ಆ್ಯಪ್ನಗರ

ಕಿಡ್ನಿ ಸ್ಟೋನ್‌ನಿಂದ ವಿಯಟ್ನಾಂವರೆಗೆ...

ಹುಬ್ಬಳ್ಳಿ : ಯೋಗ ಒಂದು ಧರ್ಮ, ಜಾತಿ, ಜನಾಂಗಕ್ಕೆ ಸೀಮಿತವಾಗಿಲ್ಲ. ಯೋಗ ಪ್ರತಿಯೊಬ್ಬ ಮನುಷ್ಯನಿಗೂ ಅವಶ್ಯಕ. ಯೋಗದಿಂದ ರೋಗ ಬರುವುದನ್ನು ತಡೆಗಟ್ಟಬಹುದಲ್ಲದೇ, ಬಂದ ರೋಗದಿಂದ ಮುಕ್ತಿಗೊಳ್ಳಬಹುದು.

Vijaya Karnataka 21 Jun 2019, 10:15 am
ಹುಬ್ಬಳ್ಳಿ: ಯೋಗ ಒಂದು ಧರ್ಮ, ಜಾತಿ, ಜನಾಂಗಕ್ಕೆ ಸೀಮಿತವಾಗಿಲ್ಲ. ಯೋಗ ಪ್ರತಿಯೊಬ್ಬ ಮನುಷ್ಯನಿಗೂ ಅವಶ್ಯಕ. ಯೋಗದಿಂದ ರೋಗ ಬರುವುದನ್ನು ತಡೆಗಟ್ಟಬಹುದಲ್ಲದೇ, ಬಂದ ರೋಗದಿಂದ ಮುಕ್ತಿಗೊಳ್ಳಬಹುದು. ಹೀಗೆಂದು ಹೇಳಿದವರು 20 ವಯಸ್ಸಿನ ಯೋಗ ಸಾಧಕ ಅಲ್ತಾಫ್‌ ತಲವಾಯಿ.
Vijaya Karnataka Web Kidney Stone


ಕಿಡ್ನಿ ಸ್ಟೋನ್‌ ಸಮಸ್ಯೆಯಿಂದ ಬಳಲುತ್ತಿದ್ದಾಗ ಯೋಗಕ್ಕೆ ಮೊರೆ ಹೋಗಿ ಅದರಿಂದ ತನ್ನ ಸಮಸ್ಯೆಯನ್ನು ಸಂಪೂರ್ಣ ನಿವಾರಣೆ ಮಾಡಿಕೊಳ್ಳುವುದರ ಜತೆಗೆ ದೇಶದಲ್ಲಿ ಅಷ್ಟೇ ಅಲ್ಲದೇ ವಿದೇಶದಲ್ಲಿಯೂ ಭಾರತೀಯ ಸಂಸ್ಕೃತಿಯ ಪ್ರತೀಕವಾದ ಯೋಗ ಕಲಿಸುವ ಗುರುವಾಗಿದ್ದಾರೆ ಅಲ್ತಾಫ್‌.

ಕುಂದಗೋಳ ತಾಲೂಕು ಹಿರೇನರ್ತಿ ಗ್ರಾಮದ ಅಲ್ತಾಫ್‌ ಪ್ರಾಥಮಿಕ ಶಾಲೆಯಲ್ಲಿರುವಾಗಲೇ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದರು. ಆಗ ಅವರಿಗೆ ಶಿಕ್ಷಕರಾದ ಎಸ್‌.ಎನ್‌. ಅರಳಿಕಟ್ಟಿ, ಪಿ.ಎಸ್‌. ಸಾಳವಂಕಿ, ಎಂ.ಎಸ್‌. ಅಕ್ಕಿ ಅವರ ಮಾರ್ಗದರ್ಶನದಲ್ಲಿ ನಿತ್ಯ ಯೋಗದ ಅಭ್ಯಾಸದಲ್ಲಿ ತೊಡಗುವಂತೆ ಸಲಹೆ ಮಾಡಿದರು. ಆಗ ಆರಂಭ ಮಾಡಿದ ಯೋಗಾಭ್ಯಾಸದಿಂದ ಕಿಡ್ನಿ ಸಮಸ್ಯೆ ದೂರಾಯಿತಲ್ಲದೇ, ಇಂದು ಮತ್ತೊಬ್ಬರಿಗೆ ಯೋಗ ಕಲಿಸುವ ಗುರುವಿನ ಸ್ಥಾನ ನೀಡಿದೆ.

ಯೋಗದ ಪ್ರತಿಯೊಂದು ಆಸನಗಳನ್ನು ಸರಾಗವಾಗಿ ಮಾಡಿ ತೋರಿಸುತ್ತದ್ದ ಅಲ್ತಾಫ್‌, ಪಿಯುಸಿ ಕಲಿಯುತ್ತಿರುವಾಗಲೇ ವಿಯೆಟ್ನಾಮ್‌ ದೇಶದಲ್ಲಿ ಯೋಗ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. 9 ತಿಂಗಳ ಕಾಲ ವಿಯೆಟ್ನಾಮ್‌ನಲ್ಲಿ ಯೋಗ ಕಲಿಸುವುದರ ಜತೆಗೆ ಭಾರತೀ ಸಂಸ್ಕೃತಿ, ಕಲೆಯ ಬಗ್ಗೆ ತಿಳಿಸಿಕೊಡುವ ಕೆಲಸ ಮಾಡಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಬೆಳೆದ ಒಬ್ಬ ವಿದ್ಯಾರ್ಥಿ ವಿದೇಶದಲ್ಲಿ ಯೋಗ ಶಿಕ್ಷಕನಾಗಿ ಕೆಲಸ ಮಾಡುವಂತೆ ಮಾಡಿದ್ದು ಯೋಗಾ ಯೋಗವೇ ಸರಿ.

ತಂದೆ ಹುಸೇನ್‌ಸಾಬ್‌, ತಾಯಿ ದಾವಲಬಿ ಅವರ ಪ್ರೋತ್ಸಾಹದ ಜತೆಗೆ ಡಾ.ಎ.ಸಿ. ವಾಲಿಮಹಾರಾಜರ ಮತ್ತು ಸುರೇಶ ಕೇರಿ ಅವರ ಸಹಕಾರದೊಂದಿಗೆ ಯೋಗ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಾವು ಮಾಡುತ್ತಿದ್ದ ಯೋಗದ ಆಸನಗಳ ಪೋಟೋಗಳನ್ನು ಅಲ್ತಾಫ್‌ ಪೇಸ್‌ಬುಕ್‌ನಲ್ಲಿ ಅಪ್‌ಲೋಡ್‌ ಮಾಡುತ್ತಿದ್ದರು. ಯೋಗದ ಭಂಗಿಗಳ ಪೋಟೋಗಳು ಯೋಗ ಶಿಕ್ಷಕರ ಗಮನ ಸೆಳೆದವು. ಇದರಿಂದ ಅಲ್ತಾಫ್‌ಗೆ ರಾಜ್ಯದ ವಿವಿಧೆಡೆ ಯೋಗ ಪ್ರದರ್ಶನದ ಅವಕಾಶವೂ ಒದಗಿ ಬಂದಿದೆ.

ನನ್ನ ಜೀವ ಉಳಿಸಿದ ಯೋಗವನ್ನು ದೇಶ-ವಿದೇಶದಲ್ಲಿ ಕಲಿಸುವುದರ ಜತೆ ಶಾಲಾ-ಕಾಲೇಜು ವಿದ್ಯಾರ್ಥಿಗಳಿ ಉಚಿತ ಯೋಗ ಕಲಿಸುತ್ತೇವೆ. ನಾನು ಕಲಿಸಿದ ವಿದ್ಯಾರ್ಥಿಗಳು ರಾಜ್ಯ ಮತ್ತು ಅಂತರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಸಾಧನೆ ಮಾಡಿದ್ದಾರೆ. ನಮ್ಮ ದೇಶದಲ್ಲೂ ಇನ್ನು ಹೆಚ್ಚು ಯೋಗದ ಬಗ್ಗೆ ಜಾಗೃತಿ ಮೂಡಿಸಬೇಕಿದ್ದು, ಯಾರಾದರೂ ಆರ್ಥಿಕವಾಗಿ ಸಹಾಯ ಮಾಡಲು ಮುಂದೆ ಬಂದರೆ ಹುಬ್ಬಳ್ಳಿಯಲ್ಲಿ ಯೋಗ ಕೇಂದ್ರ ಆರಂಭಿಸುವ ಯೋಜನೆ ಇದೆ ಎನ್ನುತ್ತಾರೆ ಅಲ್ತಾಫ್‌.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ