ಆ್ಯಪ್ನಗರ

ಪೌರಾಣಿಕ ನಾಟಕ ಪ್ರದರ್ಶನ 16ರಿಂದ

ಧಾರವಾಡ: ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ನಾಡೋಜ ಡಾ.ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿಜ.16ರಿಂದ 18ರವರೆಗೆ ಐತಿಹಾಸಿಕ ಹಾಗೂ ಪೌರಾಣಿಕ ನಾಟಕಗಳ ಪ್ರದರ್ಶನ ನಡೆಯಲಿದೆ ಎಂದು ಕಲಾಸಂಗಮ ಸಂಸ್ಥೆಯ ಅಧ್ಯಕ್ಷ ಪ್ರಭು ಹಂಚಿನಾಳ ಹೇಳಿದರು.

Vijaya Karnataka 14 Jan 2020, 5:00 am
ಧಾರವಾಡ: ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ನಾಡೋಜ ಡಾ.ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿಜ.16ರಿಂದ 18ರವರೆಗೆ ಐತಿಹಾಸಿಕ ಹಾಗೂ ಪೌರಾಣಿಕ ನಾಟಕಗಳ ಪ್ರದರ್ಶನ ನಡೆಯಲಿದೆ ಎಂದು ಕಲಾಸಂಗಮ ಸಂಸ್ಥೆಯ ಅಧ್ಯಕ್ಷ ಪ್ರಭು ಹಂಚಿನಾಳ ಹೇಳಿದರು.
Vijaya Karnataka Web from the legendary drama show 16th
ಪೌರಾಣಿಕ ನಾಟಕ ಪ್ರದರ್ಶನ 16ರಿಂದ


ಸೋಮವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಜ.16ರಂದು ಸಂಜೆ 6ಕ್ಕೆ ನಡೆಯುವ ಪ್ರಭು ಹಂಚಿನಾಳ ನಿರ್ದೇಶನದ ಸಂಗೊಳ್ಳಿ ರಾಯಣ್ಣ ನಾಟಕ ಪ್ರದರ್ಶನವನ್ನು ನ್ಯಾಯವಾದಿ ಡಾ. ಉದಯ ಕುಮಾರ ದೇಸಾಯಿ ಉದ್ಘಾಟಿಸುವರು. ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಜುಳಾ ಯಲಿಗಾರ, ಪಾಲಿಕೆ ಸದಸ್ಯ ಸುಭಾಷ ಶಿಂಧೆ, ಕವಿವ ಸಂಘದ ಪ್ರದಾನ ಕಾರ್ಯದರ್ಶಿ ಪ್ರಕಾಶ ಉಡಿಕೇರಿ ಅತಿಥಿಗಳಾಗಿ ಆಗಮಿಸುವರು ಎಂದರು.

ಜ.17ರಂದು ಸಂಜೆ 6ಕ್ಕೆ ಡಾ.ಮಲ್ಲಿಕಾರ್ಜುನ ಪಾಟೀಲ ರಚಿಸಿದ ಪ್ರಭು ಹಂಚಿನಾಳ ನಿರ್ದೇಶನದ ಮಂಡೋದರಿ ಕಲ್ಯಾಣಂ ಎಂಬ ಪೌರಾಣಿಕ ನಾಟಕ ಪ್ರದರ್ಶನವಾಗಲಿದೆ. ರಂಗಪರಿಸರದ ಸಂಘದ ಅಧ್ಯಕ್ಷ ವಿಠ್ಠಲ ಕೊಪ್ಪದ ಅಧ್ಯಕ್ಷತೆ ವಹಿಸುವರು. ಕವಿವಿ ಮಾಜಿ ಕುಲಸಚಿವ ಸೋಮಣ ಜಾಡರ, ಕರ್ನಾಟಕ ಚಲನಚಿತ್ರೋದ್ಯಮ ಕ್ಷೇಮಾಭಿವೃದ್ಧಿ ಸಂಸ್ಥೆಯ ಸತೀಶ್‌ ತುರುಮರಿ ಅತಿಥಿಗಳಾಗಿ ಆಗಮಿಸುವರು ಎಂದರು.

ಜ.18ರಂದು ಸಂಜೆ 6ಕ್ಕೆ ನಡೆಯುವ ಸಮಾರೋಪದಲ್ಲಿಹಾವೇರಿಯ ಕಲಾಸ್ಪಂದನ ತಂಡದ ಕೆ.ಆರ್‌.ಪಾಟೀಲ ನಿರ್ದೇಶನದ ಸಿಂಧೂರ ಲಕ್ಷತ್ರ್ಮಣ ನಾಟಕ ಪ್ರದರ್ಶನವಾಗಲಿದೆ. ಕಾರ್ಯಕ್ರಮದಲ್ಲಿಕರ್ನಾಟಕ ರಾಜ್ಯ ವಕೀಲರ ಪರಿಷÜತ್‌ ಮಾಜಿ ಅಧ್ಯಕ್ಷ ಆನಂದ ಕುಮಾರ ಮಗುದುಮ್‌ ಅಧ್ಯಕ್ಷತೆ ವಹಿಸುವರು. ಕವಿವಿ ಮೌಲ್ಯಮಾಪನ ಕುಲಸಚಿವ ಎನ್‌.ಎಂ.ಸಾಲಿ ಅತಿಥಿಗಳಾಗಿ ಆಗಮಿಸುವರು ಎಂದರು.

ರಾಜಶೇಖರ ಎಸ್‌.ಹಿರೇಮಠ, ರಾಹುಲ್‌ ದತ್ತಪ್ರಸಾದ, ಕಿರಣ ಸಿದ್ದಾಪೂರ ,ಶಂಕರ ಹೂಗಾರ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ