ಆ್ಯಪ್ನಗರ

ಇಂದಿನಿಂದ ಮಹಾಂತ ಶಿವಯೋಗಿಗಳ ಪುಣ್ಯತಿಥಿ

ಧಾರವಾಡ: ತಾಲೂಕಿನ ನರೇಂದ್ರ ಗ್ರಾಮದಲ್ಲಿಮಳೆಪ್ಪಜ್ಜನ ಮಠದ ಹತ್ತಿರ ಶ್ರೀ ಮೌನಯೋಗಿ ಮಹಾಂತ ಶಿವಯೋಗಿಗಳ 54ನೇ ಪುಣ್ಯತಿಥಿ ನಿಮಿತ್ತ ಡಿ.31 ರಿಂದ ಜ.10ವರೆಗೆ ಸಂಜೆ 7ಕ್ಕೆ ಜೀವನ ದರ್ಶನ ಪ್ರವಚನ ನಡೆಯಲಿದೆ.

Vijaya Karnataka 31 Dec 2019, 5:00 am
ಧಾರವಾಡ: ತಾಲೂಕಿನ ನರೇಂದ್ರ ಗ್ರಾಮದಲ್ಲಿಮಳೆಪ್ಪಜ್ಜನ ಮಠದ ಹತ್ತಿರ ಶ್ರೀ ಮೌನಯೋಗಿ ಮಹಾಂತ ಶಿವಯೋಗಿಗಳ 54ನೇ ಪುಣ್ಯತಿಥಿ ನಿಮಿತ್ತ ಡಿ.31 ರಿಂದ ಜ.10ವರೆಗೆ ಸಂಜೆ 7ಕ್ಕೆ ಜೀವನ ದರ್ಶನ ಪ್ರವಚನ ನಡೆಯಲಿದೆ.
Vijaya Karnataka Web from now on the great shivayogi is blessed
ಇಂದಿನಿಂದ ಮಹಾಂತ ಶಿವಯೋಗಿಗಳ ಪುಣ್ಯತಿಥಿ


ಅಂದು ಮಣಕವಾಡದ ಶ್ರೀ ಗುರು ಅನ್ನದಾನೇಶ್ವರ ಮಠದ ಶ್ರೀ ಅಭಿನವ ಮೃತ್ಯುಂಜಯ ಸ್ವಾಮೀಜಿಯವರಿಂದ ಪ್ರವಚನ ನಡೆಯಲಿದೆ. ಪ್ರವಚನ ನಂತರ ಭಜನಾ ಕಾರ್ಯಕ್ರಮ ಜರುಗಲಿದೆ. ಜ.9ರಂದು ವಿದ್ಯಾರ್ಥಿಗಳಿಗೆ ರಂಗೋಲಿ ಸ್ಪರ್ಧೆ, ಜ.11ರಂದು ಭಕ್ತಿ ರಸಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಜ.10 ರಂದು ಬೆಳಗ್ಗೆ 6.30ಕ್ಕೆ ಕರ್ತೃ ಗದ್ದುಗೆಗೆ ಅಭಿಷೇಕ, 7.30ಕ್ಕೆ ಕುಂಭಮೇಳ ಮತ್ತು ಪಲ್ಲಕ್ಕಿ ಉತ್ಸವ ಮತ್ತು ಮಧ್ಯಾಹ್ನ 12ಕ್ಕೆ ಪ್ರಸಾದ ವಿತರಣೆ ನಡೆಯಲಿದೆ.

ಸಂಜೆ 7.30ಕ್ಕೆ ನಾಡಿನ ವಿವಿಧ ಗುರು-ವಿರಕ್ತರ ಸಾನ್ನಿಧ್ಯದಲ್ಲಿಪ್ರವಚನ ಮಂಗಲ ಕಾರ್ಯಕ್ರಮ ಜರುಗಲಿದೆ. ಕಾರ್ಯಕ್ರಮದಲ್ಲಿಮುಖ್ಯ ಅತಿಥಿಗಳಾಗಿ ಶಾಸಕ ಅಮೃತ ದೇಸಾಯಿ ಮತ್ತು ಮಾಜಿ ಸಚಿವ ವಿನಯ ಕುಲಕರ್ಣಿ ಆಗಮಿಸುವರು. ಮಳೆಪ್ಪಜ್ಜನ ಮಠದ ಟ್ರಸ್ಟ್‌ ಕಮೀಟಿ ಅಧ್ಯಕ್ಷ ಚಂದ್ರಗೌಡ ಪಾಟೀಲ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ