ಆ್ಯಪ್ನಗರ

ಗಾಂಧೀಜಿ ತತ್ವಾದರ್ಶ ವಿಶ್ವಮಾನ್ಯ

ಧಾರವಾಡ : ಗಾಂಧೀಜಿಯವರ ತತ್ವಾದರ್ಶಗಳು ವಿಶ್ವಮಾನ್ಯವಾಗಿದ್ದು, ಅವುಗಳ ಪಾಲನೆ ಹಿಂದಿಗಿಂತಲೂ ಈಗ ಪ್ರಸ್ತುತವಾಗಿದೆ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಚನ್ನಮ್ಮ ಹಳ್ಳಿಕೇರಿ ಹೇಳಿದರು. ನಗರದ ಆಯುಷ್‌ ಇಲಾಖೆ ಮಂಗಳವಾರ ಆಯೋಜಿದ್ದ ಮಹಾತ್ಮಾಗಾಂಧೀಜಿ 150ನೇ ಜಯಂತಿ ವರ್ಷಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

Vijaya Karnataka 18 Jul 2019, 5:00 am
ಧಾರವಾಡ : ಗಾಂಧೀಜಿಯವರ ತತ್ವಾದರ್ಶಗಳು ವಿಶ್ವಮಾನ್ಯವಾಗಿದ್ದು, ಅವುಗಳ ಪಾಲನೆ ಹಿಂದಿಗಿಂತಲೂ ಈಗ ಪ್ರಸ್ತುತವಾಗಿದೆ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಚನ್ನಮ್ಮ ಹಳ್ಳಿಕೇರಿ ಹೇಳಿದರು. ನಗರದ ಆಯುಷ್‌ ಇಲಾಖೆ ಮಂಗಳವಾರ ಆಯೋಜಿದ್ದ ಮಹಾತ್ಮಾಗಾಂಧೀಜಿ 150ನೇ ಜಯಂತಿ ವರ್ಷಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
Vijaya Karnataka Web DRW-17RANGA06
ಆಯುಷ್‌ ಇಲಾಖೆ ಆಯೋಜಿದ್ದ ಮಹಾತ್ಮಾಗಾಂಧೀಜಿ 150ನೇ ಜಯಂತಿ ವರ್ಷಾಚರಣೆ ಕಾರ್ಯಕ್ರಮದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಚನ್ನಮ್ಮ ಹಳ್ಳಿಕೇರಿ ಮಾತನಾಡಿದರು.


ಗಾಂಧೀಜಿ ಅವರನ್ನು ಕೇವಲ ಸ್ವಾತಂತ್ರ್ಯ ಹೋರಾಟಗಾರರೆಂದು ನೋಡದೇ. ಸರಕಾರದ ನೀತಿ ನಿಯಮಗಳ ನಿರ್ದೇಶಕರಂತೆ ಕಾಣಬೇಕಾದ ಅವಶ್ಯಕತೆಯಿದೆ. ಭಾರತೀಯ ನಾಗರಿಕರಲ್ಲದೇ ವಿಶ್ವದ ಜನತೆಗೆ ಬದುಕುವ ರೀತಿ ನೀತಿಗಳನ್ನು ನೀಡಿದ ಗಾಂಧೀಜಿ ಸಾರ್ವಕಾಲಿಕವಾಗಿ ಪ್ರಸ್ತುತವಾಗಿದ್ದಾರೆ ಎಂದರು.

ಕರ್ನಾಟಕ ವಿಶ್ವವಿದ್ಯಾಲಯದ ಗಾಂಧೀ ಅಧ್ಯಯನ ಕೇಂದ್ರದ ನಿರ್ದೇಶಕ ಶಿವಾನಂದ ಶೆಟ್ಟರ ಮಾತನಾಡಿ, ಗಾಂಧೀಜಿ ಕುರಿತು ನಿಂದನಾತ್ಮಕವಾಗಿ ಮಾತನಾಡುವುದು ಸರಿಯಲ್ಲ. ಅವರು ಯಾವುದೇ ಧರ್ಮ, ಜಾತಿ, ವರ್ಗಕ್ಕೆ ಸೇರಿದವರಲ್ಲ .ಇಡೀ ಮಾನವ ಜನಾಂಗಕ್ಕೆ ಒಳಿತನ್ನು ಬಯಸಿ ಸರ್ವರಿಗೂ ಸೇರಿದವರಾಗಿದ್ದಾರೆ. ಜೀವನವನ್ನು ಶುದ್ಧಗೊಳಿಸಿಕೊಳ್ಳುವುದನ್ನು ಹೇಳಿಕೊಟ್ಟಿದ್ದಾರೆ ಎಂದು ತಿಳಿಸಿದರು.

ತಜ್ಞ ವೈದ್ಯ ಡಾ. ಸಂಜೀವ ಕುಲಕರ್ಣಿ ಮಾತನಾಡಿ, ಕಾಯಾ, ವಾಚಾ, ಮನಸ್ಸುಗಳನ್ನು ಸ್ವಚ್ಛವಾಗಿಟ್ಟುಕೊಂಡರೆ ಗಾಂಧೀಜಿಯವರ ಆದರ್ಶಗಳನ್ನು ಪಾಲಿಸಿದಂತೆ. ಅದರಿಂದ ಸರಳ ಬಾಳು ಪಡೆದು ಆತ್ಮೋನ್ನತಿಗೆ ಸಹಾಯವಾಗುವುದು. ಗಾಂಧೀಜಿ ವಿನೋಬಾಜೀ ಜಗತ್ತಿನ ಎರಡು ಪ್ರಜ್ವಲ ಜ್ಯೋತಿಗಳಾಗಿದ್ದಾರೆ ಎಂದರು.

ನ್ಯಾಯವಾದಿ ಬಸವಪ್ರಭು ಹೊಸಕೇರಿ ಮಾತನಾಡಿ, ಖಾದಿ ಧಾರಣೆ ನಮ್ಮ ಅವಿಭಾಜ್ಯ ಅಂಗವಾಗಬೇಕು. ಖಾದಿ ಧಾರಣೆಯಲ್ಲಿ ರೈತರು ಹಾಗೂ ಕಾರ್ಮಿಕರನ್ನು ಬದುಕಿಸುವ ತತ್ವವಿದೆ ಎಂದರು.

ಜಿಲ್ಲಾ ಅಯುಷ್‌ ಅಧಿಕಾರಿ ಡಾ. ಸಂಗಮೇಶ ಮ. ಕಲಹಾಳ ಮಾತನಾಡಿದರು.

ರಾಮಚಂದ್ರ ಧೋಂಗಡೆ, ಡಾ. ಬಿ. ಪಿ. ಪೂಜಾರಿ, ಗಾಧೀ ಶಾಂತಿ ಪ್ರತಿಷ್ಠಾನದ ಸದಸ್ಯರು, ಗಾಂಧಿವಾದಿಗಳು, ಆಯುಷ್‌ ಇಲಾಖೆ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಡಾ. ಹೇಮಂತ. ಅರಕೇರಿ ನಿರ್ವಹಿಸಿದರು.ಪ್ರೊ. ಅರುಣಾ ಹಳ್ಳಿಕೇರಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ