ಆ್ಯಪ್ನಗರ

ಬಾಲಕಿಯರ ಏಕವಲಯ ಬಾಸ್ಕೆಟ್‌ ಬಾಲ್‌ ಪಂದ್ಯಾವಳಿ

ಧಾರವಾಡ: ಜೆಎಸ್‌ಎಸ್‌ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆ ಆಥಿತ್ಯದಲ್ಲಿಮಲ್ಲಸಜ್ಜನ ಮಹಾವಿದ್ಯಾಲಯದ ಕ್ರೀಡಾಂಗಣದಲ್ಲಿನಡೆದ ಕರ್ನಾಟಕ ವಿಶ್ವವಿದ್ಯಾಲಯ ಅಂತರ ಮಹಾವಿದ್ಯಾಲಯಗಳ ಬಾಲಕಿಯರ ಏಕವಲಯ ಬಾಸ್ಕೆಟ್‌ ಬಾಲ್‌ ಪಂದ್ಯಾವಳಿ 2019-20ನಲ್ಲಿಕೆ.ಜಿ. ನಾಡಗೇರ ದೈಹಿಕ ಶಿಕ್ಷಣ ಮಹಾವಿದ್ಯಾಲಯ ಪ್ರಥಮ ಸ್ಥಾನ ಪಡೆಯಿತು.

Vijaya Karnataka 14 Oct 2019, 5:00 am
ಧಾರವಾಡ: ಜೆಎಸ್‌ಎಸ್‌ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆ ಆಥಿತ್ಯದಲ್ಲಿಮಲ್ಲಸಜ್ಜನ ಮಹಾವಿದ್ಯಾಲಯದ ಕ್ರೀಡಾಂಗಣದಲ್ಲಿನಡೆದ ಕರ್ನಾಟಕ ವಿಶ್ವವಿದ್ಯಾಲಯ ಅಂತರ ಮಹಾವಿದ್ಯಾಲಯಗಳ ಬಾಲಕಿಯರ ಏಕವಲಯ ಬಾಸ್ಕೆಟ್‌ ಬಾಲ್‌ ಪಂದ್ಯಾವಳಿ 2019-20ನಲ್ಲಿಕೆ.ಜಿ. ನಾಡಗೇರ ದೈಹಿಕ ಶಿಕ್ಷಣ ಮಹಾವಿದ್ಯಾಲಯ ಪ್ರಥಮ ಸ್ಥಾನ ಪಡೆಯಿತು.
Vijaya Karnataka Web girls single basketball tournament
ಬಾಲಕಿಯರ ಏಕವಲಯ ಬಾಸ್ಕೆಟ್‌ ಬಾಲ್‌ ಪಂದ್ಯಾವಳಿ


ದ್ವಿತೀಯ ಸ್ಥಾನವನ್ನು ಜೆಎಸ್‌ಎಸ್‌ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆ, ತೃತೀಯ ಸ್ಥಾನವನ್ನು ಜೆಎಸ್‌ಎಸ್‌ ಪದವಿ ಮಹಾವಿದ್ಯಾಲಯ ಪಡೆಯಿತು.

ವೈಯಕ್ತಿಕವಾಗಿ ಬೆಸ್ಟ್‌ ಬಾಲ್‌ ಹ್ಯಾಂಡಲರ್‌ ಆಗಿ ಜೆಎಸ್‌ಎಸ್‌ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ವಿದ್ಯಾರ್ಥಿನಿ ಅಂಜಲಿ ವಿ, ಬೆಸ್ಟ್‌ ಶೂಟರ್‌ ಆಗಿ ಜೆಎಸ್‌ಎಸ್‌ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿನಿ ಸ್ನೇಹಾ ಮಾನೀಕ್‌, ಬೆಸ್ಟ್‌ ಆಲ್‌ರೌಂಡರ್‌ ಆಗಿ ಕೆ.ಜಿ. ನಾಡಗೇರ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿನಿ ರಂಜಿತಾ ಗೌಡ, ಮೋಸ್ಟ್‌ ಪ್ರಾಮಿಸಿಂಗ್‌ ಆಫ್‌ ದಿ ಟೂರ್ನಮೆಂಟ್‌ ಆಗಿ ಜೆ.ಜಿ ಕಾಲೇಜ್‌, ಹುಬ್ಬಳ್ಳಿಯ ವಿದ್ಯಾರ್ಥಿನಿ ಸುಷ್ಮಾ ಎಚ್‌ ಹಾಗೂ ಬೆಸ್ಟ್‌ ಡಿಸಿಪ್ಲೇನ್‌ ಟೀಮ್‌ ಆಗಿ ಜೆ.ಜಿ ಕಾಲೇಜ್‌ ಹುಬ್ಬಳ್ಳಿ ಪಡೆದುಕೊಂಡಿತು.

ಸಂಜೆ ನಡೆದ ಸಮಾರೋಪದಲ್ಲಿಡಾ.ಅಜಿತ ಪ್ರಸಾದ, ಶಕುಂತಲಾ ಹಿರೇಮಠ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು. ಶ್ರವಣಕುಮಾರ ಸ್ವಾಗತಿಸಿದರು. ಜೆ.ಆರ್‌. ಕುಂದಗೋಳ ನಿರೂಪಿಸಿದರು. ಗಣೇಶ ನಾಯ್ಕ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ