ಸ್ವಾಮಿಜಿ , ಮುರುಘಾಮಠದ ಮಲ್ಲಿಕಾರ್ಜುನ ಶ್ರೀಗಳು ಸಾನಿಧ್ಯವಹಿಸಲಿದ್ದಾರೆ.ಈ ವೇಳೆ ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡವನ್ನು ವಿಧಾನಪರಿಷತ್ ಮಾಜಿ ಹಂಗಾಮಿ ಸಭಾಪತಿ ಬಸವರಾಜ ಹೊರಟ್ಟಿ, ಭಾರತ ಪ್ರೌಢಶಾಲೆಯ ವಜ್ರಮಹೋತ್ಸವವನ್ನು ಶಾಸಕ ಅರವಿಂದ ಬೆಲ್ಲದ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ಅಲ್ಲದೇ ಕಾಜೇಜು ಆವರಣದಲ್ಲಿನ ತುಳಜಾ ಭವಾನಿ ದೇವಸ್ಥಾನ ಉದ್ಘಾಟನೆಯನ್ನು ಮಾಜಿ ಸಚಿವ ಎಸ್.ಆರ್. ಮೋರೆ . ಶಿವಾಜಿ ಉದ್ಯಾನವನ ಉದ್ಘಾಟನೆಯನ್ನು ಗ್ಲೋಬಲ್ ನರ್ಸರಿಯ ಸುನೀಲ ಪಾಟೀಲ ನಡೆಸಿಕೊಡುವರು. ಮಾಜಿ ಸಚಿವ ವಿನಯ ಕುಲಕರ್ಣಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು. ಪದವಿ ಕಾಲೇಜು ಕಟ್ಟಡಕ್ಕೆ ಶಾಸಕ ಅಮೃತ ದೇಸಾಯಿ ಶಂಕು ಸ್ಥಾಪನೆ ಮಾಡಲಿದ್ದಾರೆ. ಸಂಚಾಲಕ ಬಿ.ಕೆ.ಕಾಳೆ ಶಿವಾಜಿ ಪುತ್ಥಳಿ ಅನಾವರಣಗೊಳಿಸಲಿದ್ದಾರೆ ಎಮದು ತಿಳಿಸಿದರು.
ಅಂದಿನ ಕಾರ್ಯಕ್ರಮಕ್ಕೆ ಸಂಸದ ಪ್ರಲಾದ ಜೋಶಿ, ವಿಧಾನ ಪರಿಷತ್ ಸದಸ್ಯರಾದ ಶ್ರೀನಿವಾಸ ಮಾನೆ, ಎಸ್.ಎಲ್ ಗೋಟ್ನೆಕರ, ಶಾಸಕಿ ಅಂಜಲಿತಾಯಿ ನಿಂಬಾಳ್ಕರ, ಶಾಸಕ ಅನೀಲ ಬೆನಕೆ, ಹು-ಧಾ ಮೇಯರ್ ಸುಧೀರ ಸರಾಫ್ , ಪಾಲಿಕೆ ಸದಸ್ಯ ರಾಜು ಅಂಬೋರೆ, ಮಾಜಿ ಮೇಯರ್ ಮಂಜುಳಾ ಅಕ್ಕೂರ, ಕೆ.ಕೆ.ಎಂ.ಪಿ ಸುರೇಶರಾವ್ ಸಾಠೆ , ನಿವೃತ್ತ ಪೋಲಿಸ ಆಯುಕ್ತ ಪಾಂಡುರಂಗ ರಾಣೆ, ನಿವೃತ್ತ ಡಿವೈಎಸ್ಪಿ ಜಿನ್ನಪ್ಪ ಘಾಟಗೆ, ಎಸಿಪಿ ಎಂ.ಎನ್. ರುದ್ರಪ್ಪ, ಡಿವೈಎಸ್ಪಿ ರಾಮನಗೌಡ ಹಟ್ಟಿ, ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಸುದಿಗೋಷ್ಠಿಯಲ್ಲಿ ಮರಾಠಾ ವಿದ್ಯಾಪ್ರಸಾರಕ ಮಂಡಳದ ಕಾರ್ಯಾಧ್ಯಕ್ಷ ಹೇಮಂತ ಆರ್. ತಾಂಬಡೆ, ನವೀನ ಕದಂ, ಪ್ರವೀನ ಪವಾರ, ರಾಘವೇಂದ್ರ ಸಾವಂತ , ಅನಿಲ ಆರ್.ಮಾನೆ ಸೇರಿದಂತೆ ಇತರರು ಇದ್ದರು.
ಯಾರೂ ಅನುದಾನ ನೀಡಿಲ್ಲ...
ಮರಾಠಾ ಸಮಾಜದಿಂದ ಸಾಕಷ್ಟು ಜನಪ್ರತಿನಿಧಿಗಳು ಬೆಳೆದಿದ್ದಾರೆ. ಇಂದಿಗೂ ಯಾರೊಬ್ಬರೂ ಸಮಾಜಕ್ಕೆ ಅನುದಾನ ನೀಡಿಲ್ಲ. ಮಂಡಳದ ಪ್ರತಿ ಕಾರ್ಯಕ್ರಮದಲ್ಲಿ ಅನುದಾನ ನೀಡುವುದಾಗಿ ಭರವಸೆ ನೀಡಿ ಸುಮ್ಮನಾಗುತ್ತಾರೆ. ಅನುದಾನಕ್ಕಾಗಿ ಅವರ ಮನೆ ಸುತ್ತಾಡಿ ಸಾಕಾಗಿದೆ. ಈ ಹಿನ್ನೆಲೆಯಲ್ಲಿ ಸಮಾಜದ ವಿವಿಧ ವಾಣಿಜ್ಯ ಕಟ್ಟಡದಿಂದ ಬರುವ ಅನುದಾನದ ಬಳಕೆಯಿಂದಲೇ ನಾವು ಮಂಡಳವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ ಎಂದು ಪದಾಧಿಕಾರಿಗಳು ಪ್ರಶ್ನೆಗೆ ಉತ್ತರಿಸಿದರು.