ಆ್ಯಪ್ನಗರ

ಫೇಸ್‌ಬುಕ್‌ನಲ್ಲಿ ಪರಿಚಯ, 15.95 ಲಕ್ಷ ರೂ. ವಂಚನೆ

ಹುಬ್ಬಳ್ಳಿ ಮಹಿಳೆಗೆ ಫೇಸಬುಕ್‌ನಲ್ಲಿ ಪರಿಚಯವಾಗಿದ್ದರು. ಅಲ್ಲದೇ ಮಹಿಳೆಗೆ ಇರುವ ಕ್ಯಾನ್ಸರ್‌ಗೆ ಹಣ ನೀಡುವುದಾಗಿ ಹೇಳಿದ್ದಾರೆ. ಅಲ್ಲದೇ ಅವರ ವಿಳಾಸದ ಮಾಹಿತಿ ಪಡೆದು ಗಿಫ್ಟ್‌ ಕಳುಹಿಸಿದ್ದೇನೆ. ಅದನ್ನು ಪಡೆದುಕೊಳ್ಳಲು ತಿಳಿಸಿದ್ದಾರೆ.

Vijaya Karnataka Web 11 Jun 2020, 5:21 pm
ಹುಬ್ಬಳ್ಳಿ: ಫೇಸಬುಕ್‌ನಲ್ಲಿ ಪರಿಚಯವಾದ ಮಹಿಳೆಗೆ ಮದುವೆಯಾಗುವುದಾಗಿ ನಂಬಿಸಿ ಹಾಗೂ ಅವರಿಗೆ ಇರುವ ಕ್ಯಾನ್ಸರ್‌ ಕಾಯಿಲೆಗೆ ಹಣಕಾಸಿನ ಸಹಾಯ ಮಾಡುವುದಾಗಿ ಹೇಳಿ 15.95 ಲಕ್ಷ ರೂ. ವಂಚಿಸಿರುವ ಘಟನೆ ನಗರದ ಗದಗ ರೋಡ್‌ ಪ್ರದೇಶದಲ್ಲಿ ನಡೆದಿದೆ.
Vijaya Karnataka Web ವಂಚನೆ
ವಂಚನೆ


ಕೆನ್ನತ್‌ ಜೆಫ್‌ ಎಂಬುವರೇ ವಂಚನೆ ಮಾಡಿದ್ದು, ಇವರು ಹುಬ್ಬಳ್ಳಿ ಮಹಿಳೆಗೆ ಫೇಸಬುಕ್‌ನಲ್ಲಿ ಪರಿಚಯವಾಗಿದ್ದರು. ಅಲ್ಲದೇ ಮಹಿಳೆಗೆ ಇರುವ ಕ್ಯಾನ್ಸರ್‌ಗೆ ಹಣ ನೀಡುವುದಾಗಿ ಹೇಳಿದ್ದಾರೆ. ಅಲ್ಲದೇ ಅವರ ವಿಳಾಸದ ಮಾಹಿತಿ ಪಡೆದು ಗಿಫ್ಟ್‌ ಕಳುಹಿಸಿದ್ದೇನೆ. ಅದನ್ನು ಪಡೆದುಕೊಳ್ಳಲು ತಿಳಿಸಿದ್ದಾರೆ.

ಅದಾದ ನಂತರ ಮೊಬೈಲ್‌ ಮೂಲಕ ಇನ್ನೊಬ್ಬ ವ್ಯಕ್ತಿ ಸಂಪರ್ಕ ಮಾಡಿ ದೆಹಲಿ ಏರ್‌ಫೋರ್ಟ್‌ ಕಸ್ಟಮ್ಸ್‌ ಅಧಿಕಾರಿ ಎಂದು ಪರಿಚಯ ಮಾಡಿಕೊಂಡು, ಗಿಫ್ಟ್‌ನ್ನು ಮನೆ ವಿಳಾಸಕ್ಕೆ ಕಳುಹಿಸಿ ಕೊಡಲು ಕಸ್ಟಮ್ಸ್‌ ಚಾರ್ಚ್ ಹಾಗೂ ಬೇರೆ ರೀತಿಯ ಚಾರ್ಚ್‌ ಅಂತ ಹೇಳಿ ಬೇರೆ ಬೇರೆ ಖಾತೆಗಳ ನಂಬರ್‌ ನೀಡಿ 15.95 ಲಕ್ಷ ರೂ. ಜಮಾ ಮಾಡಿಸಿಕೊಂಡಿದ್ದಾರೆ. ಮರಳಿ ಯಾವುದೇ ಗಿಫ್ಟ್‌ ಅನ್ನು ನೀಡದೇ, ಹಣವನ್ನು ವಾಪಸ್‌ ನೀಡದೇ ವಂಚನೆ ಮಾಡಿದ್ದಾರೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಅಂಗಡಿ ಕಳ್ಳತನ: ನಗರದ ಟೆಕ್ನೋ ಟ್ರೇಡಿಂಗ್‌ ಕಂಪನಿ ಅಂಗಡಿ ಕೀಲಿ ಮುರಿದು 77 ಸಾವಿರ ರೂ. ಮೌಲ್ಯದ ವಾಸಿಂಗ್‌ ಮಶೀನ್‌, ಏರ್‌ ಕಾಂಪ್ರೆಸ್ಸರ್‌ ಸೇರಿದಂತೆ ವಿವಿಧ ವಸ್ತುಗಳ ಕಳ್ಳತನ ಮಾಡಿರುವ ಘಟನೆ ಎಚ್‌ಡಿಎಂಸಿ ಎದುರಿನ ನರಪಾಲ್‌ ಬಿಲ್ಡಿಂಗ್‌ನಲ್ಲಿ ನಡೆದಿದೆ. ಮಯೂರಿ ಗಾರ್ಡನ್‌ನ ಚಂದ್ರಶೇಖರ ಮಟ್ಟಿ ಎಂಬುವರ ಅಂಗಡಿ ಕಳ್ಳತನವಾಗಿದೆ. ಉಪನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ