ಆ್ಯಪ್ನಗರ

ಗೀತಾ ಸಂದೇಶ ಉಪನ್ಯಾಸ

ಧಾರವಾಡ : ನನ್ನ ಭಕ್ತರ ರಕ್ಷ ಣೆಯ ಪೂರ್ಣ ಭಾರವನ್ನು ನಾನೇ ಹೊತ್ತಿದ್ದೇನೆ. ನನ್ನನ್ನೇ ಯಾರು, ಯಾವಾಗಲೂ ಉಪಾಸನೆ ಮಾಡುತ್ತಾರೋ, ಅವರ ಯೋಗಕ್ಷೇಮವನ್ನು ನಾನೇ ಮಾಡುತ್ತೇನೆ. ನನ್ನನ್ನು ಯಾರು ಭಜಿಸುತ್ತಾರೋ ಆ ಭಕ್ತ ವರ್ಗವನ್ನು ರಕ್ಷಿಸುವುದು ನನ್ನ ವೃತ ಎಂದು ರಾಮಾವತರದಲ್ಲಿ ರಾಮಚಂದ್ರದೇವರು ಹೇಳಿದ್ದಾರೆ ಎಂದು ಪಂ.ಶ್ರೀನಿಧಿಆಚಾರ್ಯ ಬಲ್ಲರವಾಡ ತಿಳಿಸಿದರು.

Vijaya Karnataka 28 May 2019, 5:00 am
ಧಾರವಾಡ : ನನ್ನ ಭಕ್ತರ ರಕ್ಷ ಣೆಯ ಪೂರ್ಣ ಭಾರವನ್ನು ನಾನೇ ಹೊತ್ತಿದ್ದೇನೆ. ನನ್ನನ್ನೇ ಯಾರು, ಯಾವಾಗಲೂ ಉಪಾಸನೆ ಮಾಡುತ್ತಾರೋ, ಅವರ ಯೋಗಕ್ಷೇಮವನ್ನು ನಾನೇ ಮಾಡುತ್ತೇನೆ. ನನ್ನನ್ನು ಯಾರು ಭಜಿಸುತ್ತಾರೋ ಆ ಭಕ್ತ ವರ್ಗವನ್ನು ರಕ್ಷಿಸುವುದು ನನ್ನ ವೃತ ಎಂದು ರಾಮಾವತರದಲ್ಲಿ ರಾಮಚಂದ್ರದೇವರು ಹೇಳಿದ್ದಾರೆ ಎಂದು ಪಂ.ಶ್ರೀನಿಧಿಆಚಾರ್ಯ ಬಲ್ಲರವಾಡ ತಿಳಿಸಿದರು.
Vijaya Karnataka Web DRW-27RANGA02
ಧಾರವಾಡ ಸತ್ತೂರಿನ ನಾರಾಯಣ ಪಾರಾಯಣ ಬಳಗ ಆಯೋಜಿದ್ದ ಕಾರ್ಯಕ್ರಮದಲ್ಲಿ ಪಂ.ಶ್ರೀನಿಧಿಆಚಾರ್ಯ ಬಲ್ಲರವಾಡ ಮಾತನಾಡಿದರು.


ಸತ್ತೂರಿನ ನಾರಾಯಣ ಪಾರಾಯಣ ಬಳಗದ ಆಶ್ರಯದಲ್ಲಿ ರಾಜಾಜೀನಗರದಲ್ಲಿರುವ ರಘೋತ್ತಮ ಅವಧಾನಿಯವರ ನಿವಾಸದಲ್ಲಿ ಭಾನುವಾರ ನಡೆದ ಗೀತಾ ಸಂದೇಶದ ಕುರಿತು ಉಪನ್ಯಾಸ ಮಾಲಿಕೆಯಲ್ಲಿ ಅವರು ಮಾತನಾಡಿದರು.

ನಾವು ಮಾಡಿದ ಎಲ್ಲ ಸತ್ಕರ್ಮಗಳನ್ನು ಭಗವಂತನಲ್ಲಿ ಅರ್ಪಣೆ ಮಾಡಬೇಕು. ನಮ್ಮಿದ ಮಾಡಿದ ಎಲ್ಲ ಕಾರ್ಯಗಳು ಭಗವಂತನ ಅನುಗ್ರಹ ಮತ್ತು ಅವನೇ ಮಾಡಿಸಿದ್ದು ಎಂದು ತಿಳಿಯಬೇಕು ಎಂದರು.

ಜಗತ್ತೆಂಬ ವಿಶಾಲ ವೃಕ್ಷ ದ ಪತ್ರಗಳೆಂದು ವೇದಗಳನ್ನು ವರ್ಣಿಸಿದ್ದಾರೆ. ವೇದಾಧ್ಯಯನ ಮಾಡಿ ವೇದ ಕುಸುಮದ ಜ್ನಾನ ಮಧುವನ್ನು ತನ್ನಲ್ಲಿ ಸಂಗ್ರಹಿಸಿ, ಸಜ್ಜನರಲ್ಲಿ ಅದರ ವಿತರಣೆ ಮಾಡುವದೇ ಪತ್ರ ಸಮರ್ಪಣೆ ಎನಿಸುತ್ತದೆ ಎಂದರು.

ಭಗವಂತನ ತನ್ನ ಸ್ವರೂಪವನ್ನು ತಾನೇ ಹೇಳಿಕೊಳ್ಳುತ್ತಾನೆ (ಭಗವದ್ಗೀತಾ 15) ಭಗವಂತನ ಸ್ವರೂಪವನ್ನು ಸೂರ್ಯ, ಚಂದ್ರ, ಅಗ್ನಿ ಯಾರು ತೋರಿಸಲು ಶಕ್ತರಲ್ಲ ಮತ್ತು ಅದನ್ನು ಹೊಂದಿದವನು ಮತ್ತೆ ತಿರುಗಿ ಸಂಸಾರಕ್ಕೆ ಬರುವುದಿಲ್ಲ. ಅಂತಹ ಉತ್ತಮ ಸ್ವರೂಪ ನನ್ನದು. ಭಗವಂತನ್‌; ಕಿವಿ, ಕಣ್ಣು, ಚರ್ಮ, ನಾಲಿಗೆ - ಪಂಚೇಂದ್ರಿಂಯಗಳು ಹಾಗೂ ಮನಸ್ಸುಗಳನ್ನು ತಮ್ಮ ತಮ್ಮ ವಿಷಯಗಳನ್ನು ಪ್ರವೃತ್ತಿ ಮಾಡುವಂತೆ ಪ್ರೇರಿಸಿ ಶಬ್ದಾದಿ ವಿಷಯಗಳನ್ನು ಭೋಗಿಸುವಂತೆ ಮಾಡುತ್ತಾನೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ರಘೋತ್ತಮ ಅವಧಾನಿ, ಕೃಷ್ಣ ಹುನಗುಂದ, ವೆಂಕಟೇಶ ಕುಲಕರ್ಣಿ, ಗೋಪಾಲಾಚಾರ್ಯ ಹರಿಹರ, ಜಯತೀರ್ಥಾಚಾರ್ಯ ಬಲ್ಲರವಾಡ, ವಿಠ್ಠಲ ಅಂಬೇಕರ, ಆಶೋಕ ಕುಲಕರ್ಣಿ, ರಾಘವೇಂದ್ರ ಮುಂಡಗೋಡ, ಸಂಜೀವ ಗೋಳಸಂಗಿ, ವೆಂಕಟೇಶ ಶಿರೋಳ, ಜಿ.ಕೆ.ಜೋಶಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ