ಆ್ಯಪ್ನಗರ

ಲಾಕ್‌ಡೌನ್‌ಗೆ ಪೂರ್ಣ ಬೆಂಬಲ

ಧಾರವಾಡ: ಲಾಕ್‌ಡೌನ್‌ನ 2ನೇ ಭಾನುವಾರವೂ ಧಾರವಾಡದಲ್ಲಿಯಶಸ್ವಿಯಾಗಿದ್ದು, ಜನರು ಹೊರಬರದೇ ಬೆಂಬಲ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಆದೇಶಿಸಿರುವ ಕಫ್ರ್ಯೂ ನಗರದಲ್ಲಿಪರಿಣಾಮಕಾರಿಯಾಗಿ ಜಾರಿಯಾಗಿತ್ತು. ನಗರದ ಆಲೂರು ವೆಂಕಟರಾವ್‌ ವೃತ್ತ, ಮಾರುಕಟ್ಟೆ ಪ್ರದೇಶದ ಸುಭಾಸ ರೋಡ್‌, ತರಕಾರಿ ಮಾರುಕಟ್ಟೆ,

Vijaya Karnataka 13 Jul 2020, 5:00 am
ಧಾರವಾಡ: ಲಾಕ್‌ಡೌನ್‌ನ 2ನೇ ಭಾನುವಾರವೂ ಧಾರವಾಡದಲ್ಲಿಯಶಸ್ವಿಯಾಗಿದ್ದು, ಜನರು ಹೊರಬರದೇ ಬೆಂಬಲ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಆದೇಶಿಸಿರುವ ಕಫ್ರ್ಯೂ ನಗರದಲ್ಲಿಪರಿಣಾಮಕಾರಿಯಾಗಿ ಜಾರಿಯಾಗಿತ್ತು. ನಗರದ ಆಲೂರು ವೆಂಕಟರಾವ್‌ ವೃತ್ತ, ಮಾರುಕಟ್ಟೆ ಪ್ರದೇಶದ ಸುಭಾಸ ರೋಡ್‌, ತರಕಾರಿ ಮಾರುಕಟ್ಟೆ, ಸೂಪರ್‌ ಮಾರ್ಕೆಟ್‌, ಸಿಬಿಟಿ, ಶಿವಾಜಿ ಸರ್ಕಲ್‌, ಸಪ್ತಾಪುರ, ಕೋರ್ಟ್‌ ವೃತ್ತ, ಟೋಲ್‌ ನಾಕಾ, ಕೆಸಿಡಿ ವೃತ್ತ ಸೇರಿದಂತೆ ವಿವಿಧ ಪ್ರಮುಖ ಬೀದಿಗಳನ್ನು ಬಂದ್‌ ಮಾಡಿದ್ದ ಪೊಲೀಸರು ಅಲ್ಲೇ ಗಸ್ತು ತಿರುಗಿದರು. ಸಾರ್ವಜನಿಕರಾರ‍ಯರೂ ಮನೆಯಿಂದ ಹೊರ ಬರಲಿಲ್ಲ. ಹೀಗಾಗಿ ನಗರದ ಎಲ್ಲರಸ್ತೆಗಳೂ ಬಿಕೋ ಎನ್ನುತ್ತಿದ್ದವು.
Vijaya Karnataka Web 12MALLU3E_21
ಧಾರವಾಡ ಮಾರುಕಟ್ಟೆಯ ರಸ್ತೆಗಳು ಭಾನುವಾರ ಜನರಿಲ್ಲದೇ ಬಿಕೋ ಎನ್ನುತ್ತಿದ್ದವು.


ಬ್ಯಾರಿಕೇಡ್‌ ಅಳವಡಿಕೆ: ಧಾರವಾಡ ಜುಬ್ಲಿವೃತ್ತದಲ್ಲಿಬೆಳಗಾವಿ ರಸ್ತೆ, ಸಿಬಿಟಿ ಹಾಗೂ ಕೆಸಿಡಿ ಕಾಲೇಜು ಕಡೆಗೆ ಹೋಗುವ ರಸ್ತೆಗಳಿಗೆ ಪೊಲೀಸರು ಬ್ಯಾರಿಕೇಡ್‌ ಅಳವಡಿಸಿ ರಸ್ತೆಗಳನ್ನು ಸಂಪೂರ್ಣ ಬಂದ್‌ ಮಾಡಿದ್ದರು. ಜೊತೆಗೆ ಪ್ರತಿ ವೃತ್ತದಲ್ಲಿ4-5 ಪೊಲೀಸರು ನಿಂತು ಅನಗತ್ಯವಾಗಿ ಓಡಾಡುವ ಜನರಿಗೆ ಎಚ್ಚರಿಕೆ ನೀಡಿ ಕಳಿಸುತ್ತಿದ್ದರು.

ದಂಡ: ಲಾಕ್‌ಡೌನ್‌ ಇದೆ ಎಂದು ಗೊತ್ತಿದ್ದರೂ ಕೆಲ ಯುವಕರು ಅನಗತ್ಯವಾಗಿ ಬೈಕ್‌ಗಳಲ್ಲಿಓಡಾಡುತ್ತಿರುವುದನ್ನು ತಡೆದ ಪೊಲೀಸರು, ವಾಹನಗಳ ದಾಖಲೆಗಳನ್ನು ಪರಿಶೀಲಿಸಿ ಲಾಕ್‌ಡೌನ್‌ ಉಲ್ಲಂಘಿಘಿಸಿದ್ದಕ್ಕೆ ದಂಡ ವಿಧಿಸಿ, ಬಿಸಿ ಮುಟ್ಟಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ