ಗರಡಿ ಮನೆ ಅಭಿವೃದ್ಧಿಗೆ ಅನುದಾನ
ಅಳ್ನಾವರ : ಸಮೀಪದ ಕುಂಬಾರಕೊಪ್ಪ ಗ್ರಾಮದ ಮಧ್ಯ ಭಾಗದಲ್ಲಿ ಅರ್ಧಕ್ಕೆ ನಿಂತ ಗರಡಿ ಮನೆ ಅಭಿವೃದ್ಧಿ ಕಾರ್ಯಕ್ಕೆ 2ಲಕ್ಷ ರೂ.ಅನುದಾನ ನೀಡಲಾಗುವುದು. ಗ್ರಾಮಸ್ಥರು ವ್ಯಾಯಾಮ ಶಾಲೆಯ ಸದುಪಯೋಗ ಪಡಿಸಿಕೊಂಡು ಸದೃಡ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಶಾಸಕ ಸಿ.ಎಂ.ನಿಂಬಣ್ಣವರ ಹೇಳಿದರು.
Vijaya Karnataka 9 Dec 2018, 5:00 am
ಅಳ್ನಾವರ : ಸಮೀಪದ ಕುಂಬಾರಕೊಪ್ಪ ಗ್ರಾಮದ ಮಧ್ಯ ಭಾಗದಲ್ಲಿ ಅರ್ಧಕ್ಕೆ ನಿಂತ ಗರಡಿ ಮನೆ ಅಭಿವೃದ್ಧಿ ಕಾರ್ಯಕ್ಕೆ 2ಲಕ್ಷ ರೂ.ಅನುದಾನ ನೀಡಲಾಗುವುದು. ಗ್ರಾಮಸ್ಥರು ವ್ಯಾಯಾಮ ಶಾಲೆಯ ಸದುಪಯೋಗ ಪಡಿಸಿಕೊಂಡು ಸದೃಡ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಶಾಸಕ ಸಿ.ಎಂ.ನಿಂಬಣ್ಣವರ ಹೇಳಿದರು.
ತಾಲೂಕಿನ ಕುಂಬಾರಕೊಪ್ಪ ಗ್ರಾಮದಲ್ಲಿ ಅರ್ಧಕ್ಕೆ ನಿಂತ ಗರಡಿ ಮನೆ ಪ್ರಗತಿ ಪರಿಶೀಲಿಸಿದ ನಂತರ ಸಿದ್ದಾರೂಢ ಮಠದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತಾನಾಡಿದರು. ಗ್ರಾಮದ ಜನರು ಉತ್ತಮ ಹವ್ಯಾಸ ಹಾಗೂ ಆರೋಗ್ಯ ಹೊಂದಬೇಕು. ವಿಶೇಷವಾಗಿ ಯುವ ಸಮುದಾಯ ಆರೋಗ್ಯಪೂರ್ಣ ಸಮಾಜ ನಿರ್ಮಿಸಲು ಸನ್ನದ್ದರಾಗಬೇಕು ಎಂದರು.
ಕಲಘಟಗಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುವೆ. ಕುಂಬಾರಕೊಪ್ಪ ಗ್ರಾಮದ ಟೆನೆಂಟ ಕೃಷಿ ಭೂಮಿಯ ಹಿಡುವಳಿದಾರರ ಸಮಸ್ಯೆ ಬಗೆಹರಿಸಲಾಗುವುದು. ಈ ಕ್ಷೇತ್ರವನ್ನು ಸಮಗ್ರ ನೀರಾವರಿಗೆ ಒಳಪಡಿಸಬೇಕು. ಇದಕ್ಕಾಗಿ ಸರಕಾರದ ಮಟ್ಟದಲ್ಲಿ ಅನುದಾನ ಬಿಡುಗಡೆಗೆ ಪ್ರಯತ್ನ ನಡೆದಿದೆ ಎಂದರು.
ಕುಂಬಾರಕೊಪ್ಪ ಗ್ರಾಮದ ಹಿರಿಯ ಆಶೋಕ ಸಾವಂತ ಮಾತನಾಡಿ, ಗೌಳಿ ಜನಾಂಗ ವಾಸವಿರುವ ಮಡಕಿಕೊಪ್ಪ ರಸ್ತೆ ಅಭಿವೃದ್ಧಿ ಆಗಬೇಕು. ಟೆನೆಂಟ ಭೂಮಿ ಮಾಲೀಕರಿಗೆ ಅವರ ಹೆಸರಿನಲ್ಲಿ ಗಣಕೀಕೃತ ಉತಾರ ನೀಡುವ ವ್ಯವಸ್ಥೆ ಆಗಬೇಕು ಎಂದು ಶಾಸಕರಲ್ಲಿ ಮನವಿ ಸಲ್ಲಿಸಿದರು.
ಐ.ಸಿ.ಗೋಕುಲ್, ಶಂಕರ ಬಸವರೆಡ್ಡಿ, ಅಳ್ನಾವರ ಶಹರ ಘಟಕದ ಅಧ್ಯಕ್ಷ ಲಿಂಗರಾಜ ಮೂಲಿಮನಿ, ನಾರಾಯಣ ಮೋರೆ, ಕಲ್ಮೇಶ ಬೈಲೂರ, ಶಿವಾಜಿ ಡೊಳ್ಳಿನ, ಜಯಪ್ರಕಾಶ ಕೌಜಲಗಿ, ತುಕಾರಾಮ ಪಾಟೀಲ ಇದ್ದರು.
ಬೆಣಿಚಿ ಗ್ರಾಮದ ಎಲ್ಲ ಸಮುದಾಯಗಳಿಗೆ ಪ್ರತ್ಯೇಕ ಸ್ಮಶಾನ ಭೂಮಿ ಮಂಜೂರಿ ನೀಡಬೇಕು. ಕರೆ ಅಭಿವೃದ್ಧಿ , ಬೆಣಚಿ - ಮುತ್ತಲಮುರಿ ರಸ್ತೆ ಅಭಿವೃದ್ಧಿ, ಪಶು ಚಿಕಿತ್ಸಾಲಯ ಕುರಿತು ಶಾಸಕರಿಗೆ ಬೇಡಿಕೆ ಸಲ್ಲಿಸಲಾಯಿತು.
ನಂತರ ಶಾಸಕರು ಬೆಣಚಿ, ಕೋಲಗೇರಿ ಹಾಗೂ ಡೋರಿ ಗ್ರಾಮದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಗ್ರಾಮಸ್ಥರ ಅಹವಾಲು ಆಲಿಸಿದರು. ಬೆಣಚಿ ಗ್ರಾಪಂ ಅಧ್ಯಕ್ಷೆ ಅಮೀನಾಬಾನುಬೇಗಂ ನದಾಫ್, ತಾಪಂ ಸದಸ್ಯೆ ಸ್ಮೀತಾ ಜವಳಿ, ಚೆನ್ನಬಸ್ಸು ಕುಬಸದ, ಪ್ರಕಾಶ ಕುಣಕಿಕೊಪ್ಪ, ಪರಶುರಾಮ ರೇಡೆಕರ, ಶಿವಾಜಿ ಮಾದಪ್ಪನವರ ಇದ್ದರು.
ತಾಲೂಕಿನ ಕುಂಬಾರಕೊಪ್ಪ ಗ್ರಾಮದಲ್ಲಿ ಅರ್ಧಕ್ಕೆ ನಿಂತ ಗರಡಿ ಮನೆ ಪ್ರಗತಿ ಪರಿಶೀಲಿಸಿದ ನಂತರ ಸಿದ್ದಾರೂಢ ಮಠದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತಾನಾಡಿದರು. ಗ್ರಾಮದ ಜನರು ಉತ್ತಮ ಹವ್ಯಾಸ ಹಾಗೂ ಆರೋಗ್ಯ ಹೊಂದಬೇಕು. ವಿಶೇಷವಾಗಿ ಯುವ ಸಮುದಾಯ ಆರೋಗ್ಯಪೂರ್ಣ ಸಮಾಜ ನಿರ್ಮಿಸಲು ಸನ್ನದ್ದರಾಗಬೇಕು ಎಂದರು.
ಕಲಘಟಗಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುವೆ. ಕುಂಬಾರಕೊಪ್ಪ ಗ್ರಾಮದ ಟೆನೆಂಟ ಕೃಷಿ ಭೂಮಿಯ ಹಿಡುವಳಿದಾರರ ಸಮಸ್ಯೆ ಬಗೆಹರಿಸಲಾಗುವುದು. ಈ ಕ್ಷೇತ್ರವನ್ನು ಸಮಗ್ರ ನೀರಾವರಿಗೆ ಒಳಪಡಿಸಬೇಕು. ಇದಕ್ಕಾಗಿ ಸರಕಾರದ ಮಟ್ಟದಲ್ಲಿ ಅನುದಾನ ಬಿಡುಗಡೆಗೆ ಪ್ರಯತ್ನ ನಡೆದಿದೆ ಎಂದರು.
ಕುಂಬಾರಕೊಪ್ಪ ಗ್ರಾಮದ ಹಿರಿಯ ಆಶೋಕ ಸಾವಂತ ಮಾತನಾಡಿ, ಗೌಳಿ ಜನಾಂಗ ವಾಸವಿರುವ ಮಡಕಿಕೊಪ್ಪ ರಸ್ತೆ ಅಭಿವೃದ್ಧಿ ಆಗಬೇಕು. ಟೆನೆಂಟ ಭೂಮಿ ಮಾಲೀಕರಿಗೆ ಅವರ ಹೆಸರಿನಲ್ಲಿ ಗಣಕೀಕೃತ ಉತಾರ ನೀಡುವ ವ್ಯವಸ್ಥೆ ಆಗಬೇಕು ಎಂದು ಶಾಸಕರಲ್ಲಿ ಮನವಿ ಸಲ್ಲಿಸಿದರು.
ಐ.ಸಿ.ಗೋಕುಲ್, ಶಂಕರ ಬಸವರೆಡ್ಡಿ, ಅಳ್ನಾವರ ಶಹರ ಘಟಕದ ಅಧ್ಯಕ್ಷ ಲಿಂಗರಾಜ ಮೂಲಿಮನಿ, ನಾರಾಯಣ ಮೋರೆ, ಕಲ್ಮೇಶ ಬೈಲೂರ, ಶಿವಾಜಿ ಡೊಳ್ಳಿನ, ಜಯಪ್ರಕಾಶ ಕೌಜಲಗಿ, ತುಕಾರಾಮ ಪಾಟೀಲ ಇದ್ದರು.
ಬೆಣಿಚಿ ಗ್ರಾಮದ ಎಲ್ಲ ಸಮುದಾಯಗಳಿಗೆ ಪ್ರತ್ಯೇಕ ಸ್ಮಶಾನ ಭೂಮಿ ಮಂಜೂರಿ ನೀಡಬೇಕು. ಕರೆ ಅಭಿವೃದ್ಧಿ , ಬೆಣಚಿ - ಮುತ್ತಲಮುರಿ ರಸ್ತೆ ಅಭಿವೃದ್ಧಿ, ಪಶು ಚಿಕಿತ್ಸಾಲಯ ಕುರಿತು ಶಾಸಕರಿಗೆ ಬೇಡಿಕೆ ಸಲ್ಲಿಸಲಾಯಿತು.
ನಂತರ ಶಾಸಕರು ಬೆಣಚಿ, ಕೋಲಗೇರಿ ಹಾಗೂ ಡೋರಿ ಗ್ರಾಮದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಗ್ರಾಮಸ್ಥರ ಅಹವಾಲು ಆಲಿಸಿದರು. ಬೆಣಚಿ ಗ್ರಾಪಂ ಅಧ್ಯಕ್ಷೆ ಅಮೀನಾಬಾನುಬೇಗಂ ನದಾಫ್, ತಾಪಂ ಸದಸ್ಯೆ ಸ್ಮೀತಾ ಜವಳಿ, ಚೆನ್ನಬಸ್ಸು ಕುಬಸದ, ಪ್ರಕಾಶ ಕುಣಕಿಕೊಪ್ಪ, ಪರಶುರಾಮ ರೇಡೆಕರ, ಶಿವಾಜಿ ಮಾದಪ್ಪನವರ ಇದ್ದರು.