ಆ್ಯಪ್ನಗರ

ಮದೀನಾ ಮಸೀದಿಯಲ್ಲಿ ಸೌಹಾರ್ದ ಇಫ್ತಿಯಾರ ಕೂಟ

ಹುಬ್ಬಳ್ಳಿ : ಇಲ್ಲಿನ ಶಬರಿನಗರದ ಮದೀನಾ ಮಸೀದಿಯಲ್ಲಿ ಶನಿವಾರ ಅನ್ಯಧರ್ಮಿಯರಿಗಾಗಿಯೇ ವಿಶೇಷ ಸೌಹಾರ್ದ ಇಫ್ತಿಯಾರ ಕೂಟ ನಡೆಯಿತು.

Vijaya Karnataka 19 May 2019, 5:00 am
ಹುಬ್ಬಳ್ಳಿ : ಇಲ್ಲಿನ ಶಬರಿನಗರದ ಮದೀನಾ ಮಸೀದಿಯಲ್ಲಿ ಶನಿವಾರ ಅನ್ಯಧರ್ಮಿಯರಿಗಾಗಿಯೇ ವಿಶೇಷ ಸೌಹಾರ್ದ ಇಫ್ತಿಯಾರ ಕೂಟ ನಡೆಯಿತು.
Vijaya Karnataka Web friendly iftias meeting in madinah mosque
ಮದೀನಾ ಮಸೀದಿಯಲ್ಲಿ ಸೌಹಾರ್ದ ಇಫ್ತಿಯಾರ ಕೂಟ


ರಂಜಾನ್‌ ಆಚರಣೆ, ಉಪವಾಸದ ಮಹತ್ವ, ಇಫ್ತಿಯಾರ್‌ ಕೂಟ ಎಂದರೇನು ಎಂಬುದನ್ನು ಇತರ ಧರ್ಮಿಯರಿಗೆ ತಿಳಿಸಿಕೊಡುವ ಉದ್ದೇಶದಿಂದಲೇ ಸೌಹಾರ್ದ ಇಫ್ತಿಯಾರ ಕೂಟ ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಮಂಗಳೂರಿನ ಮೌಲಾನಾ ಸೂಫಿಯಾನ್‌ ಮಾತನಾಡಿ, ಎಲ್ಲ ವರ್ಗ, ಜಾತಿ, ಧರ್ಮ, ಪಂಥದ ಜನರು ಒಗ್ಗಟ್ಟಾಗಿ ಭಾವೈಕ್ಯ ಮತ್ತು ಸೌಹಾರ್ದದಿಂದ ಜೀವನ ಸಾಗಿಸುವ ಮೂಲಕ ಮುಂದಿನ ಪೀಳಿಗೆಗೆ ಮಾದರಿ ಆಗಬೇಕು ಎಂದರು.

ಮಾಜಿ ಸಿಎಂ ಜಗದೀಶ ಶೆಟ್ಟರ್‌ ಮಾತನಾಡಿ, ಸೌಹಾರ್ದಯುತ ಬದುಕು ನಮ್ಮದಾಗಿದ್ದರೆ, ದೇಶದ ಭದ್ರತೆಯೂ ಹೆಚ್ಚಾಗಿರುತ್ತದೆ ಎಂದರು. ಸುಂದರ ಮತ್ತು ಸೌಹಾರ್ದ ವಾತಾವರಣ ನಿರ್ಮಾಣವಾಗಿದ್ದರೆ, ನೆಮ್ಮದಿ ಜೀವನ ದೊರೆಯುತ್ತದೆ ಎಂದರು.

ಸಿ.ಎಚ್‌. ಮೆಹಬೂಬಪಾಷಾ, ಶಾಕೀರ ಸನದಿ, ಅಶ್ರಫ್‌ ಅಲೀ, ಫಿರಾಜೀ ಖಂಡೇಕರ, ಜವಳಿ, ಬೀರಪ್ಪ ಖಂಡೇಕಾರ, ಮೋಹನ ಗುರುಸ್ವಾಮಿ ಸೇರಿದಂತೆ ಇತರರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ