ಆ್ಯಪ್ನಗರ

ಕಾನೂನು ಅರಿವು ನೆರವು ಪಡೆಯಿರಿ

ಧಾರವಾಡ : ಭಾರತದ ಸಂವಿಧಾನ, ನ್ಯಾಯಾಂಗ ವ್ಯವಸ್ಥೆಯು ಅಬಲರಿಗೆ, ಹಿಂದುಳಿದವರಿಗೆ, ಬಡವರಿಗೆ, ಮಹಿಳೆ, ಮಕ್ಕಳಿಗೆ ರಕ್ಷಣೆ ನೀಡಿ ಅಗತ್ಯ ನ್ಯಾಯಾಂಗ ಸೇವೆ ನೀಡಲು ಅನೇಕ ಅವಕಾಶ, ಸೌಲಭ್ಯಗಳನ್ನು ಕಲ್ಪಿಸಿದೆ. ಈ ಮಾಹಿತಿಯೊಂದಿಗೆ ಕಾನೂನು ಅರಿವು-ನೆರವು ನೀಡಲು ಕಾನೂನು ಸಾಕ್ಷರತಾ ರಥದ ಮೂಲಕ ಜನರ ಬಾಗಿಲಿಗೆ ಬರುತ್ತಿದೆ. ಅದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಜಿಲ್ಲಾಪ್ರಧಾನ ಹಾಗೂ ಸತ್ರ ನ್ಯಾಯಾಧೀಶ ಈಶಪ್ಪ ಭೂತೆ ಹೇಳಿದರು.

Vijaya Karnataka 3 Jan 2020, 5:00 am
ಧಾರವಾಡ : ಭಾರತದ ಸಂವಿಧಾನ, ನ್ಯಾಯಾಂಗ ವ್ಯವಸ್ಥೆಯು ಅಬಲರಿಗೆ, ಹಿಂದುಳಿದವರಿಗೆ, ಬಡವರಿಗೆ, ಮಹಿಳೆ, ಮಕ್ಕಳಿಗೆ ರಕ್ಷಣೆ ನೀಡಿ ಅಗತ್ಯ ನ್ಯಾಯಾಂಗ ಸೇವೆ ನೀಡಲು ಅನೇಕ ಅವಕಾಶ, ಸೌಲಭ್ಯಗಳನ್ನು ಕಲ್ಪಿಸಿದೆ. ಈ ಮಾಹಿತಿಯೊಂದಿಗೆ ಕಾನೂನು ಅರಿವು-ನೆರವು ನೀಡಲು ಕಾನೂನು ಸಾಕ್ಷರತಾ ರಥದ ಮೂಲಕ ಜನರ ಬಾಗಿಲಿಗೆ ಬರುತ್ತಿದೆ. ಅದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಜಿಲ್ಲಾಪ್ರಧಾನ ಹಾಗೂ ಸತ್ರ ನ್ಯಾಯಾಧೀಶ ಈಶಪ್ಪ ಭೂತೆ ಹೇಳಿದರು.
Vijaya Karnataka Web get legal awareness assistance
ಕಾನೂನು ಅರಿವು ನೆರವು ಪಡೆಯಿರಿ


ನಗರದ ಜಿಲ್ಲಾನ್ಯಾಯಾಲಯ ಆವರಣದಲ್ಲಿಗುರುವಾರ ಜಿಲ್ಲಾಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾಪಂಚಾಯತ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿಆಯೋಜಿಸಿದ್ದ ಕಾನೂನು ಸಾಕ್ಷರತಾ ರಥ ಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಉಚಿತ ಕಾನೂನು ಸಲಹೆ : ಕಾನೂನು ಸಾಕ್ಷರತಾ ರಥದೊಂದಿಗೆ ಪರಿಣಿತ ವಕೀಲರು ಹಾಜರಿರುವುದರಿಂದ ಸಾರ್ವಜನಿಕರು ತಮಗೆ ಸಂಬಂಧಿಸಿದ ಸಿವಿಲ್‌ ವ್ಯಾಜ್ಯ, ಕೌಟುಂಬಿಕ ಕಲಹ ಸೇರಿದಂತೆ ಯಾವುದೇ ರೀತಿಯ ಸಮಸ್ಯೆಗಳಿದ್ದರೆ ಸಂಪರ್ಕಿಸಿ ಉಚಿತವಾಗಿ ಕಾನೂನು ಸಲಹೆ ಪಡೆಯಬಹುದು ಎಂದು ಹೇಳಿದರು.

ಜಿಪಂ ಸಿಇಒ ಡಾ.ಬಿ.ಸಿ. ಸತೀಶ್‌ , ಜಿಲ್ಲಾಪೊಲೀಸ್‌ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ ಮಾತನಾಡಿ, ಸಾಕ್ಷರತಾ ರಥದೊಂದಿಗೆ ಬೀಟ್‌ ಪೊಲೀಸರು ಮತ್ತು ಆ ಪ್ರದೇಶ ವ್ಯಾಪ್ತಿಯ ಪೊಲೀಸ್‌ ಠಾಣೆಯ ಅಧಿಕಾರಿಗಳು ಪಾಲ್ಗೊಂಡು ಆರಕ್ಷಕ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಸ್ಪಂದಿಸಲಿದ್ದಾರೆ ಎಂದು ಹೇಳಿದರು.

ಜಿಲ್ಲಾಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್‌ ನ್ಯಾಯಾಧೀಶ ಆರ್‌.ಎಸ್‌. ಚಿಣ್ಣನ್ನವರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಜಿಲ್ಲಾನ್ಯಾಯಾಧೀಶ ಗಂಗಾಧರ ಸಿ.ಎಂ., ನ್ಯಾಯಾಧೀಶೆ ಸಾವಿತ್ರಿ ಕುಜ್ಜಿ, ಹಿರಿಯ ಸಿವಿಲ್‌ ನ್ಯಾಯಾಧೀಶಇಂದಿರಾ ಚಟ್ಟಿಯಾರ್‌, ರವೀಂದ್ರ ಅರಿ, ಮಮತಾ ಡಿ, ನೀತಿನ್‌ ಯಶವಂತರಾವ್‌,ಪ್ರಧಾನ ಸಿವಿಲ್‌ ನ್ಯಾತಾಧೀಶೆ ವಿಜಯಲಕ್ಷಿತ್ರ್ಮೕ ಘಾನಾಪುರ, ಸಿವಿಲ್‌ ನ್ಯಾಯಾಧೀಶರಾದ ಅಚ್ಚಪ್ಪ ದೊಡ್ಡಬಸವರಾಜಪ್ಪ, ಕುರಣಿಕಾಂತ ಡಾಕು, ಪರಿಮಳಾ ತುಬಾಕಿ, ಧಾರವಾಡ ವಕೀಲರ ಸಂಘದ ಅಧ್ಯಕ್ಷ ಬಿ.ಎಸ್‌. ಘೋಡಸೆ, ಭಾರತಿ ಶೆಟ್ಟರ್‌, ವಿದ್ಯಾ ನಾಡಿಗೇರ, ಎನ್‌.ಎ. ಪುಟ್ಟಪ್ಪನವರ ಸೇರಿದಂತೆ ಮತ್ತಿತರರು ಇದ್ದರು. ಅಧಿಕ ಜಿಲ್ಲಾನ್ಯಾಯಾಧೀಶ ಎಚ್‌.ಸಿ. ಶ್ಯಾಮಪ್ರಸಾದ್‌ ಸ್ವಾಗತಿಸಿದರು. ಶ್ರೀಕಾಂತ ಎಸ್‌.ವಿ. ವಂದಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ