ಆ್ಯಪ್ನಗರ

ನಾಳೆ ಗಣೇಶ ವಿಸರ್ಜನೆ, ಮಾರ್ಗ ಬದಲಾವಣೆ

ಹುಬ್ಬಳ್ಳಿ: ನಗರದಲ್ಲಿ ಸೆ.10ರಂದು 9ನೇ ದಿವಸದ ಗಣೇಶ ಮೂರ್ತಿಗಳ ವಿಸರ್ಜನೆ ನಡೆಯಲಿದೆ. ಈ ಹಿನ್ನೆಲೆಯಲ್ಲಿಸುಗಮ ಸಂಚಾರದ ಹಿತದೃಷ್ಟಿಯಿಂದ ಸೆ. 10 ಸಂಜೆ 5ರಿಂದ ಸೆ. 11ರ ಬೆಳಗ್ಗೆ 10 ಗಂಟೆಯವರೆಗೆ ಮಾರ್ಗ ಬದಲಾವಣೆಗೊಳಿಸಿದ ಪೊಲೀಸ್‌ ಇಲಾಖೆ ಆದೇಶ ಹೊರಡಿಸಿದೆ.

Vijaya Karnataka 10 Sep 2019, 5:00 am
ಹುಬ್ಬಳ್ಳಿ: ನಗರದಲ್ಲಿ ಸೆ.10ರಂದು 9ನೇ ದಿವಸದ ಗಣೇಶ ಮೂರ್ತಿಗಳ ವಿಸರ್ಜನೆ ನಡೆಯಲಿದೆ. ಈ ಹಿನ್ನೆಲೆಯಲ್ಲಿಸುಗಮ ಸಂಚಾರದ ಹಿತದೃಷ್ಟಿಯಿಂದ ಸೆ. 10 ಸಂಜೆ 5ರಿಂದ ಸೆ. 11ರ ಬೆಳಗ್ಗೆ 10 ಗಂಟೆಯವರೆಗೆ ಮಾರ್ಗ ಬದಲಾವಣೆಗೊಳಿಸಿದ ಪೊಲೀಸ್‌ ಇಲಾಖೆ ಆದೇಶ ಹೊರಡಿಸಿದೆ.
Vijaya Karnataka Web ganesha discharge tomorrow change of way tomorrow
ನಾಳೆ ಗಣೇಶ ವಿಸರ್ಜನೆ, ಮಾರ್ಗ ಬದಲಾವಣೆ


ಗದಗ ರೋಡ ರೈಲ್ವೆ ಅಂಡರ ಬ್ರಿಜ್‌ ಕಡೆಯಿಂದ ಬರುವ ವಾಹನಗಳನ್ನು ಕೆ.ಎಚ್‌. ಪಾಟೀಲ ರೋಡ್‌ ಮುಖಾಂತರ ಸರ್ವೋದಯ ಸರ್ಕಲ್‌, ದೇಸಾಯಿ ಸರ್ಕಲ್‌ ಅಂಡರ ಬ್ರೀಜ್‌ ಕೋರ್ಟ್‌ ಸರ್ಕಲ್‌ನಲ್ಲಿಬಲಗಡೆ ತಿರುಗಿ ವಿವೇಕಾನಂದ ರೋಡ, ಸರ್ಕೀಟ್‌ ಹೌಸ ಮುಂದೆ ಹಾಯ್ದು ಕಾಟನ ಮಾರ್ಕೆಟ್‌ ಮೂಲಕ ಪಿ.ಬಿ. ರಸ್ತೆ ಸೇರಿ ಪೂನಾ ಅಥವಾ ಬೆಂಗಳೂರಿಗೆ ಬೈಪಾಸ್‌ ತೆರಳಬೇಕು. ನವಲಗುಂದ ರೋಡ, ಸುಳ್ಳದ ರೋಡ ಕಡೆಯಿಂದ ಬರುವ ವಾಹನಗಳು ಸರ್ವೋದಯ ಸರ್ಕಲ್‌ನಿಂದ ದೇಸಾಯಿ ಸರ್ಕಲ್‌ ಓವರ ಬ್ರೀಜ್‌, ಕೋರ್ಟ ಸರ್ಕಲ್‌ಗೆ ಬಂದು ತಿರುಗಿಸಿಕೊಳ್ಳಬೇಕು.

ಬೆಂಗಳೂರ ಕಡೆಯಿಂದ ಬರುವ ವಾಹನಗಳು ಬೈಪಾಸ ಮಾರ್ಗವಾಗಿ ತಾರಿಹಾಳ ಇಂಟರ ಚೆಂಜ್‌ ಮುಖಾಂತರ ಹುಬ್ಬಳ್ಳಿ ಶಹರ ಪ್ರವೇಶ ಮಾಡಬೇಕು. ಕಾರವಾರ ರೋಡ್‌ ಅಂಡರ ಬ್ರೀಜ್‌ ಇಂಡಿ ಪಂಪ್‌ ಹತ್ತಿರ ವಾಹನಗಳು ಬರದ ಹಾಗೆ ನೋಡಿಕೊಳ್ಳಲಾಗುತ್ತಿದೆ. ಆನಂದ ನಗರ ಕ್ರಾಸ್‌Ü ಕಡೆಯಿಂದ ಬಂದ ವಾಹನಗಳಿಗೆ ಮುರಡೇಶ್ವರಿ ಪ್ಯಾಕ್ಟರಿ ರೋಡ ಮುಖಾಂತರ ತೆರಳಬೇಕು.

ಹೆಗ್ಗೇರಿ ಕಾಲೋನಿ ಕ್ರಾಸ್‌ ಕಡೆಗೆ ವಾಹನಗಳನ್ನು ಬಿಡದ ಹಾಗೆ ಮುರಡೇಶ್ವರ ಪ್ಯಾಕ್ಟರಿ ರೋಡ್‌ಗೆ ಬಿಡಲಾಗುತ್ತಿದೆ. ಆಸಾರಹೊಂಡ ಕ್ರಾಸ್‌, ಕಸಬಾಪೇಟ ಪಿ.ಎಸ್‌, ನ್ಯೂ ಇಂಗ್ಲೀಷ ಸ್ಕೂಲ್‌ ಕ್ರಾಸ್‌, ಮ್ಯಾದಾರ ಓಣಿ, ಪಡದಯ್ಯನ ಹಕ್ಕಲ್‌, ಹಳೇಹುಬ್ಬಳ್ಳಿ ದುರ್ಗದ ಬೈಲ್‌, ನೇಕಾರನಗರ ಕ್ರಾಸ್‌, ಚೆಟ್ನಿಮಠ ಕ್ರಾಸ್‌, ಚೆನ್ನಪೇಟ, ಚೆಟ್ನಿಮಠ, ಶ್ರೀನಗರ ಕ್ರಾಸ್‌, ಕಾರವಾಡ ರೋಡ್‌, ಎಂ.ಟಿ. ಮಿಲ್ಲಕ್ರಾಸ್‌ ಬಿಡದಂತೆ ಕ್ರಮಕೈಗೊಳ್ಳಲಾಗಿದೆ. ವಾಣಿ ವಿಲಾಸ ಮಾರ್ಗವಾಗಿ ಬಿಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ